Uncategorized

ಸುಳ್ಯ : ನಿವೇದಿತಾ ಮಹಿಳಾ ಜಾಗ್ರತಿ ಸೇವಾ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಆ.11ರಂದು ರಕ್ಷಾ ಬಂಧನ ಕಾರ್ಯಕ್ರಮ ಸುಳ್ಯದ ವಿವಿಧ ಕಡೆಗಳಲ್ಲಿ ಆಚರಿಸಲಾಯಿತು . ಗಣೇಶ್ ಪ್ರಿಂಟರ್ಸ್ ಸುಳ್ಯ ,ಭಟ್ ಎಸೋಸಿಯೇಟ್ ಲೆಕ್ಕ ಪರಿಶೋಧಕರ ಕಚೇರಿ, ಸರಕಾರಿ ಆಸ್ಪತ್ರೆ ಮತ್ತು ಪ್ರೆಸ್ ಕ್ಲಬ್ ಸುಳ್ಯ, ಇಲ್ಲಿ ರಕ್ಷಾ ಬಂಧನ ಆಚರಿಸಿಕೊಳ್ಳಲಾಯಿತು ಎಲ್ಲರಿಗೂ ರಾಖಿ ಕಟ್ಟಿ ಸಿಹಿ ಹಂಚಲಾಯಿತು. ಮತ್ತು ಸರಕಾರಿ ಆಸ್ಪತ್ರೆ ಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ನೀಡಿ ರಾಖಿ ಕಟ್ಟುವುದರ ಮುಖಾಂತರ ರಕ್ಷಾ ಬಂಧನ ಆಚರಿಸಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಟ್ರಸ್ಟ್ […]

ಸುಳ್ಯ : ನಿವೇದಿತಾ ಮಹಿಳಾ ಜಾಗ್ರತಿ ಸೇವಾ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ Read More »

ಅರಂತೋಡು : ರಕ್ಷಾ ಬಂಧನ ಕಾರ್ಯಕ್ರಮ

ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಗುತ್ತಿಗಾರು ಮಹಾ ಶಕ್ತಿ ಕೇಂದ್ರದ ಮಹಿಳಾ ಪ್ರಮುಖ ಮತ್ತು ಮಹಿಳಾ ಮೋರ್ಚದ ಕಾರ್ಯದರ್ಶಿ ಭಾರತಿ ಪುರುಷೋತ್ತಮ್, ಬೂತ್ ಅಧ್ಯಕ್ಷರಾದ ಅಧ್ಯಕ್ಷರಾದ ಕಿಶೋರ್ ಕುಮಾರ್ UM, ನಿವೃತ್ತ ಶಿಕ್ಷಕಿ ಗಂಗಮ್ಮ, ಹಾಲು ಡೈರಿ ಅಧ್ಯಕ್ಷರಾದ ಮೋಹನ್ ಮತ್ತು ಪದಾಧಿಕಾರಿಗಳು, ಸಂಘದ ಕಾರ್ಯದರ್ಶಿ ವಿಮಲಾ ಸುಮಾಶೇಖರ್, ಮತ್ತು ಗ್ರಾಮದ ಹಿರಿಯ ಕಿರಿಯ ಕಾರ್ಯಕರ್ತರು ಭಾಗವಹಿಸಿದ್ದರು .

ಅರಂತೋಡು : ರಕ್ಷಾ ಬಂಧನ ಕಾರ್ಯಕ್ರಮ Read More »

ಸುಳ್ಯ : ಬೀದಿ ನಾಟಕ‌ ಪ್ರದರ್ಶನ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ಇದರ ಸಹಯೋಗದಲ್ಲಿ ದಿನಾಂಕ 11-08-2025ರಂದು ವಿಶ್ವ ಅಂಗದಾನ ದಿನಾಚರಣೆಯ ಕುರಿತು ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಅಂಗದಾನದ ಜಾಗೃತಿ ಮೂಡಿಸುವ ಸಲುವಾಗಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಚನಾ ಶಾರೀರ ವಿಭಾಗದ ಮುಂದಾಳತ್ವದಲ್ಲಿ, ಎನ್.ಎಂ.ಸಿ ಕಾಲೇಜಿನ ಐ.ಕ್ಯೂ.ಏ.ಸಿ ವಿಭಾಗ ಹಾಗೂ ಎನ್. ಎಂ.ಸಿ. ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ ಬೀದಿ ನಾಟಕ ಪ್ರದರ್ಶನವನ್ನು

ಸುಳ್ಯ : ಬೀದಿ ನಾಟಕ‌ ಪ್ರದರ್ಶನ Read More »

ರೈತನ ಜೀವ ತೆಗೆದ ಪುಂಡಾನೆಯನ್ನು ತಕ್ಷಣ ಸೆರೆ ಹಿಡಿದು ಸ್ಥಳಾಂತರಿಸಿ : ಕೆ.ಜಿ ಬೋಪಯ್ಯ

ಚೆಂಬು ಗ್ರಾಮದ ದಬ್ಬಡ್ಕದಲ್ಲಿ ರೈತನ ಪ್ರಾಣ ತೆಗೆದ ಪುಂಡಾನೆಯನ್ನು‌ ಅರಣ್ಯ ಇಲಾಖೆ ತಕ್ಷಣ ಸೆರೆ ಹಿಡಿದು ಸ್ಥಳಾಂತರಿಸಬೇಕು,ಆನೆಯನ್ನು‌ ಸೆರೆ ಹಿಡಿಯದಿದ್ದರೆ ಪ್ರತಿಭಟನೆ ನಿಲ್ಲದು ಎಂದು ಮಾಜಿ ಸ್ವೀಕರ್ ಕೆ.ಜಿ ಬೋಪಯ್ಯ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.ಅವರು ಕಳೆದ ವಾರ ಚೆಂಬು ಗ್ರಾಮದ ದಬ್ಬಡ್ಕ ಕೊಪ್ಪದಲ್ಲಿ ಕೃಷಿಕರೊಬ್ಬರನ್ನು ಪುಂಡಾನೆ ತುಳಿದು ಕೊಂದಿರುವ ಹಿನ್ನಲೆಯಲ್ಲಿ ಕಾಡಾನೆಗಳನ್ನು‌ ಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಸಂಪಾಜೆ ವಲಯಾರಣ್ಯಧಿಕಾರಿ ಕಚೇರಿ ಎದುರು ಸೋಮವಾರ ಕೊಡಗು ಸಂಪಾಜೆ ಹೋಬಳಿ ನಾಗರೀಕ ಹಿತಾರಕ್ಷಣಾ ವೇದಿಕೆ ನೇತ್ರತ್ವದಲ್ಲಿ ನಡೆದ

ರೈತನ ಜೀವ ತೆಗೆದ ಪುಂಡಾನೆಯನ್ನು ತಕ್ಷಣ ಸೆರೆ ಹಿಡಿದು ಸ್ಥಳಾಂತರಿಸಿ : ಕೆ.ಜಿ ಬೋಪಯ್ಯ Read More »

ಸಂಪಾಜೆ : ಪರಿಶಿಷ್ಟ ಜಾತಿ ರೈತರಿಗೆ ಮೀನು ಸಾಕಾಣಿಕೆ ಹಾಗೂ ಮೀನಿನ ಮೌಲ್ಯವರ್ಧನೆ ತರಬೇತಿ ಉದ್ಘಾಟನೆ

ಸಂಪಾಜೆ: ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ಮಟ್ಟದ ಒಕ್ಕೂಟದ ಸಂಜೀವಿನಿ ಕಚೇರಿಯಲ್ಲಿ ಆ.11ರಂದು ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ( ವಾಣಿಜ್ಯ ಮತ್ತು ಕೈಗಾರಿಕಾ ಸಚಿವಲಯ ಭಾರತ ಸರ್ಕಾರ) ಪ್ರಾದೇಶಿಕ ವಿಭಾಗ ಮಂಗಳೂರು ಇವರಿಂದ ಪರಿಶಿಷ್ಟ ಜಾತಿ ರೈತರಿಗೆ ಮೀನು ಸಾಕಾಣಿಕೆ ಹಾಗೂ ಮೀನಿನ ಮೌಲ್ಯವರ್ಧನೆ ಕುರಿತಾದ ತರಬೇತಿಯು ಒಕ್ಕೂಟದ ಅಧ್ಯಕ್ಷರಾದ ದೇವಕಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಸುಬ್ರಹ್ಮಣ್ಯನ್ ಸಹಾಯಕ ನಿರ್ದೇಶಕರು MPEDA ಮಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಅಡಿಕೆಗೆ

ಸಂಪಾಜೆ : ಪರಿಶಿಷ್ಟ ಜಾತಿ ರೈತರಿಗೆ ಮೀನು ಸಾಕಾಣಿಕೆ ಹಾಗೂ ಮೀನಿನ ಮೌಲ್ಯವರ್ಧನೆ ತರಬೇತಿ ಉದ್ಘಾಟನೆ Read More »

ಚೆಂಬು :   ಪುಂಡಾನೆ ಸೆರೆ ಹಿಡಿಯಲು   ಸರಕಾರದಿಂದ ಅನುಮತಿ

ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಕಾಡಾನೆ ದಾಳಿಯಿಂದ ರೈತನೊಬ್ಬ ಮೃತಪಟ್ಟ ಹಿನ್ನೆಲೆ ದಾಳಿಕೋರ ಆನೆ ಪತ್ತೆ ಕಾರ್ಯಚರಣೆಯನ್ನು ಅರಣ್ಯ ಇಲಾಖೆಯವರು ತೀವ್ರಗೊಳಿಸಿದ್ದಾರೆ.ಆನೆ ಸೆರೆ ಹಿಡಿಯಲು ಬೇಕಾದ ಅನುಮತಿಯನ್ನು ಇಂದು ರಾಜ್ಯ ಸರ್ಕಾರವೇ ಮೌಖಿಕವಾಗಿ ನೀಡಿದ್ದು, ನಾಳೆ ಸರಕಾರದಿಂದ ಅಧಿಕೃತ ಅನುಮತಿ ಪತ್ರ ಸಿಗಲಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಚೆಂಬು :   ಪುಂಡಾನೆ ಸೆರೆ ಹಿಡಿಯಲು   ಸರಕಾರದಿಂದ ಅನುಮತಿ Read More »

ತೊಡಿಕಾನ : ಅಡಿಗಾರ ಶೇಷಪ್ಪ ಗೌಡ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡಿಗಾರ ಶೇಷಪ್ಪ ಗೌಡ(76) ಅಲ್ಪ ಕಾಲದ ಅಸೌಖ್ಯದಿಂದ ಆ.10ರಂದು ತಮ್ಮ ಮನೆಯಲ್ಲಿ ನಿಧನರಾದರು.ಮ್ರತರು ಪತ್ನಿ ಉದಯಕುಮಾರಿ,ಮಕ್ಕಳಾದ ಚಂದ್ರಕಲಾ,ನಳೀನಿ,ಶ್ಯಾಮಲ,ಅಳಿಯಂದಿರನ್ನು,ಮೊಮ್ಮಕ್ಕಳನ್ನು ಸಹೋದರಿಯರನ್ನು ಕುಟುಂಬಸ್ಥರನ್ನು,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸೋಮವಾರ ಮ್ರತರ ಅಂತ್ಯ ಸಂಸ್ಕಾರ ನಡೆಯಲಿದೆ.

ತೊಡಿಕಾನ : ಅಡಿಗಾರ ಶೇಷಪ್ಪ ಗೌಡ ನಿಧನ Read More »

ಅರೆಭಾಷೆಗೆ ರಾಜ್ಯಮಟ್ಟದ ಮನ್ನಣೆ : ಸದಾನಂದ ಮಾವಜಿ

ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಅರೆಭಾಷಿಕರ ಸಾಹಿತ್ಯ ಸಂಸ್ಕೃತಿಗಳ ನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದ್ದು ಇದು ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು,ಅರೆಭಾಷೆಗೆ ಇಂದು ರಾಜ್ಯಮಟ್ಟದಲ್ಲಿ ಮನ್ನಣೆ ದೊರೆತ್ತಿದೆ‌ ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.ಅವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಆ.10ರಂದು ನಡೆದ

ಅರೆಭಾಷೆಗೆ ರಾಜ್ಯಮಟ್ಟದ ಮನ್ನಣೆ : ಸದಾನಂದ ಮಾವಜಿ Read More »

ಅಡ್ಕಾರು : ಅರೆಭಾಷೆ ಜಂಬರ ಆಟಿ ಕೂಟ ಕಾರ್ಯಕ್ರಮ ಉದ್ಘಾಟನೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಜಂಬರ ಆಟಿಕೂಟ ಕಾರ್ಯಕ್ರಮ ಆ. 10ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.ಪ್ರಗತಿಪರ ಕೃಷಿಕ ಎ.ಆರ್.ಗಂಗಾಧರ ಗೌಡ ಅಡ್ಕಾರುರವರು ಜಂಬರಕ್ಕೆ ಚಾಲನೆ ನೀಡಿ ಆಟಿ ಆಚರಣೆ ನಮ್ಮ ಬದುಕನ್ನು ಮತ್ತೆ ಹಿಂದಿರುಗಿ ನೋಡುವ ಪ್ರಯತ್ನ ಎಂದರು.ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿ ಮಾತನಾಡಿ,

ಅಡ್ಕಾರು : ಅರೆಭಾಷೆ ಜಂಬರ ಆಟಿ ಕೂಟ ಕಾರ್ಯಕ್ರಮ ಉದ್ಘಾಟನೆ Read More »

ಮಕ್ಕಳನ್ನು ಮಕ್ಕಳಂತೆ ನೋಡಿ; ಪ್ರತಿಷ್ಠೆಯ ಸರಕುಗಳಂತಲ್ಲ !

ಕೆಲ ದಿನಗಳ ಹಿಂದೆ ಬಾಲಕನೊಬ್ಬ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡದ್ದು ಸುದ್ದಿಯಾಯಿತು. 14 ವರ್ಷಗಳ ಕಾಲ ಚೆನ್ನಾಗಿದ್ದೆ, ಮುಂದೆ ಸ್ವರ್ಗದಲ್ಲಿ ಚೆನ್ನಾಗಿರುತ್ತೇನೆ ಎಂಬ ಆತನ ಡೆತ್‌ನೋಟ್ ಮತ್ತು ಆ ಮುಖ ನೋಡಿದಾಗ ಎಂತವರಿಗೂ ಒಂದು ಕ್ಷಣ ನೋವಾಗದೇ ಇರದು. ಇಷ್ಟು ಸಣ್ಣ ವಯಸ್ಸಿನಲ್ಲಿ ಇಂತಹ ದುಡುಕಿನ ನಿರ್ಧಾರಕ್ಕೆ ಕಾರಣವಾದರೂ ಏನಾಗಿರಬಹುದು ಎಂಬುದು ತಿಳಿಯದು. ಮಕ್ಕಳ ಮನಸ್ಸೇ ದುರ್ಬಲವೇ? ಅಥವಾ ತಡೆದುಕೊಳ್ಳಲಾಗದ ಒತ್ತಡಗಳೇ?ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಕೆಳ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಕೊಲೆ ಮಾಡಿರುವ ವಿಚಾರ ಇಂದು ಬೆಳಗ್ಗೆಯಷ್ಟೇ

ಮಕ್ಕಳನ್ನು ಮಕ್ಕಳಂತೆ ನೋಡಿ; ಪ್ರತಿಷ್ಠೆಯ ಸರಕುಗಳಂತಲ್ಲ ! Read More »

error: Content is protected !!
Scroll to Top