Uncategorized

ಬೈಕ್ ಡಿಕ್ಕಿ ಹೊಡೆದು ಮಹಿಳೆ ಸಾವು

ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಭಾನುವಾರ ಕಲ್ಲುಗುಂಡಿಯಿಂದ ವರದಿಯಾಗಿದೆ.ಸಂಪಾಜೆ ಬೈಲು ನಿವಾಸಿ ಕೊ. ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕುಮಾ‌ರ್ ಚೆದ್ಮಾರ್‌ರವರ ತಾಯಿ ಕಮಲ ಚಿದ್ಕಾರ್ (67 ವರ್ಷ) ರವರು ಕಲ್ಲುಗುಂಡಿಯ ಅಂಚೆ ಕಚೇರಿಯ ಬಳಿ ಬಸ್ ತಂಗುದಾಣದಿಂದ ಸಂಪಾಜೆ ಕಡೆ ಹೋಗುವ ಬಸ್ ಹತ್ತಲು ರಸ್ತೆ ದಾಟುತ್ತಿದ್ದ ವೇಳೆ, ಅದೇ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಕೇರಳ ಮೂಲದ ಬೈಕ್ ನಿಯಂತ್ರಣ ತಪ್ಪಿ ಅವರಿಗೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಮಹಿಳೆಗೆ ಗಂಭೀರ […]

ಬೈಕ್ ಡಿಕ್ಕಿ ಹೊಡೆದು ಮಹಿಳೆ ಸಾವು Read More »

ಆಗಸ್ಟ್ 3ಕ್ಕೆ ಗೌಡರ ಯುವ ಸೇವಾ ಸಂಘದಿಂದ ಆಟಿ ಆಚರಣೆ ಸಂಭ್ರಮ‌ ಕಾರ್ಯಕ್ರಮ

ಸುಳ್ಯ ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಟಕ ತರುಣ ಘಟಕದ ಆಶ್ರಯದಲ್ಲಿ ಈ ಬಾರಿ 13ನೇ ವರ್ಷದ ಆಟಿ ಆಚರಣೆಯ ಸಂಭ್ರಮವುಆ. 3 ರಂದು ಸುಳ್ಯದ ಕೋಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಲಿದೆ ಎಂದು ಸಂಘಟನೆಯ ನಗರ ಸಮಿತಿ ಸದಸ್ಯ ರಾಕೇಶ್ ಕುಂಟಿಕಾನ ತಿಳಿಸಿದ್ದಾರೆ.ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸಮಾಜ ಬಾಂಧವರನ್ನು ಒಟ್ಟು ಸೇರಿಸಿಕೊಂಡು ಮಕ್ಕಳು ಮಹಿಳೆಯರು ಹಾಗೂ

ಆಗಸ್ಟ್ 3ಕ್ಕೆ ಗೌಡರ ಯುವ ಸೇವಾ ಸಂಘದಿಂದ ಆಟಿ ಆಚರಣೆ ಸಂಭ್ರಮ‌ ಕಾರ್ಯಕ್ರಮ Read More »

ಕಲ್ಚೆರ್ಪೆ : ತ್ಯಾಜ್ಯ ವಿಲೇವಾರಿ ಘಟಕ್ಕೆ ಪೊನ್ನಣ್ಣ ಭೇಟಿ,ಪರಿಶೀಲನೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯರ ಕಾನೂನು ಸಲಹೆಗಾರ ಪೊನ್ನಣ್ಣರವರು ಸ್ಥಳೀಯರ ಮನವಿ ಮೇರೆಗೆ ಶನಿವಾರ ಕಲ್ಬರ್ಪೆ ಕಸ ವಿಲೆವಾರಿ ಬರ್ನಿಂಗ್ ಸೆಂಟರ್ ಘಟಕಕ್ಕೆ ಭೇಟಿ ನೀಡಿ ಪರಿಸರ ವೀಕ್ಷಣೆ ಮಾಡಿದ್ದಾರೆ. ಕಲ್ಬರ್ಪೆ ಹೋರಾಟ ಸಮಿತಿಯ ಸದಸ್ಯ ಅಶೋಕ್ ಪೀಚೆ ಅವರ ಮನವಿ ಮೇರೆಗೆ ಶಾಸಕರು ಆಟೋರಿಕ್ಷಾದಲ್ಲಿಯೇ ಸ್ಥಳ ಕ್ಕೆ ತೆರಳಿ ಘಟಕವನ್ನು ವೀಕ್ಷಣೆ ಮಾಡಿದ್ದಾರೆ.ಬಳಿಕ ಮಾತಾಡಿದ ಅವರು ಯಾವುದೇ ಕಾರಣಕ್ಕೂ ಕಸದೊಂದಿಗೆ ಇರುವ ಪ್ಲಾಸ್ಟಿಕ್ ಗಳನ್ನು ಬೆಂಕಿಯಿಂದ ಉರಿಸುವು ದು

ಕಲ್ಚೆರ್ಪೆ : ತ್ಯಾಜ್ಯ ವಿಲೇವಾರಿ ಘಟಕ್ಕೆ ಪೊನ್ನಣ್ಣ ಭೇಟಿ,ಪರಿಶೀಲನೆ Read More »

ಅರಂತೋಡು : ಕಸಾಪ ಸುಳ್ಯ ಹೋಬಳಿ ಘಟಕದಿಂದ ಗಾನ – ಕತಾ – ಯಾನ 7ನೇ ಸರಣಿ ಕಾರ್ಯಕ್ರಮ

ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕವು ಹಮ್ಮಿಕೊಂಡಿರುವ “ಚಿಣ್ಣರೊಂದಿಗೆ ಚಿಲಿಪಿಲಿ ಗಾನ – ಕತಾ -ಯಾನ” ಸರಣಿ ಕಾರ್ಯಕ್ರಮದ ಏಳನೇ ಕಾರ್ಯಕ್ರಮವು ಶನಿವಾರದಂದು ಸುಳ್ಯ ತಾಲೂಕಿನ ಅರಂತೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾವನಾ ಸಂಗೀತ ಶಾಲೆಯ ಸಂಚಾಲಕರಾದ ಶ್ರೀ ಕೆ.ಆರ್. ಗೋಪಾಲಕೃಷ್ಣ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ

ಅರಂತೋಡು : ಕಸಾಪ ಸುಳ್ಯ ಹೋಬಳಿ ಘಟಕದಿಂದ ಗಾನ – ಕತಾ – ಯಾನ 7ನೇ ಸರಣಿ ಕಾರ್ಯಕ್ರಮ Read More »

ಮರದ ಗೆಲ್ಲು ದೇಹದ ಮೇಲೆ ಬಿದ್ದು ಮಹಿಳೆ ಸಾವು

ಭಾರೀ ಗಾಳಿ ಮಳೆಗೆ ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಮರ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಭಾನುವಾರ ವರದಿಯಾಗಿದೆ. ದಿ. ಗೋಪಾಲ ಭಂಡಾರಿ ಅವರ ಪತ್ನಿ ರುಕ್ಕಿಣಿ ಮೃತಪಟ್ಟವರು ಎಂದು ತಿಳಿದು ಬಂದಿದೆ.ರುಕ್ಕಿಣಿ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದು, ಇಂದು ಮುಂಜಾನೆ ಮನೆಯಿಂದ ಹೊರಗಡೆ ಕೆಲಸ ಮಾಡುತ್ತಿರುವಾಗ ಗಾಳಿ ಮಳೆಯ ಪರಿಣಾಮವಾಗಿ ಮನೆ ಸಮೀಪವಿದ್ದ ಮರದ ಗೆಲ್ಲು ತುಂಡಾಗಿ ಇವರ ಮೇಲೆ ಬಿದ್ದಿತು. ರುಕ್ಕಿಣಿಯವರು ಮರದಡಿಗೆ ಸಿಲುಕಿ ಮೃತಪಟ್ಟರು. ಊರವರಿಗೆ ವಿಷಯ ತಿಳಿದು ಪೊಲೀಸರಿಗೆ

ಮರದ ಗೆಲ್ಲು ದೇಹದ ಮೇಲೆ ಬಿದ್ದು ಮಹಿಳೆ ಸಾವು Read More »

ಎಸ್.ಐ.ಟಿ ತಂಡ ಧರ್ಮಸ್ಥಳಕ್ಕೆ ಆಗಮನ

ಹಲವಾರು ಶವಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 25 ರಂದು ರಾತ್ರಿ ಎಸ್.ಐ.ಟಿ ಅಧಿಕಾರಿಗಳು ಧರ್ಮಸ್ಥಳ ಠಾಣೆಗೆ ಆಗಮಿಸಿ ಪ್ರಕರಣದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.ಎಸ್.ಐ.ಟಿ ತಂಡದ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾ‌ರ್ ದಯಾಮ, ಡಿಎಸ್ಪಿ ಲೋಕೇಶ್, ಇನ್ಸೆಕ್ಟರ್ ಮಂಜುನಾಥ್ ಹಾಗೂ ಇತರ ಇಬ್ಬರು ಸಿಬ್ಬಂದಿ ಧರ್ಮಸ್ಥಳ ಠಾಣೆಗೆ ಆಗಮಿಸಿ ಸುಮಾರು 2 ಗಂಟೆಗಳ ದಾಖಲೆ ಬಗ್ಗೆ ಮಾಹಿತಿ ಪಡೆದುಕೊಂಡು ಧರ್ಮಸ್ಥಳ ಠಾಣೆಯ ಪಿ.ಎಸ್.ಐ ಸಮರ್ಥ್ ಅವರಿಂದ ದಾಖಲೆಗಳನ್ನು ಪಡೆದುಕೊಂಡು ಹೋದರು

ಎಸ್.ಐ.ಟಿ ತಂಡ ಧರ್ಮಸ್ಥಳಕ್ಕೆ ಆಗಮನ Read More »

ಕೊಯನಾಡು : ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ವರು ಯುವಕರ ಗುರುತು ಪತ್ತೆ

ಅರಂತೋಡು : ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಯನಾಡು ಎಂಬಲ್ಲಿ ಶುಕ್ರವಾರ ನಡೆದಿದೆ.ಅಪಘಾತಕ್ಕೊಳಗಾದ ಕಾರು ಕೊಡಗು ಜಿಲ್ಲೆ ಗೋಣಿಕೊಪ್ಪದಾಗಿದ್ದು,ಮೃತರನ್ನು ರಹಮತುಲ್ಲಾರ ಪುತ್ರನಿಹಾದ್, ಅಜೀಜ್ ರವರ ಪುತ್ರ ರಿಷಾನ್, ಬಾಬು ರವರ ಪುತ್ರರಾಶಿಬ್ ಹಾಗೂ ನಜೀರ್ ರವರ ಪುತ್ರ ಅನೀಶ್ ಎಂದು ತಿಳಿದು ಬಂದಿದೆ.ಈ ನಾಲ್ವರು ಗೋಣಿಕೊಪ್ಪದಿಂದ ಉಳ್ಳಾಲಕ್ಕೆ ತೆರಳುತ್ತಿದ್ದರು. ಅತಿಯಾದ ವೇಗ ಅಪಘಾತಕ್ಕೆ ಕಾರಣವೆಂದು ಅಂದಾಜಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ

ಕೊಯನಾಡು : ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ವರು ಯುವಕರ ಗುರುತು ಪತ್ತೆ Read More »

ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ‌ ಸಾವು

ಕೊಡಗಿನ ಕೊಯನಾಡು ಸಮೀಪ ಲಾರಿ ಮತ್ತು ಕಾರಿನ ನಡುವೆ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು . ಸಾವನ್ನಪ್ಪಿದವರು ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಮೂಲದವರಾಗಿದ್ದಾರೆ‌. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ‌ ಸಾವು Read More »

ಲಾರಿ ಕಾರು ಭೀಕರ ಅಪಘಾತ ಇಬ್ಬರು ಸಾವು

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸಮೀಪ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪಗಪಿದ ಘಟನೆ ವರದಿಯಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಲಾರಿ ಕಾರು ಭೀಕರ ಅಪಘಾತ ಇಬ್ಬರು ಸಾವು Read More »

ನಾಪತ್ತೆಯಾಗಿದ್ದ ಆ್ಯಂಬುಲೆನ್ಸ್ ಚಾಲಕನ ಮೃತ ದೇಹ ಪತ್ತೆ

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಕಾರಿ ಆಂಬುಲೆನ್ಸ್‌ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಹೊನ್ನಪ್ಪ ದೇವರಗದ್ದೆ ರವರು ಜು.22 ರಂದು ನಾಪತ್ತೆಯಾಗಿದ್ದು ಅವರ ಮೃತ ದೇಹ ಇಂದು ಕುಮಾರಧಾರ ನದಿಯಲ್ಲಿ ಪತ್ತೆಯಾಗಿದೆ.ಕಾಣೆಯಾದ ಘಟನೆಯ ಬಗ್ಗೆ ಅವರ ಪತ್ನಿ ಪ್ರೇಮ ಅವರ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಿಸಿ ಕ್ಯಾಮರಾ ಪರಿಶೀಲನೆ ವೇಳೆ ಅವರು ಹೊಳೆ ಬದಿ ತೆರಳಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಲೀಸರು ಹಾಗೂ ಸ್ಥಳೀಯರು ಮೂರು ದಿನದಿಂದ ಹುಡುಕಾಟ ನಡೆಸುತ್ತಿದ್ದರು.ಇದೀಗ ನಾಪತ್ತೆಯಾಗಿದ್ದ ಅಂಬ್ಯುಲೆನ್ಸ್ ಚಾಲಕ

ನಾಪತ್ತೆಯಾಗಿದ್ದ ಆ್ಯಂಬುಲೆನ್ಸ್ ಚಾಲಕನ ಮೃತ ದೇಹ ಪತ್ತೆ Read More »

error: Content is protected !!
Scroll to Top