Uncategorized

ಪ್ರಧಾನಿಮೋದಿ,ಗ್ರಹ ಸಚಿವರಿಗೆ ಅವಹೇಳನ ಪ್ರಕರಣ ದಾಖಲು

ಜುಲೈ 1 ರಂದು ಅಜಿ.ಎಂ.ಜೋಸ್ ಎಂಬವರ ವಾಟ್ಸಾಪ್ ಸ್ಟೇಟಸ್ ನಲ್ಲಿ ಭಾರತದ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸರ್ಕಾರದ ಗೃಹ ಮಂತ್ರಿಯ ಚಿತ್ರದೊಂದಿಗೆ ಮಧ್ಯದಲ್ಲಿ ಮಹಿಳೆಯೋರ್ವರ ನಗ್ನ ಫೋಟೋವನ್ನು ಅಳವಡಿಸಿ ಹಿಂದೂ ಧರ್ಮದ ದೇವರುಗಳ ಪೋಟೋಗಳನ್ನು ಬಿಂಬಿಸುವ ರೀತಿಯಲ್ಲಿ ಕಾರ್ಟೂನ್ ಚಿತ್ರ ಇರುವ ಫೋಟೋಗಳ ಕೆಳಗೆ ಶೀರ್ಷಿಕೆಯನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ, ದ್ವೇಷ ಭಾವನೆ ಮೂಡಿಸುವ ಪೋಸ್ಟ್ ನ್ನು ಉದ್ದೇಶ ಪೂರ್ವಕವಾಗಿ ಹಾಕಿದ್ದಾರೆನ್ನಲಾಗಿದೆ.ಈ ಬಗ್ಗೆ ವೇಣೂರು […]

ಪ್ರಧಾನಿಮೋದಿ,ಗ್ರಹ ಸಚಿವರಿಗೆ ಅವಹೇಳನ ಪ್ರಕರಣ ದಾಖಲು Read More »

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ವರ್ಗಾವಣೆ

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಅವರಿಗೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ.ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಸಭೆಯ ಕಚೇರಿ ವ್ಯವಸ್ಥಾಪಕರಾಗಿ ಅವರಿಗೆ ವರ್ಗಾವಣೆಯಾಗಿದೆ. ಇವರ ವರ್ಗಾವಣೆಯಿಂದ ತೆರವಾಗಿರುವ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಹುದ್ದೆಗೆ ಯಾರು ವರ್ಗಾಣೆಗೊಂಡು ಬರುತ್ತಾರೆ ಎಂದು ತಿಳಿದು ಬಂದಿಲ್ಲ.ಸುಧಾಕರ ಎಂ.ಎಚ್.ಅವರು ಕಳೆದ ಮೂರು ವರ್ಷದಿಂದ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ವರ್ಗಾವಣೆ Read More »

ಬಾವಿಗೆ ಬಿದ್ದು‌ ಮಹಿಳೆ ಸಾವು

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಬಂಟ್ರಬೈಲು ಎಂಬಲ್ಲಿ ಬಾಲಕೃಷ್ಣ ಎಂಬವರ ಪತ್ನಿ ದೇವಮ್ಮ (72) ಎಂಬವರು ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಸ್ಥಳಕ್ಕೆ ಅಗ್ನಿ ಶಾಮಕ ಮತ್ತು ಪೊಲೀಸರ ಸಿಬ್ಬಂದಿ ಆಗಮಿಸಿ ಶವವನ್ನು‌ ಮೇಲಕ್ಕೆ ಎತ್ತಿದರು ಎಂದು ತಿಳಿದು ಬಂದಿದೆ.

ಬಾವಿಗೆ ಬಿದ್ದು‌ ಮಹಿಳೆ ಸಾವು Read More »

ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಕ್ರಷಿ ಮೇಲ್ವಿಚಾರಕ ಭೀಕರ ಅಪಘಾತದಲ್ಲಿ ಸಾವು

ಟ್ಯಾಂಕ‌ರ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಷಿ ಮೇಲ್ವಿಚಾರಕ ಮೃತಪಟ್ಟಿರುವ ಘಟನೆ ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟು ಕ್ರಾಸ್ ಬಳಿ ನಡೆದಿದೆ.ಶಂಭೂರು ಕೊಪ್ಪಳ ನಿವಾಸಿ ಚಿದಾನಂದ (50) ಮೃತ ದುರ್ದೈವಿ.ಚಿದಾನಂದ ಅವರು ಬಿಸಿರೋಡು ಪೇಟೆಯಿಂದ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಕ್ರಾಸ್ ಮಾಡುವ ವೇಳೆ ಬಿಸಿರೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿದಾನಂದ ಅವರು ಬಂಟ್ವಾಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ

ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಕ್ರಷಿ ಮೇಲ್ವಿಚಾರಕ ಭೀಕರ ಅಪಘಾತದಲ್ಲಿ ಸಾವು Read More »

ಕಡೆಪಾಲದಲ್ಲಿ ಕೆ.ಎಸ್.ಆರ್.ಟಿ .ಸಿ ಬಸ್ಸು ಅಪಘಾತ

ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದ ಕಡೆಪಾಲ ಎಂಬಲ್ಲಿ KSRTC ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಬರೆಗೆ ಗುದ್ದಿ ವಾಲಿಕೊಂಡು ನಿಂತಿದೆ. ಇಂದು ಬೆಳಿಗ್ಗೆ ಈ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಲ್ಲದೇ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ.ಪ್ರಯಾಣಿಕರು ಚಿಕ್ಕ ಪುಟ್ಟ ಗಾಯಗೊಂಡಿದ್ದಾರೆ.

ಕಡೆಪಾಲದಲ್ಲಿ ಕೆ.ಎಸ್.ಆರ್.ಟಿ .ಸಿ ಬಸ್ಸು ಅಪಘಾತ Read More »

ಪೇಸ್ ಬುಕ್ ನಲ್ಲಿ ಜೈನ ಧರ್ಮಕ್ಕೆ ಮೋದಿಗೆ ಅವಹೇಳನ,ದೂರು ದಾಖಲು

ಫೇಸ್ ಬುಕ್ ನಲ್ಲಿ ಜೈನ ಧರ್ಮದ ಸ್ವಾಮೀಜಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅವಹೇಳನ ಮಾಡಲಾಗಿದೆ ಎಂದು ಪುತ್ತೂರಿನ ಪಡೂರು ಗ್ರಾಮದ ನಿವಾಸಿ ಜೀವಂದರ್‌ ಜೈನ್ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದಿನಾಂಕ 29-06-2025 ರಂದು ಸಂಜೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಅನ್ನು ನೋಡಿದ್ದಾಗ, “ಕರುನಾಡಿನ ಮಿನುಗುವ ನಕ್ಷತ್ರ” ಎಂಬ ಪೇಸ್ ಬುಕ್ ಪೇಜ್ ಹೊಂದಿರುವ ವ್ಯಕ್ತಿಯು, ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡುವ ವೇಳೆ, ಜೈನ ಧರ್ಮದ ಸ್ವಾಮೀಜಿಗೆ

ಪೇಸ್ ಬುಕ್ ನಲ್ಲಿ ಜೈನ ಧರ್ಮಕ್ಕೆ ಮೋದಿಗೆ ಅವಹೇಳನ,ದೂರು ದಾಖಲು Read More »

ಆಲೆಟ್ಟಿ ಶಾಲೆಗೆ ಚೈತನ್ಯ ಸೇವಾಶ್ರಮದಿಂದ ಉಚಿತ ಪುಸ್ತಕ ವಿತರಣೆ

23/06/2025 ಸೋಮವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ ಇಲ್ಲಿ ಪ್ರಥಮ ಪೋಷಕರ ಸಭೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಶ್ರೀ ಶ್ರೀ ಸ್ವಾಮಿ ಯೋಗೇಶ್ವರನಂದ ಸರಸ್ವತಿ, ಚೈತನ್ಯ ಸೇವಾ ಶ್ರಮ ಅಜ್ಜಾವರ ಇವರ 223 ನೇ ಕೃತಿ ಮನಸಿನಂತೆ ಮಾನವನು ಕೃತಿಯನ್ನು ಸರಕಾರಿ ಪ್ರೌಢಶಾಲೆ ಆಲೆಟ್ಟಿ ಇಲ್ಲಿಯ ಮುಖ್ಯ ಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಇವರು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರಕಾಶ ಮುಡಿತ್ತಾಯ ಉಪ ಪ್ರಾಂಶುಪಾಲರು

ಆಲೆಟ್ಟಿ ಶಾಲೆಗೆ ಚೈತನ್ಯ ಸೇವಾಶ್ರಮದಿಂದ ಉಚಿತ ಪುಸ್ತಕ ವಿತರಣೆ Read More »

ಬಸ್ಸು ನಿಲ್ದಾಣದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು

ಸುಬ್ರಹ್ಮಣ್ಯ ಕೆ.ಎಸ್.ಆರ್.ಸಿ ಬಸ್ ನಿಲ್ದಾಣದಲ್ಲಿ ಹೃದಯಾಘಾತವಾಗಿ ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ವರದಿಯಾಗಿದೆ.ಐನೆಕಿದು ಗ್ರಾಮದ ಕುಜುಂಬಾರು ನಿವಾಸಿ ಡೀಕಯ್ಯ ಉಪ್ಪಳಿಕೆ ಎಂಬವರುಹೃದಯಾಘಾತವಾಗಿ ಮ್ರತಪಟ್ಟ ವ್ಯಕ್ತಿಯಾಗಿದ್ದಾರೆ.ಅವರನ್ನು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತಾದರೂ ಅದಾಗಲೇ ಅವರು ಮೃತ ಪಟ್ಟಿದ್ದರೆನ್ನಲಾಗಿದೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವೇದಾವತಿ, ತಾಯಿ ಶಿವಮ್ಮ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

ಬಸ್ಸು ನಿಲ್ದಾಣದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು Read More »

ವಿದ್ಯುತ್ ತಗುಲಿ‌ ಕ್ರಷಿ ಕಾರ್ಮಿಕ ಸಾವು

ಅಡಿಕೆಗೆ ಔಷಧಿ ಸಿಂಪಡಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಲೈನ್‌ಗೆ ದೋಟಿ ತಗುಲಿ ಕ್ರಷಿ ಕಾರ್ಮಿಕರೊರ್ವರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಪರ್ಕಳ ಎಂಬಲ್ಲಿ ಜೂ.28ರಂದು ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಅರಸಿನಮಕ್ಕಿ ಸಮೀಪದ ಉಡೈರೆ ನಿವಾಸಿ ಕೃಷ್ಣಪ್ಪ ಕುಲಾಲ್(49ವ.) ಎಂದು ಗುರುತಿಸಲಾಗಿದೆ. ಅವರು ರೆಖ್ಯ ಗ್ರಾಮದ ಪರ್ಕಳ ಎಂಬಲ್ಲಿ ತೋಟವೊಂದರಲ್ಲಿ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುತ್ತಿರುವ ಸಂದರ್ಭ ದೋಟಿ ತೋಟದಲ್ಲಿ ಹಾದು ಹೋಗಿದ್ದ ಎಚ್‌ಟಿ ಲೈನ್‌ಗೆ ಸ್ಪರ್ಶಿಸಿದೆ. ಇದರಿಂದಾಗಿ ಕೃಷ್ಣಪ್ಪ ಕುಲಾಲ್ ಅವರು ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ.

ವಿದ್ಯುತ್ ತಗುಲಿ‌ ಕ್ರಷಿ ಕಾರ್ಮಿಕ ಸಾವು Read More »

ಸುಳ್ಯ ವಿಧಾನ‌ ಸಭಾ ಕ್ಷೇತ್ರಕ್ಕೆ ಕಾಲು ಸಂಕ ನಿರ್ಮಾಣಕ್ಕೆ ಒಂದು ಕೋಟಿ‌ ಅನುದಾನ ಮಂಜೂರು

ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 4 ಕಡೆ ಕಾಲು ಸಂಕ ನಿರ್ಮಾಣಕ್ಕೆ ಸರಕಾರದಿಂದ ರೂ.1 ಕೋಟಿ ಅನುದಾನ ಮಂಜೂರುಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಎಡಮಂಗಲ ಗ್ರಾಮದ ರಥಬೀದಿ ಅಳಕೆ ನಡುಬೈಲು ರಸ್ತೆಯ ಅಳಕೆ ಎಂಬಲ್ಲಿ ಕಾಲು ಸಂಕ ರೂ.25 ಲಕ್ಷ. ಜಾಲ್ಲೂರು ಗ್ರಾಮದ ಗಬ್ಬಲಡ್ಕ ವಿನೋಬಾನಗರ ರಸ್ತೆಯ ಗಬಲಡ್ಕ ಎಂಬಲ್ಲಿ ಕಾಲು ಸಂಕ ರೂ.20 ಲಕ್ಷ.ಮರ್ಕಂಜ ಗ್ರಾಮದ ಪುರ ಸಿರಿಪ್ರಸಾದ್ ಬಳಿ ಕಿರು ಸೇತುವೆ ನಿರ್ಮಾಣಕ್ಕೆ ರೂ.20 ಲಕ್ಷ.ನೂಜಿಬಾಳ್ತಿಲ ಗ್ರಾಮದ ರೆಂಜಲಾಡಿ – ನೂಜಿ ರಸ್ತೆಯ

ಸುಳ್ಯ ವಿಧಾನ‌ ಸಭಾ ಕ್ಷೇತ್ರಕ್ಕೆ ಕಾಲು ಸಂಕ ನಿರ್ಮಾಣಕ್ಕೆ ಒಂದು ಕೋಟಿ‌ ಅನುದಾನ ಮಂಜೂರು Read More »

error: Content is protected !!
Scroll to Top