ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿಗೆ ಮುತ್ತು ಕೊಟ್ಟ ಯುವಕನಿಗೆ ಪೊಲೀಸರಿಂದ ಹುಡುಕಾಟ ಆರಂಭ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೊಲೀಸರು ಕರೆ ತರುತ್ತಿರುವಾಗ ಆತನಿಗೆ ಯುವಕನೋರ್ವ ಮುತ್ತು ಕೊಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದ್ದಿ ವೈರಲ್ ಆಗುತ್ತಿದ್ದಂತೆ ಮುತ್ತು ಕೊಟ್ಟವನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.ಮುತ್ತು ಕೊಟ್ಟ ಯುವಕ ಉಜಿರೆ ನಿವಾಸಿ ಹೈದರ್ ನಿರ್ಸಾಲ್ ಮಗ ಸಹಲ್ ನಿರ್ಸಾಲ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಪೊಲೀಸರಿಂದ ಸಹಲ್ ನಿರ್ಸಾಲ್ ಗಾಗಿ ಹುಡುಕಾಟ ಮುಂದುವರಿದಿದೆ.
ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿಗೆ ಮುತ್ತು ಕೊಟ್ಟ ಯುವಕನಿಗೆ ಪೊಲೀಸರಿಂದ ಹುಡುಕಾಟ ಆರಂಭ Read More »








