ವೌಲ್ಯಯುತ ಶಿಕ್ಷಣ ನೀಡುವ ಮೂಲಕ ಪ್ರೀತಿ ಸಹ ಬಾಳ್ವೆಯಂತಹ ಮಾನವೀಯ ಗುಣಗಳನ್ನು ನೀಡುವ ಕಾರ್ಯವನ್ನು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ : ಪೀಟರ್‌ ಪೌಲ್ ಸಲ್ದಾನಾ

ವೌಲ್ಯಯುತ ಶಿಕ್ಷಣ ನೀಡುವ ಮೂಲಕ ಪ್ರೀತಿ ಸಹ ಬಾಳ್ವೆಯಂತಹ ಮಾನವೀಯ ಗುಣಗಳನ್ನು ನೀಡುವ ಕಾರ್ಯವನ್ನು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಆ ಕಾರಣದಿಂದಲೇ ಪೋಷಕರ ಅಭಿಮಾನಕ್ಕೆ ಪಾತ್ರವಾಗಿ ಇಂತಹ ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚು ಬೆಳೆಯುತ್ತಿವೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಹಾಗೂ ಮಂಗಳೂರು ಕೆಥೋಲಿಕ್ ಬೋರ್ಡ್ ಅಧ್ಯಕ್ಷ ರೆ.ಫಾ. ಡಾ.
ಪೀಟರ್‌ ಪೌಲ್ ಸಲ್ದಾನಾ ಹೇಳಿದರು.
ಸುಳ್ಯದ ಸಂತ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ರಜತ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಮಾತನಾಡಿ, ಗುಣ ಮಟ್ಟದ ಶಿಕ್ಷಣದ ಪಡೆದು ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಗಳಾಗಿ ಬೆಳೆಯಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರು ಉದ್ಯೋಗ ಪಡೆಯುವಂತಾಗಬೇಕು.
ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ.. ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಎಸ್ ಸಂಶುದ್ದೀನ್, ಸೈಂಟ್ ಜೋಸೆಫ್ ಎಜ್ಯುಕೇಶನಲ್ ಇನ್ ಸ್ಟಿಟ್ಯೂಷನ್ ಸ್ಥಾಪಕ ಫಾ. ಎಲ್ಯಾಸ್ ಡಿಸೋಜ, ಮಂಗಳೂರು ಸಿ.ಒ.ಡಿ.ಪಿ. ಕಾರ್ಯದರ್ಶಿ ಫಾ. ವಿನ್ಸೆಂಟ್ ಡಿಸೋಜ, ಬೆಂಗಳೂರು ಆ ರ್.ಎಫ್.ಟಿ.ಎಸ್. ಪ್ರೊವಿನ್ಮಲ್ ಸುಪೀರಿಯರ್ ರೆ. ಸಿಸ್ಟರ್ ಮೆರ್ಸಿ ಕುಟ್ಟ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಾಂಶುಪಾಲೆ ಸಿಸ್ಟ ರ್ ಮೇರಿ ಸ್ಟೆಲಾ,ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತಾ, ಸೈಂಟ್ ಬ್ರಿಜಿಡಸ್ ಚರ್ಚಿನ ಪ್ಯಾರಿಶ್ ಕೌನ್ಸಿಲ್ ಪೂರ್ವ ಉಪಾಧ್ಯಯಕಷ ವಿಲಿಯಂ ಲಸ್ರಾದೋ, ಕಾರ್ಯದರ್ಶಿ ಜೂಲಿಯನಾ ಕ್ರಾಸ್ತಾ ಅತಿಥಿಗಳಾಗಿ ಭಾಗವಹಿಸಿದ್ದರು.
ಸಿಲ್ವ‌ರ್ ಜ್ಯುಬಿಲಿ ಕಸ್ವೀನರ್, ಪಿ.ಟಿ.ಎ. ಉಪಾಧ್ಯಕ್ಷ ಹೇಮನಾಥ್ ಬಿ., ಸಿಲ್ವರ್ ಜ್ಯುಬಿಲಿ ಪ್ರಧಾನ ಕಾರ್ಯದರ್ಶಿ ಡಾ. ಅನುರಾಧಾ ಕುರುಂಜಿ, ಪ್ರಾಥಮಿಕ ಶಾಲಾ ವಿಭಾಗದ ಪಿ.ಟಿ.ಎ. ಉಪಾಧ್ಯಕ್ಷ ಶಶಿಧರ್ ಎಂ.ಜೆ. ಪೂರ್ವ ಪ್ರಾಥಮಿಕ ವಿಭಾಗದ ಪಿ.ಟಿ.ಎ. ಉಪಾಧ್ಯಕ್ಷ ಪ್ರಭೋದ್‌ ಶೆಟ್ಟಿ, ಪ್ರೌಢಾ ಶಾಲಾ ವಿದ್ಯಾರ್ಥಿ ನಾಯಕ ಹಿಮಾಂಶು ಬಿ.ಸಿ., ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ಲಕ್ಷ್ಯಜಿತ್ ಜಿ.ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್ ಜಿ. ದಾಸ್, ಕಾರ್ಯದರ್ಶಿ ಕಾರ್ಯದರ್ಶಿ ಆದರ್ಶ ಎಸ್.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು
ರಜತ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಸಾಧಕ ವಿದ್ಯಾರ್ಥಿಗಳನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳ ಸಹಿತ ಹಲವರಿಗೆ ಅಭಿನಂದನೆ ಹಾಗೂ ಶಾಲಾ ಸಂಚಾಲಕರಾಗಿ ದುಡಿದವರಿಗೆ ಸನ್ಮಾನ ಕಾರ್ಯಗಳು ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶಾಲಾ ಸಂಚಾಲಕ ರೆ.ಫಾ. ವಿಕ್ಟರ್ ಡಿಸೋಜ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲ ವರದಿ ವಾಚಿಸಿದರು. ಶಿಕ್ಷಕಿ ಯಶ್ವಿತಾ ವಂದಿಸಿದರು. ಶಿಕ್ಷಕಿಯರಾದ ಸ್ಮಿತಾ, ಮಮತಾ ಕಾರ್ಯಕ್ರಮ ನಿರೂಪಿಸಿದರು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top