ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿಮಜಲಿನಿಂದ ನಾಪತ್ತೆಯಾಗಿದ್ದ ಅನ್ವಿತ್ ಪತ್ತೆಯಾಗಿರುವ ವರದಿಯಾಗಿದೆ.
ಅಜ್ಜಾವರದ ಭಜನಾ ಮಂದಿರದಲ್ಲಿ ಗುರುವಾರ ಮುಂಜಾನೆ ಈತನು ಪತ್ತೆಯಾಗಿದ್ದಾನೆ. ಅಡ್ಪಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ಈತನು ಕಲಿಯುತ್ತಿದ್ದು ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸ್ ದೂರು ನೀಡಲಾಗಿತ್ತು.ಅನ್ವಿತ್ ಮೂಲತ ಪುತ್ತೂರು ತಾಲೂಕಿನ ಈಶ್ವರಮಂಗಳ ನಿವಾಸಿಯಾಗಿದ್ದು ತನ್ನ ಅಜ್ಜಿ ಮನೆಯಾದ ಶಾಂತಿಮೂಲೆಯಿಂದ ಶಾಲೆಗೆ ಹೋಗುತ್ತಿದ್ದಾನೆ. ಬಾಲಕ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ನಾಪತ್ತೆಯಾಗಿದ್ದ ಶಾಲಾ ಬಾಲಕ ಪತ್ತೆ! ಎಲ್ಲಿ ಪತ್ತೆಯಾದ ಇಲ್ಲಿದೆ ಮಾಹಿತಿ
