ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ಕಾರು ಕಾಸರಗೋಡಿನಲ್ಲಿ ಅಪಘಾತವಾಗಿ ಕಾರು ಜಖಂಗೊಂಡು ಅವರು ಸಹಿತ ಸಹ ಪ್ರಯಾಣಿಕರು ಪ್ರಾಣಾಪಯದಿಂದ ಪಾರಾದ ಘಟನೆ ಸೋಮವಾರ ವರದಿಯಾಗಿದೆ.ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪೆರಿಯ ಕಲ್ಯೊಟ್ ನಲ್ಲಿ ಕೃಪೆಶ್ ಮತ್ತು ಸಜಿತ್ಲಾಲ್ ಅವರ 6 ನೇ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ಅವರ ಕನ್ನಡ ಭಾಷಣವನ್ನು ಮಲಯಾಳಂ ಭಾಷೆಗೆ ತರ್ಜುಮೆ ಮಾಡಲು ಅವರ ವಾಹನದ ಬೆಂಗಾವಲು ವಾಹನದ ಜೊತೆಯಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಾಸರಗೋಡು ನಗರದ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಲ್ಲಿಸಿದಾಗ ಹಿಂಬದಿಯಿಂದ ಅತಿವೇಗವಾಗಿ ಬಂದ ಶಾಸಕ ಎನ್ ಎ ಹಾರಿಸ್ ಅವರ ಅಳಿಯ ಹಾಗು ಟಿ ಎಂ ಶಾಹಿದ್ ತೆಕ್ಕಿಲ್ ಅವರ ಸಂಬಂಧಿಕರದ ಕಾಸರಗೋಡು ಇಕ್ಬಾಲ್ ಚಟ್ಟಮ್ಚಾಲ್ ಅವರು ಸಂಚರಿಸುತ್ತಿದ್ದ ಫೋರ್ಚೂನ್ ಕೆ ಎಲ್ 14 ಝಡ್ 2750 ವಾಹನ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್,ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಎಲಿಮಲೆ ಮತ್ತು ಸುಳ್ಯ ನಗರ ಪಂಚಾಯತ್ ಸದಸ್ಯ ಸಿದ್ದಿಕ್ ಕೊಕೊ ಅವರು ಸಂಚರಿಸುತ್ತಿದ್ದ ಇನ್ನೋವ ಐಕ್ರಾಸ್ ಕೆಎಲ್ 05 ಎನ್ ಎಲ್ 7755 ವಾಹನಕ್ಕೆ ಹಿಂಬದಿಗೆ ಗುದ್ದಿತ್ತು. ವಾಹನದ 4 ಏರ್ ಬ್ಯಾಗ್ ತೆರೆದು ಎರಡು ವಾಹನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದೆ ಅದೃಷ್ಟವಷಾತ್ ಪಾರಾಗಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕಾರು ಕಾಸರಗೋಡಿನಲ್ಲಿ ಅಪಘಾತ ಪ್ರಾಣಾಪಯದಿಂದ ಪಾರು
