ಅಂತರ್ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ,ಬ್ಯಾಂಕ್ ಆಫ್‌ ಬರೋಡ, ಎಸ್‌ಡಿಎಂ ಉಜಿರೆ, ಎನ್‌ಎಂಸಿ ತಂಡಕ್ಕೆ ಎರಡನೇ ಗೆಲುವು

ಗೆಳೆಯರ ಬಳಗ ಐವರ್ನಾಡು ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಹಾಗೂ ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಐವರ್ನಾಡಿನಲ್ಲಿ ನಡೆಯುತ್ತಿರುವ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟದ ಲೀಗ್ ಪಂದ್ಯದಲ್ಲಿ
ಬ್ಯಾಂಕ್ ಆಫ್‌ ಬರೋಡ, ಎಸ್‌ಡಿಎಂ ಉಜಿರೆ, ಎನ್‌ಎಂಸಿ ತಂಡ ಎರಡನೇ ಗೆಲುವು ದಾಖಲಿಸಿದೆ.
ಎನ್‌ಎಂಸಿ ಸುಳ್ಯ ತಂಡವು ಕರೆಂಕಿ ಬಂಟ್ವಾಳ ತಂಡವನ್ನು 31-19
ಅಂಕಗಳ ಅಂತರದಲ್ಲಿ ಸೋಲಿಸಿ ಎರಡನೇ ಜಯ ಪಡೆದು ಕ್ವಾರ್ಟರ್ ಫೈನಲ್‌ ಪ್ರವೇಶಿಸಿತು.
ಹೆಚ್ಚಾಗಿ ಪ್ರೋ ಕಬಡ್ಡಿ ಆಟಗಾರರಿರುವ .ಬಲಿಷ್ಠ ಬ್ಯಾಂಕ್ ಆಫ್‌ ಬರೋಡ ತಂಡ ಕೆಎಫ್‌ಡಿಸಿ ಸುಳ್ಯ ತಂಡವನ್ನು 39-26 ಅಂಕಗಳ ಅಂತರದಿಂದ ಸೋಲಿಸಿತು. ಬ್ಯಾಂಕ್ ಆಫ್ ಬರೋಡ ತಂಡ ಹಾಗೂ ಕೆಎಫ್‌ಡಿಸಿ ಮಧ್ಯೆ ಆರಂಭದಲ್ಲಿ ಬಿರುಸಿನ ಹೋರಾಟ ಕಂಡು ಬಂದರೂ ಕೊನೆಯ ಹಂತದಲ್ಲಿ ಬಿಒಬಿಯ ವಿಶ್ವರಾಜ್ ಅವರ ಬಿರುಸಿನ ದಾಳಿಯಿಂದ ಕೆ.ಎಪ್.ಡಿ.ಸಿ ತಂಡ ವಿಚಲಿತಗೊಂಡಿತು‌.ಆರಂಭದಲ್ಲಿ ಕೆ.ಎಫ್.ಡಿ.ಸಿ ತಂಡದ ಅಶ್ವಿನ್ ಅವರ ಚುರುಕಿನ ದಾಳಿ ಸ್ವಲ್ಪ ಮಟ್ಟಿಗೆ ಭರವಸೆ ಮೂಡಿಸಿತು.
ಎಸ್‌ಡಿಎಂ ಉಜಿರೆ ತಂಡವು ಎನ್‌ಎಫ್‌ಸಿ ಕಾಸರಗೋಡು ತಂಡವನ್ನು 33-17 ಅಂಕಗಳ ಅಂತರದಲ್ಲಿ ಸತತ ಎರಡನೇ ಜಯ ದಾಖಲಿಸಿತು.
ತಡ ರಾತ್ರಿ ನಡೆದ ಮತ್ತೊಂದು ಪಂದ್ಯದಲ್ಲಿ ಕೆಎಫ್‌ಡಿಸಿ ಸುಳ್ಯ ತಂಡವು ಬಿಆರ್‌ಸಿ ಬೆಂಗಳೂರು ತಂಡವನ್ನು 41-31 ಅಂಕಗಳ ಅಂತರದಿಂದ ಪರಾಭವಗೊಳಿಸಿ ಪ್ರಥಮ ಗೆಲುವಿನ ನಗೆ ಬೀರಿತು.
ಆಳ್ವಾಸ್ ಮೂಡಬಿದ್ರೆ ತಂಡವು ಕರೆಂಕಿ ಬಂಟ್ವಾಳ ತಂಡವನ್ನು 36-12 ಅಂತರದಲ್ಲಿ ಸೋಲಿಸಿತು.
ಇಂದು ಸಂಜೆ ನಾಲ್ಕು ಗಂಟೆಗೆ ಕಬಡ್ಡಿ ಪಂದ್ಯಾಟ ಆರಂಭಗೊಳ್ಳಲಿದೆ.

Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top