ಸುಳ್ಯ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ ಬಳಿ ಚಾಲಕನ ನಿಯಂತ್ರಣ ತಪ್ಪಿಪರಿಣಾಮ ಕಂಟೈನರ್ ಲಾರಿ ಪಲ್ಟಿಯಾಗಿ ರಸ್ತೆಯ ಪಕ್ಕದ ಪಿಎಲ್ ಡಿ ಬ್ಯಾಂಕ್ ನ ತಡೆಗೋಡೆಗೆ ಅಪ್ಪಳಿಸಿ ತಡೆಗೋಡೆ ಹಾನಿಯಾದ ಘಟನೆ ಇದೀಗ ವರದಿಯಾಗಿದೆ ಇಂದು ಬೆಳಗಿನ ಜಾವ 6.45 ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು ರಸ್ತೆಯ ಬದಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಸ್ಕೂಟಿಯೊಂದು ಕಂಟೈನರ್ ಅಡಿಗೆ ಸಿಲುಕಿದೆ ಎನ್ನಲಾಗಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿದ್ದು. ಪಕ್ಕದ ನಂದಿನಿ ಸ್ಟಾಲ್ ಗೂ ಹಾನಿಯಾಗಿದೆ.ಕಂಟೈನರ್ ಚಾಲಕನ ನಿದ್ದೆ ಮಂಪರು ನಿಂದಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸುಳ್ಯದಲ್ಲಿ ಕಂಟೈನರ್ ಲಾರಿ ಪಲ್ಟಿ,ತಪ್ಪಿದ ಅನಾಹುತ
