ಸುಳ್ಯ ಲ್ಯಾಂಪ್ಸ್ ಸೊಸೈಟಿ ನಾಮನಿರ್ದೇಶಿತ ಸದಸ್ಯರಾಗಿ ಭವಾನಿಶಂಕರ್ ಕಲ್ಮಡ್ಕ ನೇಮಕಗೊಂಡಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1) ರ ಮೇರೆಗೆ ಸುಳ್ಯ ತಾಲ್ಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘ ನಿ., (ಲ್ಯಾಂಪ್ಸ್) ಸುಳ್ಯ, ಇದರ ಆಡಳಿತ ಮಂಡಳಿಗೆ ಭವಾನಿಶಂಕರ್ ಕಲ್ಮಡ್ಕ ಇವರನ್ನು ಸರಕಾರದ ನಾಮನಿರ್ದೇಶಿತ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡಿ ಆದೇಶಮಾಡಲಾಗಿದೆ. ವಿಧಾನ ಸಭಾ ಅಧ್ಯಕ್ಷರಾದ ಯು ಟಿ ಖಾದರ್ ರವರ ಶಿಫಾರಸ್ಸಿನ ಮೇರೆಗೆ ಸಹಕಾರ ಸಚಿವರಾದ ರಾಜಣ್ಣ ರವರು ಈ ಆದೇಶವನ್ನು ಮಾಡಿರುತ್ತಾರೆ.
ಸುಳ್ಯ ಲ್ಯಾಂಪ್ಸ್ ಸೊಸೈಟಿ ನಾಮನಿರ್ದೇಶಿತ ಸದಸ್ಯರಾಗಿ ಭವಾನಿಶಂಕರ್ ಕಲ್ಮಡ್ಕ ನೇಮಕ
