ಸುಳ್ಯ: ಆಯುರ್ವೇದ ಔಷದಿ ವೃತ್ತಿಯಲ್ಲಿ ಭಾರೀ ಪರಿಣತಿ ಹೊಂದಿದ ಸುಳ್ಯಕ್ಕೆ 60 ವರ್ಷಗಳಿಂದ ಕೋಟೆಕಲ್ಲು ಔಷದಿಗಳ ಹಂಚಿಕೆ ದಾರರಾಗಿದ್ದು. ಸುಳ್ಯ ದಲ್ಲಿ ಆಯುರ್ವೇದ ಪಂಡಿತರಾಗಿ ಪ್ರಸಿದ್ಧ ರಾಗಿದ್ದ ಹಿರಿಯ ಆಯುರ್ವೇದ ಪಂಡಿತ ಕುಂಞಿರಾಮನ್ ವೈದ್ಯರ್ ಏ.1ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಇವರ ವೈದ್ಯ ವೃತ್ತಿ ಜೀವನದಲ್ಲಿ ಸಾವಿರಾರು ವಿವಿಧ ತರದ ರೋಗಿಗಳನ್ನು ತನ್ನ ಆಯುರ್ವೇದ ಔಷದಿಗಳಿಂದ ಗುಣಪಡಿಸಿ ನಿಷ್ಠಾವಂತ ವೈದ್ಯರು ಎಂದು ಹೆಸರುವಾಸಿಯಾಗಿದ್ದರು.
ತನ್ನ ವೈದ್ಯ ವೃತ್ತಿ ಯೊಂದಿಗೆ ವಾಲಿಬಾಲ್ ಕ್ರೀಡೆಯನ್ನು ಬಹಳ ನೆಚ್ಚಿಕೊಂಡಿದರು. ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಸುವಲ್ಲಿ ಮುಂಚೂಣಿಯಲ್ಲಿ ಇದ್ದರು. ಪ್ರಖ್ಯಾತ. ರಾಷ್ಟ್ರೀಯ ವಾಲಿಬಾಲ್ ಆಟಗಾರರಾದ ಕೆರಳದ ಜಿಮ್ಮೀ ಜಾಜ್೯ ಮದರಾಸಿನ ಅಣ್ಣಾಮಲೈ, ತಂಡದ ಆಟಗಾರರನ್ನು ಸುಳ್ಯಕ್ಕೆ ಪರಿಚಯಿಸಿದರು.
ಸರಳ, ಸಜ್ಜನ, ಶ್ವೇತ ವಸ್ತ್ರಧಾರಿ, ತನ್ನ ವೃತ್ತಿ ಜೀವನದಲ್ಲಿ ಶಿಸ್ತುಗೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದ, ಪ್ರಾಮಾಣಿಕರಾಗಿದ್ದ ಆಯುರ್ವೇದ ಪಂಡಿತ ಕುಂಞಿರಾಮನ್ ವೈದ್ಯರ್ ರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ
ಮೃತರು, ಪುತ್ರರಾದ ಪ್ರಸನ್ನ ಕುಮಾರ್,ಆಯುರ್ ವೇದ ವೈದ್ಯ ಪ್ರಶಾಂತ್ ಕುಮಾರ್ ,ಪುತ್ರಿ ಪ್ರಸಿತಾ ಸೇರಿದಂತೆ, ಸಹೋದರರು ಹಾಗೂ ಹಲವಾರು ಬಂಧುಗಳನ್ನು ಅಗಲಿದ್ದಾರೆ.ಇವರ ಅಂತಿಮ ದರ್ಶನಕ್ಕೆ ಸುಳ್ಯದ ಕೆರೆಮೂಲೆಯಲ್ಲಿರುವ ಇವರ ನಿವಾಸದಲ್ಲಿ ನಾಳೆ ವ್ಯವಸ್ಥೆ ಮಾಡಲಾಗಿದೆ
ಸುಳ್ಯದ ಹಿರಿಯ ಆಯುರ್ವೇದ ಪಂಡಿತ ಕುಂಞಿರಾಮನ್ ವೈದ್ಯರ್ ನಿಧನ
