ಪತ್ನಿ ಮೇಲಿನ ಸಿಟ್ಟಿನಿಂದ ಮಗಳು,ನಾದಿನಿ,ಅತ್ತೆಯನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪಾಪಿ ಪತಿ!

ಚಿಕ್ಕಮಗಳೂರು; ತನ್ನ ಹೆಂಡತಿ ಮೇಲಿನ ಕೋಪಕ್ಕೆ ಮಗಳು, ಅತ್ತೆ, ನಾದಿನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಿಂದ ವರದಿಯಾಗಿದೆ.ಮಗಳು ಮೌಲ್ಯ. (7) ಅತ್ತೆ ಜ್ಯೋತಿ(55), ನಾದಿನಿ ಸಿಂಧು(24) ಕೊಲೆಯಾದವರು. ರತ್ನಕಾರ್ ಮೂವರನ್ನು ಗುಂಡಿ ಹಾರಿಸಿ ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ನಾದಿನಿಯ ಗಂಡನ ಕಾಲಿಗೂ ಗುಂಡು ತಗುಲಿದ್ದು ಅಪಾಯದಿಂದ ಪಾರಾಗಿದ್ದಾರೆ.
ರತ್ನಾಕರ್ ಸ್ವಾತಿ ಎಂಬುವರನ್ನ 8 ವರ್ಷದ ಹಿಂದೆ ಮದುವೆಯಾಗಿದ್ದ. ಎರಡು ವರ್ಷದಿಂದ ಅವರು ರತ್ನಾಕರ್ ನಿಂದ ದೂರವಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇದೇ ಕೋಪಕ್ಕೆ ನಿನ್ನೆ ರಾತ್ರಿ ಅತ್ತೆ ಮನೆಗೆ ಬಂದು ಜಗಳ ಮಾಡಿ ಗುಂಡು ಹಾರಿಸಿ ಕೊಂದಿದ್ದಾನೆ. ಕೊಲೆ ಮಾಡೋ ಮುನ್ನ ವೀಡಿಯೋ ಒಂದನ್ನು ಮಾಡಿದ್ದಾನೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರ ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top