ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿಯಲ್ಲಿ 13-04-2025 ರ ಮೇಷ ಸಂಕ್ರಮಣದಂದು ಕಲಶ ಸೇವೆ ನಡೆಯಲಿದೆ.
ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತಪ್ರಣೆ ರಾತ್ರಿ ಗಂಟೆ 7:30ಕ್ಕೆ ನಡೆಯಲಿದೆ.
ಈ ದಿನ ಅಗೇಲು ಸೇವೆ ಇರುವುದಿಲ್ಲ.
ಶ್ರೀ ಮಿತ್ತೂರು ಉಳ್ಳಾಕುಲು ಮಕ್ಕಳ ಕುಣಿತ ಭಜನಾ ತಂಡ, ಅಮೈಮಡಿಯಾರು ಉಬರಡ್ಕ ಮಿತ್ತೂರು ಮತ್ತು
ಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ ಅಮೈಮಡಿಯಾರು ಉಬರಡ್ಕ ಮಿತ್ತೂರು ಇವರಿಂದ ಕುಣಿತ ಭಜನೆ ಸಂಜೆ ಗಂಟೆ 6:15 ರಿಂದ 7:30 ರ ವರೆಗೆ ನಡೆಯಲಿದೆ. ಭಕ್ತಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ದೈವಸ್ಥಾನದ ಆಡಳಿತ ಮಂಡಳಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅರಂತೋಡು : ಏ.13ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಲಶ ಸೇವೆ ಮತ್ತು ಕುಣಿತ ಭಜನೆ
