ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಬೊಳಿಯೂರು ಗ್ರಾಮದ ಏರೋನಾಟಿಕ್ಸ್ ಇಂಜಿನಿಯರ್ ಆಕಾಂಕ್ಷಾ ಎಸ್. ನಾಯರ್ (22) ಅವರು ಪಂಜಾಬ್ನ ಫಗ್ವಾರದಲ್ಲಿರುವ ಲವಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕಟ್ಟಡದಿಂದ ಮೇ 17ರ ಶನಿವಾರ ಜಿಗಿದು ಸಂಶಯಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಪ್ರೇಮ ವೈಫಲ್ಯದಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದ್ದು, ಈ ಸಂಬಂಧ ಆಕೆ ಪ್ರೀತಿಸುತ್ತಿದ್ದಳೆನ್ನಲಾದ ಅದೇ ವಿಶ್ವವಿದ್ಯಾಲಯದ ವಿವಾಹಿತ ಪ್ರಾಧ್ಯಾಪಕನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಎಂದು ಮಾಧ್ಯಮದಲ್ಲಿ ತಿಳಿಸಲಾಗಿದೆ.
<