ಅರಂತೋಡು ಗ್ರಾಮದ ಅಡ್ಕಬಳೆ – ಬನ ಎಂಬಲ್ಲಿ ಎರಡು ಹೆಬ್ಬಲಸು ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾಳಿ ನಡೆಸಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ತುಷಾರ ಎಂಬವರ ಜಾಗ ದಲ್ಲಿದ್ದ ಹೆಬ್ಬಲಸು ಮರವನ್ನು ಅರಂತೋಡಿನ ಮುನೀರ್ ಎಂಬವರು ಕಡಿದು ಸಾಗಾಟಕ್ಕೆ ಯತ್ನ ನಡೆಸಿದರೆನ್ನಲಾಗಿದೆ.
ತುಷಾರ್ ಮತ್ತು ಮುನೀರ್ ಮೇಲೆ ಕೇಸು ದಾಖಲಾಗಿದೆ. ತುಷಾರ್ ರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮುನೀರ್ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೆಬ್ಬಲಸು ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟಕ್ಕೆ ಯತ್ನ, ಮರದ ದಿಮ್ಮಿಗಳು ಮತ್ತು ಓರ್ವ ವಶಕ್ಕೆ
