ಸುಳ್ಯ: ಕಾಂಗ್ರೆಸ್ ಮುಖಂಡರಿಂದ ವಿಪತ್ತು ನಿರ್ವಹಣೆ ಮತ್ತು ನಗರದ ಸಮಸ್ಯೆ ಪರಿಹರಿಸುವಂತೆ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯೊಂದಿಗೆ ಚರ್ಚೆ

ಮಳೆಗಾಲದ ಸಂದರ್ಭದಲ್ಲಿ ಸುಳ್ಯ ನಗರದಲ್ಲಿ ವಿಪತ್ತು ನಿರ್ವಹಣೆ ಮತ್ತು ವಿದ್ಯುತ್ ಸಮಸ್ಯೆ, ಹಾಗೂ ಅಮೃತ್ 2 ಯೋಜನೆಯಿಂದ ನಗರದ ರಸ್ತೆಗಳು ಅವ್ಯವಸ್ಥೆಯಾಗಿರುವ ಕುರಿತು ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ನಗರ ಪಂಚಾಯತ್ ಸದಸ್ಯರು ಇಂದು ನಗರ ಪಂಚಾಯತ್ ಮುಖ್ಯಾಧಿಕಾರಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವಿಷಯ ಪ್ರಸ್ತಾಪಿಸಿದ ರಾಧಾಕೃಷ್ಣ ಬೊಳ್ಳೂರುರವರು, ತಾಲೂಕು ಕೇಂದ್ರವಾದ ಸುಳ್ಯ ನಗರದಲ್ಲಿ ವಿಪರೀತ ವಿದ್ಯುತ್ ಸಮಸ್ಯೆ ಎದುರಾಗಿದೆ. ಚರಂಡಿ ನಿರ್ವಹಣೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಮೆಸ್ಕಾಂ ಇಲಾಖೆ ಅರಣ್ಯ ಇಲಾಖೆಯಾವರೊಂದಿಗೆ ನಮ್ಮ ನಿಯೋಗ ಈಗಾಗಲೇ ಚರ್ಚೆ ನಡೆಸಲಾಗಿದೆ. ವಿದ್ಯುತ್ ಲೈನ್ ಕ್ಲಿಯರೆನ್ಸ್, ಮರಗಳ ಗೆಲ್ಲು ಕಡಿಯುವ ಕೆಲಸ ಕೂಡಲೇ ಮಾಡುವಂತೆ ಒತ್ತಾಯಿಸಲಾಗಿದೆ. ಸ್ಥಳೀಯ ಸಂಸ್ಥೆ ಮತ್ತು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಿದಾಗ ಜನತೆಯ ಮೂಲಭೂತ ಸಮಸ್ಯೆ ಬಗೆಹರಿಯುತ್ತದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅಪಾಯಕಾರಿ ಮರ ತೆರವು ಮಾಡಲು ಕೂಡಲೇ ಟೆಂಡರ್ ಕರೆದು ಅರಣ್ಯ ಇಲಾಖೆಯ ಸಹಕಾರದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕು.

ಅಮೃತ್ 2 ಯೋಜನೆಯಡಿ ನಗರದ ರಸ್ತೆಗಳ ಬದಿ ಪೈಪ್ ಲೈನ್ ಅಳವಡಿಸುವಾಗ ಅವೈಜ್ಞಾನಿಕವಾಗಿ ರಸ್ತೆಗಳನ್ನು, ಚರಂಡಿಗಳನ್ನು ಅಗೆಯಲಾಗಿದೆ. ಪುಟ್ ಪಾತ್ ಇಂಟರ್ ಲಾಕ್ ತೆಗೆದು ಬದಿಗೆ ಹಾಕಿರುವುದನ್ನು ಮತ್ತೆ ಅಳವಡಿಸುವ ಕಾರ್ಯ ಮಾಡಿರುವುದಿಲ್ಲ. ಶಾಲಾ ಕಾಲೇಜು ಆರಂಭವಾಗಿದೆ ನಗರದಲ್ಲಿ ನಡೆದಾಡಲು ತೊಂದರೆಯಾಗಿದೆ. ಆದುದರಿಂದ ನಗರದ ಜನತೆಯ ಮತ್ತು ಎಲ್ಲಾ ವಾರ್ಡುಗಳಲ್ಲಿ ವಾಸಿಸುವ ಜನರ ಸಮಸ್ಯೆ ಬಗೆಹರಿಸಲು ಎಲ್ಲಾ ಇಲಾಖೆಯವರೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಕೂಡಲೇ ಸಹಕರಿಸುವಂತೆ ಸಲಹೆ ನೀಡಿದರು.

ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಮುಖ್ಯಧಿಕಾರಿಯವರು ನಗರದ ಎಲ್ಲ ವಾರ್ಡ್ ಗಳ ಚರಂಡಿ ದುರಸ್ಥಿ, ಮತ್ತು ಮರಗಳ ಕೊಂಬೆ ಕಡಿಯಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಟೆಂಡರ್ ತೆರೆದು ಕೂಡಲೇ ಕೆಲಸ ನಿರ್ವಹಿಸಲಾಗುವುದು. ಮೆಸ್ಕಾಂ ಮತ್ತು ಅರಣ್ಯ ಇಲಾಖೆಯೊಂದಿಗೆ ಅಪಾಯಕಾರಿ ಮರ ತೆರವು ಮಾಡಲು ನಗರ ಪಂಚಾಯತ್ ಆಡಳಿತ ಸಂಪೂರ್ಣ ಸಹಕರಿಸಲಿದೆ ಎಂದು ಹೇಳಿದರು.

ಹಸಿ ಕಸ ವಿಲೇವಾರಿಗೆ ಆಸಕ್ತ ರೈತರ ಪಟ್ಟಿ ತಯಾರಿಸಿ ನಗರ ಪಂಚಾಯತ್ ವತಿಯಿಂದಲೇ ರೈತರ ತೋಟಕ್ಕೆ ತೆಗೆದುಕೊಂಡು ಹೋಗುವ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.

ಅಮೃತ್ 2 ಯೋಜನೆಯ ಬಗ್ಗೆ ನಗರ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳ ಸಭೆಯನ್ನು ಜೂ. 2 ರಂದು ಕರೆಯಲಾಗಿದೆ. ಅಂದು ಪೈಪ್ ಲೈನ್ ಅಳವಡಿಕೆಯ ಸಂದರ್ಭದಲ್ಲಿ ರಸ್ತೆ ಅಗೆತ ಮತ್ತು ಚರಂಡಿ ಹಾಗೂ ಪುಟ್ ಪಾತ್ ದುರಸ್ಥಿ ತುರ್ತಾಗಿ ನಡೆಸಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತ, ಶರೀಫ್ ಕಂಠಿ, ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ನಗರ ಪಂಚಾಯತ್ ಮಾಜಿ ಸದಸ್ಯ ಶಿವಕುಮಾರ್ ಕಂದಡ್ಕ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ವಿಜಯಕುಮಾರ್ ಆಲೆಟ್ಟಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top