ಸಂಪಾಜೆ ಗ್ರಾಮದ ಪೇರಡ್ಕ ಸೇತುವೆಯಲ್ಲಿ ಭಾರಿ ಮಳೆಗೆ ದೊಡ್ಡ ಗಾತ್ರದ ಮರ ಬುಡ ಸಮೇತ ಸೇತುವೆಯಲ್ಲಿ ಸಿಲುಕಿಕೊಂಡಿದ್ದು ಅದನ್ನು ತೆರವುಗೊಳಿಸಲಾಯಿತು.
ಮರ ತೆರವು ಕಾರ್ಯಚರಣೆಯಲ್ಲಿ ಸಿದ್ದಿಕ್ ಗೂನಡ್ಕ ಅಝೀಝ್ ಕೊಯ್ನ್ಯಾಡ್, ಉನೈಸ್ ಗೂನಡ್ಕ. ರಝಾಕ್ ಅಲೆಕ್ಕಾಡಿ ಉಸ್ಮಾನ್ ಪಾಂಡಿ,ಸಾಹಿಲ್ ದರ್ಕಸ್, ವಿಶ್ವನಾಥ್ ಪಂಚಮಿ, ಚಿದಾನಂದ ಮಾಸ್ತರ್, ಮೋಹನ್ ಆಚಾರಿ, ದನಪಾಲ ಪೇರಡ್ಕ, ಯೋಗೀಶ್ ದರ್ಕಸ್. ಭಾರದ್ವಾಜ್, ಸಾದುಮೊನ್ ಪೇರಡ್ಕ, ಅಶ್ರಫ್ ಪೇರಡ್ಕ ತೊಡಗಿಸಿಕೊಂಡರು.
ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಸದಸ್ಯರಾದ ಸವಾದ್. ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಗಣಪತಿ ಭಟ್ ಸಹಕರ ನೀಡಿದರು.
ಪೇರಡ್ಕ : ಸೇತುವೆಯಲ್ಲಿ ಸಿಲುಕಿಕೊಂಡಿದ್ದ ಮರ ತೆರವುಗೊಳಿಸಿದ ಊರವರು
