ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಕೃಷಿಕರು, ಉದ್ದಿಮೆದಾರರು, ಕೂಲಿಕಾರ್ಮಿಕರಿಗಾಗಿ ಇಲಾಖೆಗಳ ವತಿಯಿಂದ ವಿಶೇಷವಾಗಿ ಮಾಹಿತಿ ಗೇರು ಸಂಶೋಧನಾ ಮಂಡಳಿಯಿಂದ ಆಸಕ್ತ ಗೇರು ಕೃಷಿಕರು ಮತ್ತು ಈಗಾಗಲೇ ಗೇರು ಬೆಳೆಯುತ್ತಿರುವ ಕೃಷಿಕರಿಗೆ ಅದರ ಮೌಲ್ಯ ವರ್ಧನೆ ಮಾಡುವ ಕುರಿತು ಉಚಿತವಾಗಿ ಯಂತ್ರೋಪಕರಣಗಳನ್ನು ಅವಶ್ಯಕತೆ ಇದ್ದಲ್ಲಿ ನೀಡುವ ಕುರಿತು ಹಾಗೂ ಎರಡರಿಂದ ಮೂರು ವರ್ಷಗಳ ತನಕ ಗಿಡಗಳ ಆರೈಕೆಯನ್ನು ಮಾಡುವುದರ ಕುರಿತು ಪೂರ್ಣ ಮಾಹಿತಿ ಕೃಷಿ ವಿಜ್ಞಾನ ಕೇಂದ್ರದಿಂದ ಮಣ್ಣಿನ ಪರೀಕ್ಷೆ ಹಾಗೂ ತರಕಾರಿ ಬೀಜಗಳ ವಿತರಣೆ ಹಾಗೂ ಕೃಷಿಗೆ ಸಂಬಂಧಿಸಿದ ಹಲವಾರು ವಿಚಾರಗಳ ಕುರಿತು ಚರ್ಚಿಸಲು ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಕಡೆಯಿಂದ ಕೃಷಿಕರಿಗೆ ಉದ್ಯಮಿದಾರರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಉಚಿತವಾಗಿ ಮುಂದಿನ ದಿನಗಳಲ್ಲಿ ಸಿಗಲಿರುವ ಸಾಲ ಸೌಲಭ್ಯ, ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆ, ಮಾರುಕಟ್ಟೆ, ಹಾಗೂ ಇತರ ವಿಚಾರಗಳ ಕುರಿತು ತಿಳಿದುಕೊಳ್ಳಲು ಅವಕಾಶ
ವಿಶೇಷ ಕಾರ್ಯಗಾರ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡಿಯಿತು
ಕಾರ್ಯಕ್ರಮವನ್ನು ಡಾ. ದಿನಕರ ಅಡಿಗ ನಿರ್ದೇಶಕರು ಭಾರತ ಭಾ, ಕೃ, ಸಂ,ಪ ಗೇರು ಸಂಶೋಧನಾಲಯ ಪುತ್ತೂರು ಗಿಡಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಕೃಷಿಕರಿಗೆ ಪೂರಕ ವಾತಾವರಣ ಹಾಗೂ ಗೇರು ಕೃಷಿಯ ಮಹತ್ವದ ಬಗ್ಗೆ ಸಂಪಾಜೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿ ಕೃಷಿಕರಿಗೆ ಗೇರು ಕೃಷಿ ಬಗ್ಗೆ ಮಾಹಿತಿ ನೀಡಿದರು. ಕೃಷಿ ಸಖಿ ಮೋಹಿನಿಯವರು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡ್ತಾ ಇದ್ದಾರೆ. ಗ್ರಾಮ ಪಂಚಾಯತ್ ಸಹಕಾರ ನೀಡುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಕೆ.ಇ.ಜಯರಾಂ ಮಾತನಾಡಿ ಸಂಪಾಜೆ ಗ್ರಾಮ ಜಿಲ್ಲೆಯ ಕೊನೆಯ ಪಂಚಾಯತ್ ಮಾದರಿ ಗ್ರಾಮ ಕೃಷಿಕರು ಹೆಚ್ಚಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿ ಉತ್ತಮ ಫಲಿತಾಂಶ ತರಲು ಪ್ರಯತ್ನಿಸಿ ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ. ಹಾಗೂ ಏನ್ ಆರ್, ಎಲ್, ಎಂ ಮೂಲಕ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಿದ ಪಂಚಾಯತ್ ಮಾದರಿ ಗ್ರಾಮ ಪಂಚಾಯತ್ ಆಗಿ ಮೂಡಿ ಬರಲಿ ಎಂದರು ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಡಿಕಾರಿ ರಾಜಣ್ಣ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಾರೆ. ಹಾಗೂ ಎಲ್ಲಾ ಮೂಲಗಳಿಂದ ಅನುದಾನ ತರಿಸಿ ಕೆಲಸ ಮಾಡಿ ಮಾದರಿ ಗ್ರಾಮವನ್ನಾಗಿ ಮಾಡಿದ್ದಾರೆ. ಹಾಗೂ ತಾಲೂಕು ಪಂಚಾಯತ್ ಮೂಲಕ ಕೊಡ ಮಾಡಿದ ಒಂದೂವರೆ ಲಕ್ಷ ರೂಪಾಯಿ ಅನುದಾನ ದ. ಟಾಯ್ಲೆಟ್ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಕೆ ಮಾಡಿದರು
ಡಾ ರಮೇಶ್ ಕೆ. ವಿ. ಕೆ ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು . ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸಂಜೀವಿನಿ ಎನ್ ಆರ್ ಎಲ್ ಎಂ ಶ್ವೇತ ಅವರ ಸಹಕಾರ ಇದೆ ಎಂದು ತಿಳಿಸಿದರು.
ಡಾ ಮಲ್ಲಿಕಾರ್ಜುನ , ಡಾ.ಜ್ಯೋತಿ ನಿಶಾದ್, ಡಾ, ಶಿವಕುಮಾರ್ , ಡಾ. ರವೀಂದ್ರ ಪಾಟೀಲ್,ಡಾ. ಅಶ್ವತಿ ಚಂದ್ರಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದ್ದರು
ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿoಗಾಜೆ, ಕೃಷಿಕರು ಹೆಚ್ಚಾಗಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಸರಕಾರದಿಂದಿಂದ ಸವಲತ್ತು ಪಡಕೊಂಡು ಉತ್ರಮ ಕೃಷಿಕರಾಗಿ ಎಂದರು
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ತಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿ ಆಗಿದೆ. ಕೃಷಿಕರು ಸವಲತ್ತು ಪಡೆಯುವ ಮೂಲಕ ಹೆಚ್ಚು ಮುತುವರ್ಜಿ ವಹಿಸಿ ಗ್ರಾಮದ ಸಮಗ್ರ ಅಭಿವೃದ್ಧಿಯ ಕಡೆ ಸಹಕಾರ ಕೋರಿದರು . ಮಡಪ್ಪಾಡಿ ಕೃಷಿ ಸಖಿ ಪುಷ್ಪಲತಾ, ಆಲೆಟ್ಟಿ ಕೃಷಿ ಸಖಿ ಲೋಚನ, ಅಜ್ಜಾವರ ಕೃಷಿ ಸಖಿ ಪೂರ್ಣಿಮಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಸಾದ ಶೆಟ್ಟಿ, ಹರಿಪ್ರಸಾದ್ ,ಶ್ವೇತಾ, ಜೀವನ್ ಪ್ರಕಾಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ,ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಅನುಪಮ, ರಜನಿ ಶರತ್ ,ಸುಶೀಲಾ. ಮಾಜಿ ಅಧ್ಯಕ್ಷರಾದ ಜಗದೀಶ್ ಕೆ ಪಿ. ಯಮುನಾ, ಮಾಜಿ ಸದಸ್ಯರಾದ ರಾಮಚಂದ್ರ ಕಲ್ಲಗದ್ದೆ, ಸೊಸೈಟಿ ನಿರ್ದೇಶರಾದ ಗಣಪತಿ ಭಟ್,ನಾಗೇಶ್ ಪಿ ಆರ್, ಚಿದಾನಂದ ಆರೋಗ್ಯ ಇಲಾಖೆಯ ಚಿತ್ರಾ,ಮಾಸ್ತರ್, ಪಂಚಾಯತ್ ಸಿಬ್ಬಂದಿ ವರ್ಗ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಸದಸ್ಯರು, ಪಶು ಸಖಿ ಮಾಲತಿ ,ಎಲ್ ಸಿ.ಆರ್ ಪಿ. ಉಪಸ್ತಿತರಿದ್ದರು. ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸ್ವಾಗತಿಸಿ. ಸದಸ್ಯರಾದ ಜಿ ಕೆ.ಹಮೀದ್ ಗೂನಡ್ಕ ವಂದಿಸಿದರು ಕೃಷಿ ಸಖಿ ಮೊಹಿನಿ ವಿಶ್ವನಾಥ್ ( ನಿಶಾ ) ಹಾಗೂ ಎಂ, ಬಿ. ಕೆ. ಕಾಂತಿ ಬಿ. ಎಸ್ ಕಾರ್ಯಕ್ರಮ ನಿರೂಪಿಸಿದರು
ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ವಿಕಸಿತ ಭಾರತ ಕೃಷಿ ಸಂಕಲ್ಪ ಅಭಿಯಾನ
