ಪಯಸ್ವಿನಿ ಪ್ರಾ ಕೃ ಪ ಸ ಸಂಘದಿಂದ ಕೆಸಿಸಿ ಸಾಲ ಕುರಿತಾದ ಮಾಹಿತಿ ಕಾರ್ಯಾಗಾರ

ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ತಾ.10 ರಂದು ಸಂಪಾಜೆಯಲ್ಲಿ ಮತ್ತು ತಾ.11 ರಂದು ಚೆಂಬು ಬಾಲಂಬಿಯಲ್ಲಿ ಸಂಘದ ಸದಸ್ಯರಿಗೆ ಸಿಗುತ್ತಿರುವ ಶೂನ್ಯ ಬಡ್ಡಿದರದ ಕೆಸಿಸಿ ಸಾಲದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಸಭೆಯ ಅದ್ಯಕ್ಷತೆ ವಹಿಸಿದ್ದ ಸಂಘದ ಅದ್ಯಕ್ಷರಾದ ಶ್ರೀ. ಯನ್.ಸಿ.ಅನಂತ್ ಊರುಬೈಲುರವರು ಕೆಸಿಸಿ ಸಾಲದ ವ್ಯವಸ್ಥೆ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿ,ಸಾಲ ಪಡೆಯಲು ನಿಗದಿಪಡಿಸಿದ ಮಾನದಂಡಗಳು ಮತ್ತು ಅನುಸರಿಸಬೇಕಾದ ನಿಯಮಗಳು ಮತ್ತು ಕೆಸಿಸಿ ಸಾಲ ವಿತರಣೆಯಲ್ಲಿ ಸಂಘದ ಪಾತ್ರದ ಬಗ್ಗೆ ವಿವರಿಸಿದರು. ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧಿಕಾರಿಗಳಾದ ಶ್ರೀ ಹರೀಶ್ ರವರು ಕೆಸಿಸಿ ಸಾಲದಲ್ಲಿ ಕೆಡಿಸಿಸಿ ಬ್ಯಾಂಕಿನ ಪಾತ್ರ ಮತ್ತು ಸಾಲಕ್ಕೆ ಆಧಾರವಾಗಿ ರೈತರು ತಮ್ಮ ಭೂಹಿಡುವಳಿಗಳನ್ನು ಸಾಮಾನ್ಯ ಅಡಮಾನ ಮಾಡುವ ಅನಿವಾರ್ಯತೆ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾದಿಕಾರಿ ಶ್ರೀ. ಬಿ.ಕೆ.ಆನಂದ ,ಸಂಪಾಜೆ ಗ್ರಾ ಪಂ ಅದ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿ ,ಚೆಂಬು ಗ್ರಾ ಪಂ ಅದ್ಯಕ್ಷ ಶ್ರೀ ತೀರ್ಥರಾಮ ಪೂಜಾರಿಗದ್ದೆ ,ಮಾಜಿ ಎಪಿಎಂಸಿ ಅದ್ಯಕ್ಷ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯರವರು ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಂಘದ ಸದಸ್ಯರು ಕೆಸಿಸಿ ಸಾಲ ವಿತರಣೆ ಬಗ್ಗೆ ಸಂವಾದದ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಸಂಘದ ಉಪಾಧ್ಯಕ್ಷ ಶ್ರೀ ಯಶವಂತ ದೇವರಗುಂಡ ಸರ್ವರನ್ನೂ ಸ್ವಾಗತಿಸಿ ,ಕೊನೆಯಲ್ಲಿ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top