ದಕ್ಷಿಣ ಭಾರತ ಪ್ರಸಿದ್ದ ನಾಗ ಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯ ದೇವಳಕ್ಕೆ ಡಾ. ಕೆ.ವಿ ರೇಣುಕಾಪ್ರಸಾದ್ ಬೆಳ್ಳಿ ರಥ ನೀಡಲಿದ್ದು ಅದರ ಹಿನ್ನೆಲೆಯಲ್ಲಿ ರಥ ನಿರ್ಮಾಣಕ್ಕೆ ವೀಳ್ಯ ಕಾರ್ಯಕ್ರಮ ಜೂನ್ 14 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ,ಮಾಜಿ ಸ್ಪೀಕರ್ ಕೆ.ಜಿ
ಬೋಪಯ್ಯ,ರಥಶಿಲ್ಪಿ ರಾಜಗೋಪಾಲ ಅಚಾರ್,ಮಾಜಿ ಸಚಿವ ರಮಾನಾಥ ರೈ,ಶಾಸಕಿ ಭಾಗೀರಥಿ ಮುರುಳ್ಯ,ಅಶೋಕ್ ಕುಮಾರ್ ರೈ, ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
ಕುಕ್ಕೆ ದೇವಳಕ್ಕೆ ಡಾ.ಕೆ.ವಿ ರೇಣುಕಾಪ್ರಸಾದ್ ಅವರಿಂದ ಬೆಳ್ಳಿ ರಥ ಕೊಡುಗೆ ಹಿನ್ನಲೆ ಜೂ.14ಕ್ಕೆ ವೀಳ್ಯ ನೀಡುವ ಕಾರ್ಯಕ್ರಮ
