ಸುಳ್ಯ ತಾಲೂಕಿನ ಪಂಜದ ವೈದ್ಯರೊಬ್ಬರು ಮೈಸೂರಿನ ಯುವತಿಗೆ ಮದುವೆಯಾಗೋದಾಗಿ ಹೇಳಿ ವಂಚಿಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟು ಅವರ ಬಾವನೋರ್ವನನ್ನು ಮೈಸೂರಿನ ಪೊಲೀಸರು ಸುಳ್ಯದಲ್ಲಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಆದರ್ಶ್ ಅವರ ಬಾವ ರಜಿತ್ ಭಟ್ ಬಂಧನಕೊಳಗಾದ ಆರೋಪಿ. ವಂಚನೆಗೊಳಗಾದ ಯುವತಿ ಪೊಲೀಸರಿಗೆ ದೂರು ನೀಡಿದ್ದರು.
ಪಂಜ ಮೂಲದ ಡಾ.ಆದರ್ಶ್ ಅವರಿಗೆ ಫೇಸ್ಟುಕ್ ಮೂಲಕ ಯುವತಿಯ ಪರಿಚಯವಾಗಿದೆ. ಬಳಿಕ ವಿವಾಹದ ಭರವಸೆ ನೀಡಿ ಆದರ್ಶ್ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿ, ರಿಜಿಸ್ಟರ್ಡ್ ವಿವಾಹವಾಗಿದ್ದರಾಂತೆ. ಆದರೆ ಇದೀಗ ಇದಕ್ಕೆ ತಮ್ಮ ತಂದೆ ತಾಯಿಯ ವಿರೋಧವಿದೆ ಎನ್ನುವ ಕಾರಣವನ್ನು ನೀಡಿ ನನ್ನನ್ನು ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿ ವಂಚನೆ ಮಾಡುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಡಾ.ಆದರ್ಶ್, ಇವರ ತಂದೆ ವೆಂಕಟರಮಣ ಭಟ್, ತಾಯಿ ಶಶಿಕಲಾ, ಸಹೋದರರಾದ ಆದಿತ್ಯ ಭಟ್,ಬಾವ ರಜಿತ್ ಭಟ್ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಳು.
ಮೊದಲಿಗೆ ಈ ಪ್ರಕರಣ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ನಂತರ ಹೆಚ್ಚಿನ ತನಿಖೆಗಾಗಿ ಸುಬ್ರಹ್ಮಣ್ಯ ಠಾಣೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಹೈಕೋರ್ಟ್ ಆದೇಶದ ಮೇರೆಗೆ ಈ ಪ್ರಕರಣವನ್ನು ಮೈಸೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಈ ನಡುವೆ ಡಾ.ಆದರ್ಶ್ ಹಾಗೂ ಅವರ ಕುಟುಂಬ ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಕಾನೂನಾತ್ಮಕ ಪರಿಹಾರ ದೊರೆತಿಲ್ಲ ಎನ್ನಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ವೈದ್ಯನಿಂದ ಯುವತಿಗೆ ಹಲವು ಬಾರಿ ದೈಹಿಕ ಸಂಪರ್ಕ,ವೈದ್ಯನ ಬಾವನನ್ನು ಬಂಧಿಸಿದ ಪೊಲೀಸರು!
