ಗುಜರಾತ್ ವಿಮಾನ ದುರಂತದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶವಾಗಿ ಪಾರು

ಏರ್ ಇಂಡಿಯಾ ವಿಮಾನ Al171 ದರಂತದಲ್ಲಿ ಪವಾಡಸದೃಶವಾಗಿ ಪ್ರಯಾಣಿಕರೊಬ್ಬರು ಬದುಕುಳಿದಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಮೇಶ್‌ ವಿಶ್ವಾಸ್‌ಕುಮಾ‌ರ್ ಬುಚರ್ವಾಡಾ ಭೀಕರ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಿಗೆ ಸಿಲುಕಿ ಸಾವು ಗೆದ್ದಿದ್ದಾರೆ.
ಸೀಟ್ 11A ನಲ್ಲಿ ಕುಳಿತಿದ್ದ 38 ವರ್ಷದ ರಮೇಶ್ ಘಟನೆಯ ಸಮಯದಲ್ಲಿ ವಿಮಾನದ ತುರ್ತು ನಿರ್ಗಮನ ದ್ವಾರದಿಂದ ಜಿಗಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಗಾಯಗೊಂಡ ರಮೇಶ್ ಘಟನೆ ಕುರಿತು ವಿವರಿಸುತ್ತಾ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಅಹಮದಾಬಾದ್ ಪೊಲೀಸ್ ಕಮಿಷನ‌ರ್ ಜಿ.ಎಸ್. ಮಲಿಕ್ ಅವರು ರಮೇಶ್ ಅವರು ಬದುಕುಳಿದಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ವಿಮಾನ ವಸತಿ ಪ್ರದೇಶದಲ್ಲಿ ಪತನವಾಗಿದ್ದು ಸಾ*ವುಗಳ ಸಂಖ್ಯೆಯನ್ನು ಖಚಿತವಾಗಿ ಈಗಲೇ ತಿಳಿಸಲು ಸಾಧ್ಯವಾಗುವುದಿಲ್ಲ ಎಂದು ಮಲಿಕ್ ಹೇಳಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top