ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸ್ಥಾಪಿತವಾಗಿರುವ ಸಂಚಾರಿ ಆರೋಗ್ಯ ಘಟಕದ ವಾಹನವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಇಂದು ಹಸಿರು ನಿಶಾನೆ ತೋರಿಸುವ ಮೂಲಕ ಜೂ.13ರಂದು ತಾಲೂಕು ಸುಳ್ಯ ತಾಲೂಕು ಪಂಚಾಯತ್ ವಠಾರದಲ್ಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು ಈ ಸಂಚಾರಿ ಘಟಕದ ಮೂಲಕ ಕಾರ್ಮಿಕರು ತಮ್ಮ ಕೆಲಸದ ಸ್ಥಳದಲ್ಲೇ ಉಚಿತ ಆರೋಗ್ಯ ತಪಾಸಣೆ, ಪ್ರಾಥಮಿಕ ಚಿಕಿತ್ಸೆ ಔಷಧ ವಿತರಣೆ ಮತ್ತು ತಜ್ಞರ ಸಲಹೆಗಳನ್ನು ಪಡೆಯಬಹುದಾಗಿದೆ. ಗ್ರಾಮೀಣ ಮತ್ತು ಪೆರಿಫರಲ್ ಪ್ರದೇಶಗಳ ಕಾರ್ಮಿಕ ವರ್ಗವನ್ನು ಗುರಿಯಾಗಿಟ್ಟುಕೊಂಡು ಈ ಸೇವೆಗಳನ್ನು ನೀಡಲಾಗುತ್ತಿದೆ.
ಕಾರ್ಮಿಕರ ಆರೋಗ್ಯ ಕಾಪಾಡುವುದು ನಮ್ಮ ಆದ್ಯತೆ. ಈ ಸಂಚಾರಿ ಘಟಕದ ಮೂಲಕ ತಕ್ಷಣದ ಸೇವೆಗಳು ತಲುಪುವಂತಾಗುತ್ತಿದ್ದು, ಇದು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಹೆಜ್ಜೆಯಾಗಿದೆ. ಪ್ರತಿಯೊಬ್ಬ ಕಾರ್ಮಿಕರೂ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು,” ಎಂದರು.
ಈ ವಾಹನದಲ್ಲಿ ತಜ್ಞ ವೈದ್ಯರು, ನರ್ಸ್ಗಳು ಹಾಗೂ ತಾಂತ್ರಿಕ ಸಿಬ್ಬಂದಿಯು ನಿಯೋಜಿತರಾಗಿದ್ದು, ರಕ್ತದೊತ್ತಡ, ಡಯಬೆಟಿಸ್, ದೇಹದ ತೂಕ, ಹಿಮೋಗ್ಲೋಬಿನ್, ದೃಷ್ಟಿ ತಪಾಸಣೆ ಸೇರಿದಂತೆ ಹಲವು ಪರೀಕ್ಷೆಗಳನ್ನು ಸ್ಥಳದಲ್ಲೇ ನಡೆಸಲಾಗುತ್ತದೆ. ತುರ್ತು ಸ್ಥಿತಿಗಳಿಗೆ ಅಗತ್ಯವಿದ್ದರೆ ಹೆಚ್ಚಿನ ಆಸ್ಪತ್ರೆಗೆ ರೆಫರ್ ಮಾಡುವ ವ್ಯವಸ್ಥೆಯೂ ಹೊಂದಿಸಲಾಗಿದೆ ಎಂದು ಹೇಳಿದರು. ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕ ಕೆ.ಪಿ ಜಾನಿ, ಹಿರಿಯ ಕಾರ್ಮಿಕ ನಿರ್ದೇಶಕ ಗಣಪತಿ ಹೆಗಡೆ,
ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಯಾಎಕ್ಸಿಕ್ಯುಟಿವ್ ರಮೇಶ್, ಗುತ್ತಿಗೆ ಸಂಸ್ಥೆ ಸಿಬ್ಬಂದಿ ನಿಖಿಲ್, ನ.ಪಂ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ , ಸೂಡ ಅಧ್ಯಕ್ಷ ಮುಸ್ತಫ ಕೆ ಎಂ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಮಂಜುಳಾ ಎಂ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ರಾಜಣ್ಣ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಅಶ್ರಫ್, ತೀರ್ಥರಾಮ ಜಾಲ್ಲೂರು, ಪರಮೇಶ್ವರ ಕೆಂಬಾರೆ, ಕೃಷಿ ನಿರ್ದೇಶಕ ಗುರುಪ್ರಸಾದ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.