ದೈವ ನರ್ತಕನ ಹೊಡೆದು ಕೊಲೆ

ಕಾಸರಗೋಡು ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ನರ್ತಕ. ಸತೀಶನ್ ಯಾನೆ ಬಿಜು (46) ಅವರ ಸಾವು ಕೊಲೆಯೆಂದು ತನಿಖೆಯಲ್ಲಿ ತಿಳಿದುಬಂದಿದ್ದು, ಆರೋಪಿಯಾದ ಸ್ನೇಹಿತ ಚಿದಾನಂದನನ್ನು (32) ಪೊಲೀಸರು ಬಂಧಿಸಿದ್ದಾರೆ.
ಚೋಮಣ್ಣ ಎಂಬವರ ಮನೆಯಲ್ಲಿ ಜೂ.9 ರಂದು ಚಿದಾನಂದ ಹಾಗೂ ಸತೀಶನ್‍ ಇಬ್ಬರು ಮದ್ಯ ಸೇವಿಸುತ್ತಿದ್ದರು. ಈ ನಡುವೆ ಇಬ್ಬರ ನಡುವೆ ಜಗಳ ಉಂಟಾಗಿದೆ. ಈ ಸಂದರ್ಭ ಚಿದಾನಂದ ಸತೀಶನ್ ಅವರನ್ನು ಕೆಳಗೆ ತಳ್ಳಿದ್ದಾನೆ. ಸತೀಶನ್‍ ತಲೆಗೆ ಗಾಯವಾಗಿದೆ. ಸತೀಶನ್‍ ಮನೆಗೆ ಬಾರದ್ದನ್ನು ಕಂಡು ಅವರ ಸಹೋದರಿ ಸೌಮಿನಿ ಚೋಮಣ್ಯನ ಮನೆಗೆ ಭೇಟಿ ನೀಡಿದಾಗ ಸತೀಶನ್ ವರಾಂಡದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದ. ಕೂಡಲೇ ಆತನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ರಕ್ಷಿಸಲಾಗಲಿಲ್ಲ ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯ ಎಲುಬು ಮುರಿದಿರುವುದು, ದೇಹದ ಹಿಂಭಾಗದಲ್ಲಿ ಅಂತರಿಕ ಗಾಯಗಳು ಕಂಡುಬಂದಿದ್ದವು.
ಚಿದಾನಂದ ಸತೀಶನ್‌ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿರುವುದು ಪೊಲೀಸರಿಗೆ ಸಂಶಯ ಹುಟ್ಟಿಸಿತ್ತು. ಚಿದಾನಂದನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ, ಕೊಲೆಯ ಸತ್ಯ ಬೆಳಕಿಗೆ ಬಂದಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top