ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಸಂಪಾಜೆ ವಲಯದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಭೆಯನ್ನು. ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ತೀರ್ಥರಾಮ ಅಡ್ಕಬಳೆ ಇವರ ಅಧ್ಯಕ್ಷತೆಯಲ್ಲಿ. ಅರಂತೋಡು ಸಿರಿ ಸೌದ ಸಭಾಂಗಣದಲ್ಲಿ ನಡೆಲಾಯಿತು.
ಈ ಸಭೆಯಲ್ಲಿ ಪ್ರಾರ್ಥನೆಯನ್ನು ಭಾರತಿ ಮರ್ಕಂಜ ಅವರು ಮಾಡಿದರು. ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಅರಂತೋಡಿನ ಅಧ್ಯಕ್ಷರಾದ K R ಪದ್ಮನಾಭ ರವರು ದೀಪ ಪ್ರಜ್ವಲಿಸುವ ಮುಖೇನ ಚಾಲನೆ ನೀಡಿದರು. ಈ ಸಭೆಯಲ್ಲಿ ಸುಳ್ಯ ತಾಲೂಕಿನ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ಸೋಮಶೇಖರ ಪೈಕ ಮತ್ತು ಯೋಜನೆಯ ಯೋಜನಾಧಿಕಾರಿಗಳಾದ ಮಾಧವ ಗೌಡರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತಾಲೂಕು ಭಜನಾ ಪರಿಷತ್ತಿನ ಕಾರ್ಯವೈಕರಿ ಹಾಗೂ ಭಜನೆಯಿಂದ ಹಾಗೂ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಮಕ್ಕಳಿಗೆ ಸಂಸ್ಕಾರ ಕಳಿಸುವಂತಹ ಪುಣ್ಯದ ಕಾರ್ಯದಲ್ಲಿ ನಾವೆಲ್ಲರೂ ಭಾಗವಹಿಸಬೇಕು.
ಹಾಗೆ ಒಂದು ಉತ್ತಮ ಸಂಘಟನೆಯನ್ನು ನಿರ್ಮಾಣ ಮಾಡಲು ಭಜನಾ ಮಂಡಳಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು. ಹಾಗೂ ಈ ವರ್ಷದ ಭಜನೋತ್ಸವ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ವಲಯದಲ್ಲಿ ನಡೆಸುವುದಾಗಿ ತಿಳಿಸಿದರು.
ಸಮಿತಿ ರಚನೆ :-
ಅಧ್ಯಕ್ಷರು – ಭಾರತಿ ಪುರುಷೋತ್ತಮ ಉಳುವಾರು
ಉಪಾಧ್ಯಕ್ಷರು – ಭಾರತಿ ಮರ್ಕಂಜ
ಕಾರ್ಯದರ್ಶಿ – ನಾರಾಯಣ ಅಜ್ಜಿಕಲ್ಲು
ಜೊತೆ ಕಾರ್ಯದರ್ಶಿ – ಪರಮೇಶ್ವರ ನೆಡ್ಚಿಲ್
ಕೋಶಾಧಿಕಾರಿ – ಅಮಿತ ಮರ್ಕಂಜ
ಹಾಗೂ ಸಮಿತಿಯ ಸದಸ್ಯರನ್ನಾಗಿ ಚಂದ್ರಶೇಖರ ಆಚಾರ್ಯ, ನವೀನ ಕುಮಾರ್, ಈಶ್ವರ ಆಚಾರ್ಯ, ಸವಿತಾ, ಯತೀಶ್ ಕಂಜಿಪಿಲಿ, ಪುಷ್ಪಲತಾ, ಚಂದ್ರಕಲಾ ಕುತ್ತ ಮೊಟ್ಟೆ ರವರನ್ನು ಆಯ್ಕೆ ಮಾಡಲಾಯಿತು.
ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ತೀರ್ಥರಾಮ ಅಡಕಬಳೆ, K R ಪದ್ಮನಾಭ, ರಾಮಚಂದ್ರ ಕಲ್ಲ ಗ ದ್ದೆರವರು ಕಾರ್ಯಕ್ರಮದ ಬಗ್ಗೆ ಉದ್ದೇಶಿಸಿ ಶುಭ ಹಾರೈಸಿದರು.
ನೂತನ ಆಯ್ಕೆಯಾದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ವಲಯದ ಅಧ್ಯಕ್ಷರಾದ ಭಾರತಿ ಪುರುಷೋತ್ತಮ ರವರು ಮುಂದಿನ ದಿನಗಳಲ್ಲಿ ವಲಯದ ಭಜನಾ ಪರಿಷತ್ ಉತ್ತಮ ರೀತಿಯಲ್ಲಿ ಮುಂದುವರಿಸಲು ಸಹಕಾರವನ್ನು ಕೋರಿದರು.
ಸಂಪಾಜೆ ವಲಯದಲ್ಲಿ 24 ಭಜನಾ ಮಂಡಳಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದು. ಮರ್ಕಂಜ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಸ್ವಾಗತಿಸಿದರು. ವಲಯದ ಮೇಲ್ವಿಚಾರಕರಾದ ಹರೀಶ್ ನಿರೂಪಣೆ ಮತ್ತು ವಂದಿಸಿದರು. ಹಾಗೂ ವಲಯದ ಸೇವಾ ಪ್ರತಿನಿಧಿ ಮತ್ತು VLE ಉಪಸ್ಥಿತರಿದ್ದರು.
ಅರಂತೋಡು : ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಭೆ
