ಕಾಡಾನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ

ಅರಂತೋಡು, ಜೂ.16 : ಅಲೆಟ್ಟಿ ಗ್ರಾಮದ ಕಲ್ಲರ್ಪೆ ಪಾಲಡ್ಕ, ಅರಂಬೂರು, ಪರಿವಾರಕಾನದ ರಸ್ತೆಯ ಸಮೀಪದ ಕೃಷಿಕರಿಗೆ ಆನೆ ಹಾವಳಿ ಮಾಡುತ್ತಿದ್ದು ತುರ್ತು ಕೃಮ ಕೈಗೊಳ್ಳುವಂತೆ ಸ್ಥಳೀಯರು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಅಲೆಟ್ಟಿ ಗ್ರಾಮದ 6ನೇ ಕ್ಷೇತ್ರ ಅರಂಬೂರು, ಪರಿವಾರಕಾನ, ಪಾಲಡ್ಕ, ಕಲ್ಚೆರ್ಪೆ ಬಾಗವು ಪೂಮಲೆ ಅರಣ್ಯ ರಕ್ಷಿತಾರಣ್ಯ ಸಮೀಪವಿದ್ದು, ಕಳೆದ ಹಲವಾರು ಸಮಯಗಳಿಂದ ಆನೆಗಳ ಹಿಂಡು ಸುಮಾರು ಬಹುತೇಕ ಕೃಷಿಕರ ಕೃಪಾವಳಿಗಳನ್ನು ನಾಶಮಾಡಿದೆ. ಈಗಲೂ ದಿನಾ ರಾತ್ರೆಯಾದ ತಕ್ಷಣ ಭಯದ ವಾತಾವರಣ ಜನರದ್ದು ಆಗಿದೆ ಹಾಗೂ ರಾತ್ರಿ ಪೂರ್ತಿ ನಿದ್ರೆಯಿಲ್ಲದೆ ರೈತರು ಕಂಗಲಾಗಿರುತ್ತಾರೆ. ಈ ಭಾಗದಲ್ಲಿ ಸುಮಾರು 220ಕ್ಕಿಂತಲೂ ಅಧಿಕ ಮನೆಗಳು ಹಾಗೂ ಸುಮಾರು 400ಎಕರೆ ಪ್ರದೇಶಗಳಲ್ಲಿ ಬಾಳೆ, ತೆಂಗು,ಭತ್ತ,ಅಡಿಕೆ ಕೃಷಿ ಮಾಡುತ್ತಿದ್ದು, ಇದು ಸಂಪೂರ್ಣ ನಾಶದ ಅಂಚಿಗೆ ಬಂದಿರುತ್ತದೆ, ಅಲ್ಲದೆ ರಾತ್ರೆ ವಾಹನ ಸಂಚಾರಕ್ಕೆ ಭಯವಾಗಿದ್ದು, ರಾತ್ರಿ ಸರ್ವೇ ಸಾಮಾನ್ಯ ರಾಜರಸ್ತೆಯಲ್ಲಿ ಕಾಣಿಸುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೂ ಶಾಶ್ವತ ಪರಿಹಾರ ಸಿಗಲಿಲ್ಲ.
ಈ ಬಗ್ಗೆ ರಾಜರಸ್ತೆಯ ಸಮೀಪ ಇಕ್ಕಡೆಗಳಲ್ಲಿ 50 ಮೀಟರ್‌ಗೆ ಒಂದರಂತೆ ವಿದ್ಯುದೀಪ ಅಳವಡಿಸುವುದು, ಹಾಗೂ ಆನೆ ತಡೆಗೋಡೆಯನ್ನು ಅಗತ್ಯವಾಗಿ ಪರಿವಾರಕಾನದಿಂದ-ಮರದ ಡಿಪೋ-ಪಾಲಡ್ಕದಿಂದ ಕಲ್ಬರ್ಪೆ ತನಕ ತುರ್ತಾಗಿ ಕಾಮಾಗಾರಿ ಮಾಡಿ ರೈತಾಪಿ ಜನರ ಪ್ರಾಣ ಉಳಿಸಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.ಈ ಸಂದರ್ಭದಲ್ಲಿ ಜಗದೀಶ್ ಸರಳಿಕುಂಜ, ಶ್ರೀಪತಿ ಭಟ್, ಅನಿಲ್‌ ಪರಿವಾರಕಾನ, ಅಶೋಕ್ ಪೀಚೆ, ಸುದೇಶ್ ಅರಂಬೂರು, ರವಿ, ಪುಷ್ಪಾವತಿ ಕುಡೆಕಲ್ಲು, ಗುರುಪ್ರಸಾದ್ ಕುಡೆಕಲ್ಲು, ಶಬರೀಶ ಪರಿವಾರಕಾನ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಯಥಾ ಪ್ರತಿಯನ್ನು‌ ಸಂಸದ
ಕ್ಯಾಪ್ಟನ್ ಬ್ರಿಜೇಶ್ ಚೌಟ,
ಶಾಸಕಿ ಕು.ಭಾಗೀರಥಿ ಮುರುಳ್ಯ
ಅರಣ್ಯ ಸಚಿವರು ಕರ್ನಾಟಕ ಘನ ಸರಕಾರ
ದ.ಕ‌ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್
ಸುಳ್ಯ ತಹಶೀಲ್ದಾರಿಗೆ,
ಅಲೆಟ್ಟಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಿಗೆ ಅಭಿವೃದ್ಧಿ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top