ಪುತ್ತೂರಿನ ವಿದ್ಯಾರ್ಥಿನಿಯನ್ನು ವಂಚಿಸಿ ಗರ್ಭಿಣಿಯಾಗಿಸಿದ ಪ್ರಕರಣದ ಆರೋಪಿ ಪತ್ತೆ ಕಾರ್ಯ ಮುಂದುವರಿಯುತ್ತಿರುವ ಬೆನ್ನಲೇ ಶುಕ್ರವಾತ ರಾತ್ರಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯೂ ಜೂ 24 ರಂದು ರಾತ್ರಿ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ. ರಾವ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಇದೀಗ ಮದುವೆಯಾಗಲು ನಿರಾಕರಿಸಿರುವುದಾಗಿ ಅತ್ಯಾಚಾರ ಹಾಗೂ ನಂಬಿಕೆ ದ್ರೋಹದ ಪ್ರಕರಣ ದಾಖಲಿಸಿದ್ದರು.
ಸಂತ್ರಸ್ತ ಯುವತಿಯ ತಾಯಿ ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಿಗದಿ ಮಾಡಿದ್ದರು. ಆದರೇ ನಿಗದಿತ ಸಮಯಕ್ಕೆ ಮಹಿಳೆ ಬಾರದೇ ಪತ್ರಿಕಾಗೋಷ್ಟಿ ರದ್ದಾಗಿತ್ತು. ಸಂತ್ರಸ್ತೆಗೆ ಆರೋಗ್ಯ ಸಮಸ್ಯೆಯೆಂಬ ಕಾರಣವನ್ನು ಕುಟುಂಬದ ಆಪ್ತ ವಲಯ ನೀಡಿತ್ತು.
ಮಗುವಿಗೆ ಜನ್ಮ ನೀಡಿದ ವಂಚನೆಗೊಳಗಾಗಿ ಗರ್ಭವತಿಯಾದ ವಿದ್ಯಾರ್ಥಿನಿ

















