ಪೆರಾಜೆ ಸಮೀಪ ಬೈಕ್ ಸ್ಕಿಡ್ ಆಗಿ ನಿಡುಬೆಯ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ವರದಿಯಾಗಿದೆ.
ಐವರ್ನಾಡು ಗ್ರಾಮದ. ಸುಬ್ರಹ್ಮಣ್ಯ ಅವರ ಮಗ ಗೋಪಿನಾಥ(40) ಎಂಬ ವ್ಯಕ್ತಿಯೇ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.
ತಲೆಗೆ ಗಂಭೀರ ಗಾಯವಾದ ವ್ಯಕ್ತಿಯನ್ನು ಸುಳ್ಯ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ.



































