ಮಂಗಳೂರುದಿಂದ ಮೈಸೂರು ಕಡೆಗೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ತೀವ್ರ ಅಸ್ವಸ್ಥತೆ ಉಂಟಾದ ಘಟನೆ ಭಾನುವಾರ ನಡೆದಿದ್ದು ಸಮಯೋಚಿತ ಸ್ಪಂದನೆ ನೀಡಿದ ಬಸ್ ಚಾಲಕ ಬಸ್ಸನ್ನೇ ತಕ್ಷಣ ಸುಳ್ಯದ ಕೆವಿಜಿ ಆಸ್ಪತ್ರೆಗೆ ಚಲಾಯಿಸಿಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ ಘಟನೆ ವರದಿಯಾಗಿದೆ.
ಮೈಸೂರು ಮೂಲದ ಶೋಭಾ ಎಂಬ ಮಹಿಳೆಗೆ ಬಸ್ಸು ಸುಳ್ಯ ತಲುಪುವ ಹೊತ್ತಿಗೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಪ್ರಜ್ಞೆ ತಪ್ಪುವ ಹಂತಕ್ಕೆ ಬಂದಿದ್ದರು ಕೂಡಲೇ ಸಹಪ್ರಯಾಣಿಕರು ಚಾಲಕನ ಗಮನಕ್ಕೆ ತಂದಾಗ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕೂಡಲೇ ಬಸ್ಸನ್ನೇ ಕೆವಿಜಿ ಆಸ್ಪತ್ರೆಗೆ ತಂದು ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದಾರೆ ಚಾಲಕನ ಸಮಯೋಜಿತ ಮಾನವೀಯ ಸ್ಪಂದನೆಗೆ ಸಾರ್ವಜನಿಕರಿಂದ ಬಾರಿ ಪ್ರಶಂಸೆ ವ್ಯಕವಾಗುತ್ತಿದೆ.
ಬಸ್ಸಿನಲ್ಲಿ ಮಹಿಳೆಗೆ ತೀವ್ರ ಅಸ್ವಸ್ಥ !: ಬಸ್ಸನ್ನೇ ಕೆವಿಜಿ ಆಸ್ಪತ್ರೆಗೆ ಚಲಾಯಿಸಿಕೊಂಡು ಹೋಗಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಚಾಲಕ

















