ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ , ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವಿಟ್ಲ, ತಾಲೂಕು ಪಂಚಾಯತ್ ಸುಳ್ಯ, ಇವರುಗಳ ಜಂಟಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ ನೇರ ಪ್ರಸಾರ ವೀಕ್ಷಣೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರಮೇಶ್ ಟಿ. ಜೆ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಕೃಷಿ
ವಿಜ್ಞಾನ ಕೇಂದ್ರ ಮಂಗಳೂರು, ಶ್ರೀ ಹರೀಶ್ ಶೆಣೈ ಬೇಸಾಯ ಶಾಸ್ತ್ರ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಶ್ರೀಮತಿ ಶ್ವೇತ ತಾಲೂಕು ವ್ಯವಸ್ಥಾಪಕರು ಎನ್, ಆರ್ , ಎಲ್,ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಮೇಶ್ ರವರು ಕಾರ್ಯಕ್ರಮ ಉದ್ದೇಶ ಮತ್ತು ದೇಶಕ್ಕೆ ವಿವಿಧ ಕೃಷಿ ಯೋಜನೆ ಅರ್ಪಣೆ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಸಖಿ, ಪಶು ಸಖಿ ಗಳು, ಎಂ. ಬಿ.ಕೆ, ಎಲ್. ಸಿ ಆರ್ ಪಿ , ರೈತರು, ಸಂಜೀವಿನಿ ಒಕ್ಕೂಟ ಸದಸ್ಯರು, ರೈತ ಉತ್ಪಾದಕರ ಕಂಪೆನಿಯ ಸದಸ್ಯರು ಭಾಗವಹಿಸಿದ್ದರು.



































