ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ರಾಶಿ ಹಾಕಲಾದ ಕಸವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ನಗರ ಪಂಚಾಯತ್ ಎದುರು ಧರಣಿ ನಡೆಸಿದರು.
ತ್ಯಾಜ್ಯಗಳನ್ನು ತೆರವುಗೊಳಿಸಬೇಕೆಂದು
ನಗರ ಪಂಚಾಯತ್ ಗೆ ಮನವಿ ಸಲ್ಲಿಸಲು ಸ್ಥಳೀಯ ನಿವಾಸಿಗಳು ಆಗಮಿಸಿದ್ದರು.ಈ ಸಂಧರ್ಭದಲ್ಲಿ ನಗರ ಪಂಚಾಯತ್ ನಲ್ಲಿ ಮನವಿ ಸ್ವೀಕರಿಸಿಲ್ಲವೆಂದು ಕಲ್ಚೆರ್ಪೆ ನಿವಾಸಿಗಳು ಧರಣಿ ಕುಳಿತರು.ಬಳಿಕ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಮುಖ್ಯಾಧಿಕಾರಿ ಬಸವರಾಜು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು.ನಂತರ ಕಲ್ಚೆರ್ಪೆ ನಿವಾಸಿಗಳಿಂದ ಮನವಿ ಸ್ವೀಕರಿಸಿದರು. ಸೂಕ್ತ ಭರವಸೆಯ ಬಳಿಕ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.
ಕಲ್ಚೆರ್ಪೆಯ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯಗಳನ್ನು ಬರ್ನ್ ಮಾಡದೆ ಅನೇಕ ತಿಂಗಳುಗಳಿಂದ ರಾಶಿ ಹಾಕಲಾಗುತ್ತಿದೆ.
ಸುಳ್ಯ : ತ್ಯಾಜ್ಯ ತೆರವುಗೊಳಿಸಲು ಕಲ್ಚೆರ್ಪೆ ನಿವಾಸಿಗಳಿಂದ ನಗರ ಪಂಚಾಯತ್ ಎದರು ಧರಣಿ



































