ಅರಂಬೂರು ನಾಗೇಶ್ ರೈಯವರ ಮಾಲಕತ್ವದ ಹೋಟೆಲ್ ಶ್ರೀ ಚಾಮುಂಡೇಶ್ವರಿ (ಸಸ್ಯಹಾರಿ ಮತ್ತು ಮಾಂಸಹಾರಿ) ಅ. 20 ರಂದು ಅರಂಬೂರಿನಲ್ಲಿ ಉದ್ಘಾಟನೆಗೊಂಡಿದೆ.
ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿಯವರು ನೂತನ ಹೋಟೇಲ್ ನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲ ಕೆ.ಆರ್.ಗಂಗಾಧರ್, ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷೆ ವೀಣಾ ವಸಂತ್, ಸುಳ್ಯ ತಾಲೂಕು ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ, ಉದ್ಯಮಿಗಳಾದ ಲ. ರಮೇಶ್ ಶೆಟ್ಟಿ, ದೇವಿಪ್ರಸಾದ್ ಕುದ್ಪಾಜೆ, ಆಲೆಟ್ಟಿ ಗ್ರಾ.ಪಂ. ಸದಸ್ಯ ಸುದೇಶ್ ಅರಂಬೂರು, ಅಣ್ಣು ಶೆಟ್ಟಿ ಬೆಳ್ಳಿಪ್ಪಾಡಿ ಕೈಪ, ಅರಣ್ಯ ಇಲಾಖೆಯ ಬಾಲಕೃಷ್ಣ ಅರಂಬೂರು ಉಪಸ್ಥಿತರಿದ್ದರು. ಗಂಗಾಧರ ಆಳ್ವ ಕೈಪ ಕಾರ್ಯಕ್ರಮ ನಿರೂಪಿಸಿದರು.
ಧರ್ಮದರ್ಶಿ ಹರೀಶ್ ಆರಿಕೋಡಿಯವರನ್ನು ನಾಗೇಶ್ ರೈ ಮತ್ತು ಶ್ರೀಮತಿ ವಿಜಯಲಕ್ಷ್ಮಿ ರೈ ದಂಪತಿಗಳು ಗೌರವಿಸಿದರು.
ಇದೇ ಸಂದರ್ಭದಲ್ಲಿ ನಾಗೇಶ್ ರೈ ಅವರಿಗೆ 20 ವರ್ಷದಿಂದ ಸಹಕರಿಸುತ್ತಿರುವ ಹರೀಶ್ ಪೆರಿಗೇರಿಯವರನ್ನು ಧರ್ಮದರ್ಶಿ ಹರೀಶ್ ಆರಿಕೋಡಿಯವರು ಸನ್ಮಾನಿಸಿದರು.
ಚಾಮುಂಡೇಶ್ವರಿ ಕ್ಯಾಟರಿಂಗ್ನ ಸಿಬಂದಿ ವರ್ಗ ಸಹಕರಿಸಿದರು.
ಅರಂಬೂರು: ಹೋಟೆಲ್ ಶ್ರೀ ಚಾಮುಂಡೇಶ್ವರಿ ಲೋಕಾರ್ಪಣೆ

















