ಸುಳ್ಯದ ಅಮರ ಶಿಲ್ಪಿ ಡಾ.ಕುರುಂಜಿ ವೆಂಕಟರಮಣ ಗೌಡರ ದ್ವಿತೀಯ ಪುತ್ರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಲಿರುವ ಬೆಳ್ಳಿರಥ ಯಾತ್ರೆ ಸೆ.5ರಂದು ಸುಳ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟಿದೆ.
ಶಾಸಕಿ ಭಾಗೀರಥಿ ಮುರುಳ್ಯ ರಥಯಾತ್ರೆಗೆ ಚಾಲನೆ ನೀಡಿದರು.ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್,
ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ,ಕೆವಿಜಿ ಸಂಸ್ಥೆಗಳ ಬಿ ಕಮಿಟಿ ಸಿಬ್ಬಂದಿಗಳು, ವಿವಿಧ ರಾಜಕೀಯ ಪಕ್ಷದ ಸ್ಥಳೀಯ ನಾಯಕರು,ಸಹಕಾರ ಸಂಘದ ಅಧ್ಯಕ್ಷರು,ನಿರ್ದೆಶಕರು,ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.ವಿವಿಧ ಕ್ಷೇತ್ರಗಳಲ್ಲಿ ಸ್ವಾಗತ, ಪುಷ್ಪಾರ್ಚನೆ ಸ್ವೀಕರಿಸಿಕೊಂಡು ಕುಕ್ಕೆ ದೇವಳದತ್ತ ರಥ ಪ್ರಯಾಣ ಬೆಳೆಸಲಿದೆ. ಬೆಳಿಗ್ಗೆ 8.15 ಕ್ಕೆ ಕಾಂತಮಂಗಲದಿಂದ ಹೊರಟು, ಕುರುಂಜಿಭಾಗ್ ನಲ್ಲಿ ಕೆ.ವಿ.ಜಿ. ಕ್ಯಾಂಪಸ್ ಎದುರುಗಡೆ ಇರುವ ದಿ.ಡಾ.ವೆಂಕಟ್ರಮಣ ಗೌಡರ ಪ್ರತಿಮೆಯ ಎದುರು ರಥ
ಸಾಗಿ ಬಂತು. ಸರಿಯಾಗಿ 8.30 ಕ್ಕೆ ಕೆ.ವಿ.ಜಿ. ಪ್ರತಿಮೆಯ ಎದುರಿನಿಂದ ರಥಯಾತ್ರೆ ಹೊರಟಿತು.



































