ಅರಂತೋಡು ಬದ್ರಿಯಾ ಜುಮಾಮಸೀದಿ ಇದರ ವಾರ್ಷಿಕ ಮಹಾ ಸಭೆಯು ಅಧ್ಯಕ್ಷ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ಜ. 16 ರಂದು ನಡೆಯಿತು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ ಮೂಸಾನ್ ವರದಿ ವಾಚಿಸಿ, ಲೆಕ್ಕಪತ್ರಗಳನ್ನು ಮಂಡಿಸಿದರು. ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ (ಸಚಿವ ಸ್ಥಾನ ಮಾನ) ಹಾಗೂ ನಿವೃತ್ತ ಉಪನ್ಯಾಸಕ ಎ. ಅಬ್ದುಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲಿ ಅಧ್ಯಕ್ಷರಾಗಿ ಅಶ್ರಫ್ ಗುಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ , ಉಪಾಧ್ಯಕ್ಷರು ಹಾಜಿ ಕೆ.ಎಂ ಮೊಹಮ್ಮದ್ , ಜತೆ ಕಾರ್ಯದರ್ಶಿಗಳಾಗಿ ಎ.ಹನೀಫ್, ಅಮೀರ್ ಕುಕ್ಕುಂಬಳ, ನಿರ್ದೇಶಕರುಗಳಾಗಿ ಹಾಜಿ ಅಬ್ದುಲ್ ಖಾದರ್ ಪಠೇಲ್, ಕೆ.ಎಂ ಮೊಯಿದು ಕುಕ್ಕುಂಬಳ, ಮನ್ಸೂರ್ ಪಾರೆಕ್ಕಲ್ ಸಂಶುದ್ಧೀನ್ ಪೆಲ್ತಡ್ಕ, ಮುಜೀಬ್ ಪುನರಾಯ್ಕೆಯಾದರು. ಗೌರವ ಸಲಹೆಗಾರರಾಗಿ ಟಿ.ಎಂ ಶಹೀದ್ ತೆಕ್ಕಿಲ್, ಹಾಜಿ ಎ ಅಬ್ದುಲ್ಲ ಹಾಗೂ ಹಾಜಿ ಬದುರುದ್ಧೀನ್ ಪಠೇಲ್ ಇವರನ್ನು ಆಯ್ಕೆ ಮಾಡಲಾಯಿತು.
ಅರಂತೋಡು ಜಮಾಅತ್ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಅಶ್ರಫ್ ಗುಂಡಿ ಪುನರಾಯ್ಕೆ

















