ಗುತ್ತಿಗಾರಿನ ವಳಲಂಬೆ ಬಳಿ ತೋಟವೊಂದರಿಂದ ಫೆ.11 ರ ಸಂಜೆ ಹಣ್ಣಡಿಕೆ ಕದ್ದಿರುವುದಾಗಿ ವರದಿಯಾಗಿದ್ದು ಅವರನ್ನು ಸುಬ್ರಹ್ಮಣ್ಯ ಪೋಲೀಸರಿಗೆ ಸ್ಥಳೀಯರು ಪೆ.12ರಂದು ಒಪ್ಪಿಸಿರುವುದಾಗಿ ತಿಳಿದು ಬಂದಿದೆ.
ಇಬ್ಬರು ಗಂಡಸು, ಒಬ್ಬರು ಹೆಂಗಸು ಇದ್ದು ಮೂವರು ಸೇರಿ ಈ ಹಿಂದೆ ಕೂಡ ಇದೇ ರೀತಿ ಕಳ್ಳತನ ನಡೆಸಿ ಸಿಕ್ಕಿ ಬಿದ್ದಿದ್ದರೆನ್ನಲಾಗಿದೆ. ಇದೀಗ ಇಲ್ಲಿನ ನಿವಾಸಿಗಳು ಕಾದು ಕುಳಿತು ಕಳ್ಳತನ ಮಾಡಿರುದವರನ್ನು ಪೊಲೀಸರಿಗೆ ಒಪ್ಪಿಸಿದರು.ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಗುತ್ತಿಗಾರು : ಅಡಿಕೆ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಊರವರು

















