ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪರಿವಾರಕಾನ ನಿವಾಸಿ ಚಂದ್ರಶೇಖರ್ (55 ವರ್ಷ)ರವರು ಹೃದಯಾಘಾತದಿಂದ ಫೆ.12ರಂದು ರಾತ್ರಿ ನಿಧನರಾದರು
ರಾತ್ರಿ ಎದೆನೋವು ಕಾಣಿಸಿಕೊಂಡು ತಕ್ಷಣ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಗೆ ತಲುಪುವ ವೇಳೆಗೆ ಹೃದಯಘಾತದಿಂದ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.
ಮೃತರು ಪತ್ನಿ , ಪುತ್ರ , ಪುತ್ರಿ ಇಬ್ಬರು ಸಹೋದರರನ್ನು ಒಬ್ಬರು ಸಹೋದರಿಯನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.
ಪರಿವಾರಕಾನ : ಹೃದಯಾಘಾತದಿಂದ ನಿಧನ

















