April 2026

ಶ್ರದ್ಧಾ ಭಕ್ತಿಯಿಂದ ನಡೆದ ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಎ.24 ಮತ್ತು ಎ.25ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.ಈ ಸಂದರ್ಭದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಕೆ ಕೇಶವ ಕೊಳಲು ಮೂಲೆ, ದೈವಸ್ಥಾನದ,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು,ತೀರ್ಥರಾಮ ಪರ್ನೋಜಿ,ತಿಮ್ಮಯ್ಯ ಮೆತ್ತಡ್ಕ ದೇವಳದ ವ್ಯವಸ್ಥಾಪಕ ಆನಂದ […]

ಶ್ರದ್ಧಾ ಭಕ್ತಿಯಿಂದ ನಡೆದ ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ Read More »

ರೈಲಿನ ಗಾಳಿಗೆ ಸಿಲುಕಿ 5 ವರ್ಷದ ಬಾಲಕಿ ದುರ್ಮರಣ!

ಕಾಸರಗೋಡುದಲ್ಲಿ ನೆನ್ನೆ ದುರ್ಘಟನೆಯೊಂದು ನಡೆದಿದೆ.ಮೊಗ್ರಾಲ್ ನಾಂಗಿಯಲ್ಲಿ ರೈಲು ಹಳಿಯ ಸಮೀಪ ನಡೆದುಹೋಗುತ್ತಿದ್ದ ವೇಳೆ ಮಂಗಳೂರಿನಿಂದ ತಿರುವನಂತಪುರಕ್ಕೆ ಸಂಚರಿಸುತ್ತಿದ್ದ ಮಾವೇಲಿ ಎಕ್ಸ್‌ಪ್ರೆಸ್‌ ರೈಲಿನ ಬಲವಾದ ಗಾಳಿಗೆ ಸಿಲುಕಿ 5 ವರ್ಷದ ಮರಿಯಂ ನವಾಲ್ ತಾಹೀರ್ ಹಾಗೂ ಅಜ್ಜಿ ನಫೀಸ ಬಿದ್ದು ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಅಜ್ಜಿ ನಫೀಸ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೈಲಿನ ಗಾಳಿಗೆ ಸಿಲುಕಿ 5 ವರ್ಷದ ಬಾಲಕಿ ದುರ್ಮರಣ! Read More »

ಶೀಘ್ರವೇ ಮದ್ಯದ ದರ ಏರಿಕೆ !

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಐದನೇ ಬಾರಿಗೆ ಮದ್ಯದ ದರ ಏರಿಕೆಯಾಗುವ ಸಾಧ್ಯತೆಯಿದೆ. ಮೇ 1 ರಿಂದ ಜಾರಿಗೆ ಬರಲಿರುವ ಹೊಸ ಅಬಕಾರಿ ನೀತಿಯಂತೆ, ಮದ್ಯದಲ್ಲಿರುವ ಆಲೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದಾಗಿ ಸಾಮಾನ್ಯ ಜನರು ಬಳಸುವ ಮದ್ಯದ ಬೆಲೆ ಶೇ. 20ರಷ್ಟು ಏರಿಕೆಯಾಗಲಿದ್ದು, ಮಧ್ಯಮ ಮತ್ತು ಕೆಳವರ್ಗದ ಮದ್ಯಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ. ವಿಸ್ಕಿ, ರಮ್, ಬ್ರಾಂಡಿ, ಜಿನ್ ಬೆಲೆಗಳು ಕ್ವಾರ್ಟ‌್ರಗೆ 15-25 ರೂ. ಹೆಚ್ಚಾಗುವ ಅಂದಾಜಿದೆ.

ಶೀಘ್ರವೇ ಮದ್ಯದ ದರ ಏರಿಕೆ ! Read More »

ನಾಳೆ ಸುಳ್ಯದ ಹಲವು ಭಾಗಗಳಲ್ಲಿ ಪವರ್ ಕಟ್

ಏ. 25ರಂದು ಮೆಸ್ಕಾಂ ಸುಳ್ಯ ಉಪವಿಭಾಗದ 33/11 ಕೆ.ವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೋಡಿಕಾನ, ಕೊಲ್ಟಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ತುರ್ತು ನಿರ್ವಹಣಾ ಕೆಲಸದ ಕಾರಣ ಬೆಳಿಗ್ಗೆ 10:00 ರಿಂದ ಸಂಜೆ 6:00ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

ನಾಳೆ ಸುಳ್ಯದ ಹಲವು ಭಾಗಗಳಲ್ಲಿ ಪವರ್ ಕಟ್ Read More »

ಕೆ.ಪಿ.ಎಸ್ ಬೆಳ್ಳಾರೆಗೆ ಶೇ.100 ಫಲಿತಾಂಶ

ಬೆಳ್ಳಾರೆ ಕೆ.ಪಿ.ಎಸ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ.ಪರೀಕ್ಷೆ ಎದುರಿಸಿರುವ 148 ವಿದ್ಯಾರ್ಥಿಗಳೂ ಕೂಡ ಉತ್ತೀರ್ಣರಾಗಿದ್ದಾರೆ.ವಿವಿಧ ಶ್ರೇಣಿಯ ವಿವರ :-4 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದರೆ.ವಿಶಿಷ್ಠ ಶ್ರೇಣಿಯಲ್ಲಿ 33 ಮಂದಿ,ಪ್ರಥಮ ದರ್ಜೆಯಲ್ಲಿ 98 ಮಂದಿ’ದ್ವೀತಿಯ ದರ್ಜೆಯಲ್ಲಿ 13 ಮಂದಿ ಉತ್ತೀರ್ಣರಾಗಿದ್ದಾರೆ.

ಕೆ.ಪಿ.ಎಸ್ ಬೆಳ್ಳಾರೆಗೆ ಶೇ.100 ಫಲಿತಾಂಶ Read More »

ಸುಳ್ಯ ಗಾಂಧಿನಗರ ಕೆ. ಪಿ. ಎಸ್.ಗೆ ಶೇ 100 ಫಲಿತಾಂಶ

ಸುಳ್ಯ ಗಾಂಧಿನಗರ ಕೆ. ಪಿ. ಎಸ್. ಶೇ 100 ಫಲಿತಾಂಶ ವನ್ನು ದಾಖಲಿಸಿದೆ.ಪರೀಕ್ಷೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸುಳ್ಯ ಗಾಂಧಿನಗರ ಕೆ. ಪಿ. ಎಸ್.ಗೆ ಶೇ 100 ಫಲಿತಾಂಶ Read More »

ಅರಂತೋಡು : ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ಎನ್.ಯಂ.ಪಿ‌.ಯು.ಸಿ ಗೆ ಶೇ.100 ಫಲಿತಾಂಶ

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಅರಂತೋಡು ಎನ್‌ಎಂಪಿಯು ಗೆ ಶೇ.100 ಫಲಿತಾಂಶ ದಾಖಲಿಸಿದೆ.ಪರೀಕ್ಷೆ ಬರೆದ 86 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 18 ಮಂದಿ ಡಿಸ್ಟಿಂಕ್ಷನ್ ಹಾಗೂ 67 ಮಂದಿ ಪ್ರಥಮ ದರ್ಜೆಯಲ್ಲಿ, ಓರ್ವ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.

ಅರಂತೋಡು : ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ಎನ್.ಯಂ.ಪಿ‌.ಯು.ಸಿ ಗೆ ಶೇ.100 ಫಲಿತಾಂಶ Read More »

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಳ್ಯದ ಅಶ್ವಿತಾಳಿಗೆ ರಾಜ್ಯದಲ್ಲಿ 7ನೇ ಸ್ಥಾನ

ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಅಶ್ವಿತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಪಡೆದು ರಾಜ್ಯದಲ್ಲಿ ಏಳನೇ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ.ಅಶ್ವಿತಾ ಮಹಾಬಲಡ್ಕ ದಾಮೋದರ ಹಾಗೂ ಶೀಲಾವತಿ ದಂಪತಿ ಪುತ್ರಿ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಳ್ಯದ ಅಶ್ವಿತಾಳಿಗೆ ರಾಜ್ಯದಲ್ಲಿ 7ನೇ ಸ್ಥಾನ Read More »

ಹಿಮಾದ್ರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 602 ಅಂಕ

ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ‌ ವಿದ್ಯಾರ್ಥಿನಿ ಹಿಮಾದ್ರಿ ಸಿ.ಎಂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 602 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.ಹಿಮಾದ್ರಿ ಗಾಂಧಿನಗರ ಪ್ರೌಢಶಾಲೆಯ ಸಹಶಿಕ್ಷಕ ಮುಡೂರು ಪುತ್ತುಕುಂಜ ಚಿನ್ನಪ್ಪ ಗೌಡ ಅವರ ಪುತ್ರಿ.

ಹಿಮಾದ್ರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 602 ಅಂಕ Read More »

ಈ ವರ್ಷ ರಾಜ್ಯದಲ್ಲಿ ಎಸ್.ಎಲ್.ಸಿಯಲ್ಲಿ ದಾಖಲೆಯ ಫಲಿತಾಂಶ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬುಧವಾರ ಶಿಕ್ಷಣ ಇಲಾಖೆಯ ವೆಬ್ ಸೈಟ್‌ನಲ್ಲಿ ಪ್ರಕಟವಾಗಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ವಿವರ ನೀಡಿದರು. ಈ ಬಾರಿ SSLC ಪರೀಕ್ಷೆಯಲ್ಲಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದಾಖಲೆಯ ಫಲಿತಾಂಶ ಬಂದಿದೆ ಎಂದು ಸಚಿವರು ತಿಳಿಸಿದರು.ಮೂವರು ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ),

ಈ ವರ್ಷ ರಾಜ್ಯದಲ್ಲಿ ಎಸ್.ಎಲ್.ಸಿಯಲ್ಲಿ ದಾಖಲೆಯ ಫಲಿತಾಂಶ : ಶಿಕ್ಷಣ ಸಚಿವ ಮಧು ಬಂಗಾರಪ್ಪ Read More »

error: Content is protected !!
Scroll to Top