April 2026

ರಾಜ್ಯದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ’ ಸಾಧ್ಯತೆಹವಾಮಾನ ಇಲಾಖೆ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ಏಪ್ರಿಲ್ 30 ಮತ್ತು ಮೇ 1 ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ, ವಿಶೇಷವಾಗಿ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಏಪ್ರಿಲ್ 29 ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ’ ಸಾಧ್ಯತೆಹವಾಮಾನ ಇಲಾಖೆ ಎಚ್ಚರಿಕೆ Read More »

ಗುಜರಾತ್ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು!

ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 15 ಪುರಸಭೆ ನಿಗಮಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಏಪ್ರಿಲ್ 26 ರಂದು ನಡೆದ ಈ ಚುನಾವಣೆಯಲ್ಲಿ 15 ಪಾಲಿಕೆಗಳು, 84 ಪುರಸಭೆಗಳು, 34 ಜಿಲ್ಲಾ ಪಂಚಾಯತ್‌ಗಳು ಮತ್ತು 260 ತಾಲೂಕು ಪಂಚಾಯತ್‌ಗಳು ಸೇರಿದ್ದವು. ಅಹಮದಾಬಾದ್‌, ಸೂರತ್, ವಡೋದರಾ, ರಾಜ್‌ಕೋಟ್, ಭಾವನಗರ, ಜಾಮ್‌ನಗರ ಮುಂತಾದ ಪ್ರಮುಖ ನಗರಗಳು ಈ ಚುನಾವಣೆಯ ವ್ಯಾಪ್ತಿಗೆ ಒಳಪಟ್ಟಿದ್ದವು. ತಾಲೂಕು ಪಂಚಾಯಿತಿ ಫಲಿತಾಂಶಗಳಲ್ಲಿ ಬಿಜೆಪಿ 215, ಕಾಂಗ್ರೆಸ್ 15-20 ಮತ್ತು ಎಎಪಿ

ಗುಜರಾತ್ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು! Read More »

ಕಲ್ಲಂಗಡಿ ಸೇವಿಸಿದ ಒಂದೇ ಕುಟುಂಬದ ನಾಲ್ಕು ಮಂದಿ ಸಾವು!

ಗಂಡ, ಹೆಂಡತಿ, ಇಬ್ಬರು ಹೆಣ್ಣುಮಕ್ಕಳು ಕಲ್ಲಂಗಡಿ ಹಣ್ಣು ತಿಂದು ಅಸ್ವಸ್ಥರಾಗಿ ಮ್ರತಪಟ್ಟ ಘಟನೆ ಮುಂಬಯಿಂದ ವರದಿಯಾಗಿದೆ. ಶನಿವಾರ ರಾತ್ರಿ ವೀಕೆಂಡ್ ಹಿನ್ನಲೆಯಲ್ಲಿ ಅವರು ತಮ್ಮ ಸ್ನೇಹಿತರಿಗೆ ಮನೆಯಲ್ಲೇ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು. ರಾತ್ರಿ ಬಂದ ಅತಿಥಿಗಳು ಊಟ ಮಾಡಿ ಮನೆಗೆ ತೆರಳಿದ್ದರು. ಅಪ್ಪ-ಅಮ್ಮ-ಮಕ್ಕಳು ರಾತ್ರಿ ಕಲ್ಲಂಗಡಿ ಹಣ್ಣು (Watermelon) ಕಟ್ ಮಾಡಿ ತಿಂದು ಮಲಗಿದ್ದರು. ಆದರೆ, ಅದಾದ ಸ್ವಲ್ಪ ಹೊತ್ತಿನಲ್ಲೇ ನಾಲ್ವರಿಗೂ ವಾಂತಿ, ಭೇದಿ ಶುರುವಾಗಿತ್ತು. ಬೆಳಗಿನ ಜಾವವಾಗುವಷ್ಟರಲ್ಲಿ ಎದ್ದು ನಿಲ್ಲಲೂ ಆಗದಂತಹ ಸುಸ್ತು ಅವರನ್ನು ಆವರಿಸಿತ್ತು.ಹೀಗಾಗಿ,

ಕಲ್ಲಂಗಡಿ ಸೇವಿಸಿದ ಒಂದೇ ಕುಟುಂಬದ ನಾಲ್ಕು ಮಂದಿ ಸಾವು! Read More »

ಪಿಯುಸಿಯಲ್ಲಿ ಕಲಾ ವಿಭಾಗ ಯಾಕೆ ಆಯ್ಕೆ ಮಾಡಿಕೊಳ್ಳಬೇಕು?

ಎಸ್‌ಎಸ್‌ಎಲ್‌ಸಿ ನಂತರ ಪ್ರತಿಯೊಬ್ಬ ವಿದ್ಯಾರ್ಥಿಯ ಮುಂದಿರುವ ಪ್ರಮುಖ ಪ್ರಶ್ನೆ – ಮುಂದಿನ ವಿದ್ಯಾಭ್ಯಾಸಕ್ಕಾಗಿ ಯಾವ ವಿಭಾಗವನ್ನು ಆಯ್ಕೆ ಮಾಡಬೇಕು ಎಂಬುದು. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯ. ಸಾಮಾನ್ಯವಾಗಿ ಹೆಚ್ಚಿನವರು ವಿಜ್ಞಾನ (Science) ಅಥವಾ ವಾಣಿಜ್ಯ (Commerce) ವಿಭಾಗವನ್ನು ಆಯ್ಕೆ ಮಾಡುತ್ತಾರೆ. ಆದರೆ ಸಮಾಜದ ನಿರ್ಮಾಣಕ್ಕೆ, ಉತ್ತಮ ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ನೂರಾರು ಉದ್ಯೋಗಾವಕಾಶಗಳಿಗೆ ದಾರಿ ತೋರುವ ಪ್ರಮುಖ ವಿಭಾಗವೆಂದರೆ ಕಲಾ ವಿಭಾಗ

ಪಿಯುಸಿಯಲ್ಲಿ ಕಲಾ ವಿಭಾಗ ಯಾಕೆ ಆಯ್ಕೆ ಮಾಡಿಕೊಳ್ಳಬೇಕು? Read More »

ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ, ಬಂಧನ ಜೇಸಿಐ ಕುಟುಂಬ ಸಮ್ಮಿಲನದೊಂದಿಗೆ ಪೂರ್ವ ವಲಯಾಧ್ಯಕ್ಷರ ಸಮ್ಮೀಲನ, ಜೇಎಸಿ ಚೇರ್ಮನ್  ಭೇಟಿ

ಜೇಸಿಐ ಸುಳ್ಯ ಪಯಸ್ವಿನಿಘಟಕದಲ್ಲಿ ಬಂಧನ  ಅಧೀಕೃತ ಭೇಟಿ ಕಾರ್ಯಕ್ರಮವನ್ನು  ಎ.25ರಂದು ಸಂಚಯ ನಿವಾಸ ಚೂಂತಾರು ಇಲ್ಲಿ ಹಮ್ಮಿಕೊಳ್ಳಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಜೇಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ  ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜೇಎಸಿ ಚೇರ್ಮನ್ ಜೇಸಿಐ ಸೆನೆಟರ್ ಅಬ್ದುಲ್ ಜಬ್ಬಾರವರು ಜೇಸಿಐ ಸುಳ್ಯ ಪಯಸ್ವಿನಿಯ ಘಟಕದ ಕಾರ್ಯ ಚಟುವಟಿಕೆಗಳು ಮೂಲಕ ವಲಯ, ರಾಷ್ಟ್ರ ಮಟ್ಟದಲ್ಲಿ  ಗುರುತಿಸಿ ಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳುತ್ತಾ, ಶುಭ ಹಾರೈಸಿದರು.ಜೇಸಿಐ ವಲಯ 15ರ ವಲಯಾಧ್ಯಕ್ಷರಾದ ಜೆ.ಎಪ್.ಎಪ್

ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ, ಬಂಧನ ಜೇಸಿಐ ಕುಟುಂಬ ಸಮ್ಮಿಲನದೊಂದಿಗೆ ಪೂರ್ವ ವಲಯಾಧ್ಯಕ್ಷರ ಸಮ್ಮೀಲನ, ಜೇಎಸಿ ಚೇರ್ಮನ್  ಭೇಟಿ Read More »

ಅರಂತೋಡು : ಕಾರು ಬಸ್ಸು ಅಪಘಾತ,ಮಹಿಳೆಗೆ ಗಾಯ

ಸುಳ್ಯ ತಾಲೂಕಿನ‌ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ.ಎಸ್.ಆರ್.ಟಿ.ಸಿ ಸುಳ್ಯ ಕೊಯನಾಡು ಸರ್ವಿಸ್ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಏ.28ರಂದು ವರದಿಯಾಗಿದೆ.ಕಾರು ಜಖಂಗೊಂಡಿದ್ದು ಮಹಿಳೆಯನ್ನು‌ ಅಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ನಿಂತಿದ್ದ ಬಸ್ಸಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ.ಬಸ್ಸು ಮತ್ತು ಕಾರು ಕೊಯನಾಡು ಕಡೆಯಿಂದ ಸುಳ್ಯ ಕಡೆ ಬರುತ್ತಿತ್ತು.

ಅರಂತೋಡು : ಕಾರು ಬಸ್ಸು ಅಪಘಾತ,ಮಹಿಳೆಗೆ ಗಾಯ Read More »

ಅರಂತೋಡಿನಲ್ಲಿ ನಿರಂತರ 83 ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ

ಅರಂತೋಡು ಗ್ರಾಮ ಪಂಚಾಯತ್ ಮತ್ತು ದುರ್ಗಾ ಮಾತಾ ಸಂಜೀವಿನಿ ಒಕ್ಕೂಟ ಸಹಯೋಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವು ಏ.26ರಂದು ನಡೆಯಿತು.ಪೂ 7.30 ಯಿಂದ 9 30 ರ ವರೆಗೆ ನಡೆದ ಸದ್ರಿ ಕಾರ್ಯಕ್ರಮದಲ್ಲಿ ಕುಲ್ಚಾರು ಸೇತುವೆ ಯಿಂದ ಗ್ರಾಮ ಪಂಚಾಯತ್ ಕಚೇರಿಯ ಆವರಣದ ವರೆಗೆ ಹೆದ್ದಾರಿ ಬದಿಯನ್ನು ಸ್ವಚ್ಛ ಗೊಳಿಸಲಾಯಿತುಸದ್ರಿ ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು, ಸ್ವಚ್ಛತಾ ಸಿಬ್ಬಂದಿಗಳು, ದುರ್ಗಾಮಾತಾ ಸಂಜೀವಿನಿ ಒಕ್ಕೂಟ ದ ಪದಾಧಿಕಾರಿಗಳು, ಸಿಬ್ಬಂದಿ ಗಳು, ಸದಸ್ಯರು ಹಾಗೂ ಪ್ರತಿ

ಅರಂತೋಡಿನಲ್ಲಿ ನಿರಂತರ 83 ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ Read More »

ಪ್ರಧಾನಿ ಮೋದಿಯಿಂದ ಸಾಮಾನ್ಯ ದಂಪತಿಗೆ ಬಂತು ಉಡುಗೊರೆ

ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್‌ ಎಂಬ ಸಾಮಾನ್ಯ ಯುವಕನ ಮದುವೆ ಆಹ್ವಾನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಸ್ಪಂದಿಸಿದ್ದಾರೆ.ಏಪ್ರಿಲ್ 13ರಂದು ಸವಿತಾ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜೇಶ್, ಪ್ರಧಾನಿ ಕಚೇರಿಗೆ ಆಮಂತ್ರಣ ಪತ್ರ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ಅವರು ನವಜೋಡಿಗೆ ಶುಭಾಶಯ ಪತ್ರ ಕಳುಹಿಸಿ, “ಪರಸ್ಪರರ ಗುಣಗಳನ್ನು ಗೌರವಿಸುತ್ತಾ ಆದರ್ಶ ದಂಪತಿಗಳಾಗಿ ಬಾಳಿ” ಎಂದು ಹಾರೈಸಿದ್ದಾರೆ. ದೇಶದ ಅತ್ಯುನ್ನತಸ್ಥಾನದಲ್ಲಿದ್ದರೂ ಸಾಮಾನ್ಯ ಪ್ರಜೆಯ ಆಹ್ವಾನಕ್ಕೆ ಸ್ಪಂದಿಸಿದ ಪ್ರಧಾನಿಯ ಗುಣಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ

ಪ್ರಧಾನಿ ಮೋದಿಯಿಂದ ಸಾಮಾನ್ಯ ದಂಪತಿಗೆ ಬಂತು ಉಡುಗೊರೆ Read More »

ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತ ವಯಸ್ಕರ ಪ್ರಯಾಣ

ಬೆಂಗಳೂರು ನಗರದ ಪಾದರಾಯನಪುರ ಮುಖ್ಯರಸ್ತೆಯಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತರು ಸವಾರಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏ.26 ರಂದು ಬೆಳಿಗ್ಗೆ 10:45 ಕ್ಕೆ ಗೌರಿಪಾಳ್ಯ ಬಳಿ ಈ ಘಟನೆ ನಡೆದಿದೆ. ಅಪ್ರಾಪ್ತರು ಸ್ಕೂಟರ್‌ನಲ್ಲಿ ಸವಾರಿ ಮಾಡುವುದನ್ನು ಬೈಕ್‌ ಸವಾರರೊಬ್ಬರು ಫೋಟೋ ಕ್ಲಿಕ್ಕಿಸಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ಕೂಟರ್ ನೀಡಿ ನಿರ್ಲಕ್ಷ್ಯ ಮೆರೆದ ಪೋಷಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತ ವಯಸ್ಕರ ಪ್ರಯಾಣ Read More »

ಏ.27ರಿಂದ ಸುಳ್ಯದ ಅಕ್ಷತಾ ಸೆಂಟ್ರಲ್ ಸ್ಕ್ವಾರ್ ನಲ್ಲಿ ರೈನ್ ಪೈಟರ್ಸ್ ಮೇಳ ಹಾಗೂ ಬ್ರಹತ್ ಸಾರಿ ಮೇಳ

ಏ.27ರಿಂದ ಅತೀ ಕಡಿಮೆ ದರದಲ್ಲಿ ರೈನ್ ಫೈಟರ್ಸ್ ಮೇಳ ಸುಳ್ಯದ ಅಕ್ಷತಾ ಸೆಂಟ್ರಲ್ ಸ್ಕ್ವಾರ್ ನಲ್ಲಿ ನಡೆಯಲಿದೆ. . ವಿವಿಧ ಮಾದರಿಯ ರೈನ್ ಕೋಟ್ ಗಳು ಲಭ್ಯವಿದೆ‌.ಮಕ್ಕಳ, ಪುರುಷರ ಮಹಿಳೆಯರ ರೈನ್ ಕೋಟ್ ಗಳು ಅಪೂರ್ವ ಸಂಗ್ರಹವಿದ್ದು ಅತೀ ಕಡಿಮೆ ದರ ನಿಗದಿಪಡಿಸಲಾಗಿದೆ. ಅಲ್ಲದೆ ಇಲ್ಲಿ ಸಾರಿ ಮೇಳ ಕೂಡ ನಡೆಯಲಿದ್ದು ಸಾರಿ (ಒಂದಕ್ಕೆ ರೂ. 79), ನೈಟಿ (ರೂ.399ಕ್ಕೆ ಮೂರು ಪೀಸ್), ಮೆನ್ ಶಾರ್ಟ್ (ರೂ.99), ಕುರ್ತಿ( ರೂ.199), ಸ್ಕರ್ಟ್ (ರೂ.99), ಬಾಯ್ಸ್ ಶರ್ಟ್ (ರೂ.

ಏ.27ರಿಂದ ಸುಳ್ಯದ ಅಕ್ಷತಾ ಸೆಂಟ್ರಲ್ ಸ್ಕ್ವಾರ್ ನಲ್ಲಿ ರೈನ್ ಪೈಟರ್ಸ್ ಮೇಳ ಹಾಗೂ ಬ್ರಹತ್ ಸಾರಿ ಮೇಳ Read More »

error: Content is protected !!
Scroll to Top