July 15, 2026

ಜುಲೈ 31 ರವರೆಗೆ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ  ” ಸ್ವರ್ಣಂ ವಿಶೇಷ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗ್ರಾಹಕರಿಗೆ “ಸ್ವರ್ಣಂ ವಿಶೇಷ “ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಆರಂಭಗೊಂಡಿಗೆ. ಸ್ವರ್ಣಂ ಜ್ಯುವೆಲ್ಸ್ ಮಳಿಗೆಯು ದಿನದಿಂದ ದಿನಕ್ಕೆ ಗ್ರಾಹಕರಿಗೆ ಹೊಸ ಹೊಸ ಆಯೋಜನೆಯನ್ನು ತರುತ್ತಿದ್ದು , ಇದೀಗ ಗ್ರಾಹಕರಿಗೋಸ್ಕರ ಸ್ವರ್ಣಂ ವಿಶೇಷ ಆಯೋಜನೆಯೊಂದಿಗೆ ಸ್ವರ್ಣಂ ವಿಶೇಷ ಆಫರ್ ಆಯೋಜನೆಗೊಳಿಸಲಾಗಿದೇ . .ಅಲ್ಲದೆ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಪ್ರತೀ ಚಿನ್ನಾಭರಣಗಳ ಪ್ರತೀ ಪವನಿಗೆ 3000 ಕಡಿತ ಹಾಗೂ ಗ್ರಾಂ ಗೆ […]

ಜುಲೈ 31 ರವರೆಗೆ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ  ” ಸ್ವರ್ಣಂ ವಿಶೇಷ Read More »

ಅರಂತೋಡು : ಪ್ರಥಮ‌ ಹಂತದ ಗ್ರಾಮ‌ ಸಭೆ

ಆರಂತೋಡು ಗ್ರಾಮ ಪಂಚಾಯತ್ ನ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜುಲೈ 14ರಂದು ಗ್ರಾಮ ಪಂಚಾಯತ್ ನ ಅಮೃತ ಸಭಾವನದಲ್ಲಿ ನಡೆಯಿತು.ಆಡಳಿತಾಧಿಕಾರಿ ಪ್ರಮೋದ್ ಸಿ.ಎಂ. ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಗ್ರಾಮಸ್ಥರು ಹಲವು ಬೇಡಿಕೆ ಮತ್ತು ಸಮಸ್ಯೆಗಳನ್ನು ಮುಂದಿಟ್ಟರು‌.ಬಿಳಿಯಾರು ಮಾಡದಕಾನ ಗ್ರಾಮ ಪಂಚಾಯತ್ ರಸ್ತೆಯ ಕೆಲ ಭಾಗಗಳಲ್ಲಿ ಕಾಂಕ್ರೀಟೀಕರಣ ಮಾಡುವಂತೆ ಕೆ.ಆರ್.ಗಂಗಾಧರ್ ಮನವಿ ಮಾಡಿ ಕಳೆದ ವರ್ಷದ ಕ್ರಿಯಾಯೋಜನೆಯಲ್ಲಿ ಈ ರಸ್ತೆಯ ಅಭಿವ್ರದ್ದಿಗೆ ಅನುದಾನ ಮೀಸಲು ಇಟ್ಟ ಬಗ್ಗೆ ಸಭೆಯ ಗಮನ ಸೆಳೆದ್ದಾಗ ಪಿ.ಡಿ.ಒ ಜಯಪ್ರಕಾಶ್

ಅರಂತೋಡು : ಪ್ರಥಮ‌ ಹಂತದ ಗ್ರಾಮ‌ ಸಭೆ Read More »

ಜುಲೈ 16 ರಂದು ಸುಳ್ಯದಲ್ಲಿ ಶ್ರೀ ಇನ್ಫೋ ಲ್ಯಾಪ್‌ಟಾಪ್‌ ಸೆಂಟರ್ ಶುಭಾರಂಭ

ಸುಳ್ಯದಲ್ಲಿ ಸತೀಶ್ ಕಾಟೂರು ಹಾಗೂ ಶ್ರೀವತ್ಸ ಕಾಟೂರು ಮಾಲೀಕತ್ವದ ‘ಶ್ರೀ ಇನ್ಫೋ’ ಕಂಪ್ಯೂಟರ್ಸ್‌ ಸಹ ಸಂಸ್ಥೆ ನೂತನ ಎಕ್ಸ್‌ಕ್ಯೂಸಿವ್ ಲ್ಯಾಪ್‌ಟಾಪ್ ಶೋರೂಮ್ ‘ಶ್ರೀ ಇನ್ಫೋ ಲ್ಯಾಪ್‌ಟಾಪ್ ಸೆಂಟರ್’ ಚೆನ್ನಕೇಶವ ದೇವಸ್ಥಾನದ ಬಳಿಯ ಸೌಪರ್ಣಿಕಾ ಆರ್ಕೇಡ್‌ನ ಪ್ರಥಮ ಮಹಡಿಯಲ್ಲಿ ಜುಲೈ 16 ರಂದು ಶುಭಾರಂಭಗೊಳ್ಳಲಿದೆ.ಜುಲೈ 16 ರಂದು ಪೂ.10 ಗಂಟೆಗೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು .ಭಾಗೀರಥಿ ಮುರುಳ್ಯ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಪಿ. ಬಿ ಸುಧಾಕರ ರೈ ನೆಟ್

ಜುಲೈ 16 ರಂದು ಸುಳ್ಯದಲ್ಲಿ ಶ್ರೀ ಇನ್ಫೋ ಲ್ಯಾಪ್‌ಟಾಪ್‌ ಸೆಂಟರ್ ಶುಭಾರಂಭ Read More »

ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಲಿಗೋಧರ ಆಚಾರ್ಯ ನಿಧನ

ಸುಳ್ಯ ಜಯನಗರ ನಿವಾಸಿ ಹಾಗೂ ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಲಿಗೋಧರ ಆಚಾರ್ಯರವರು ಜುಲೈ 15 ರಂದು ನಿಧನರಾದರು.ಹೃದಯ ಸಂಬಂಧಿ ಕಾಯಿಲೆಯ ಹಿನ್ನೆಲೆಯಲ್ಲಿ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಮೃತರು ಪತ್ನಿ ಜಯಂತಿ ಹಾಗೂ ಪುತ್ರಅಭಿಷೇಕ್ ಹಾಗೂ ಪುತ್ರಿ ಅರ್ಚನಾ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಲಿಗೋಧರ ಆಚಾರ್ಯ ನಿಧನ Read More »

ತೊಡಿಕಾನ : ಕಣಜದ ಹುಳ ಕಡಿದು ವ್ಯಕ್ತಿ ಗಂಭೀರ

ತೋಟದಲ್ಲಿ ಕೆಲಸ ಮಾಡುತ್ತಿದ್ದ ಕ್ರಷಿ ಕಾರ್ಮಿಕರೊಬ್ಬರಿಗೆ ಕಣಜದ ಹುಳ ಕಚ್ಚಿ ಗಂಭೀರ ಗಾಯವಾದ ಘಟನೆ ಜು.15ರಂದು ವರದಿಯಾಗಿದೆ.ತೊಡಿಕಾನ ದೊಡ್ಡಕುಮೇರಿ ನಿವಾಸಿ ಕೇಪು ಎಂಬುವರು ಕಣಜದ ಹುಳ ಕಡಿತಕೊಳಗಾದ ವ್ಯಕ್ತಿಯಾಗಿದ್ದಾರೆ‌.ಅವರು ಇಂದು ಮಧ್ಯಾಹ್ನ ತೋಟದಲ್ಲಿ ಕೆಲಸ ಕಾಡು ಕಡಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತೊಡಿಕಾನ : ಕಣಜದ ಹುಳ ಕಡಿದು ವ್ಯಕ್ತಿ ಗಂಭೀರ Read More »

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 210ಲಕ್ಷ ಅನುದಾನ ಬಿಡುಗಡೆ

2025-26 ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಅನುಮೋದನೆಗೊಂಡ ಕಾಮಗಾರಿಗಳಿಗೆ ರೂ 210ಲಕ್ಷ ಬಿಡುಗಡೆಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 210ಲಕ್ಷ ಅನುದಾನ ಬಿಡುಗಡೆ Read More »

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ ಇನ್ನಿಲ್ಲ

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ (88ವರ್ಷ) ವಿಧಿವಶರಾಗಿದ್ದಾರೆ. ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.ರಾಮಚಂದ್ರೇಗೌಡರ ನಿಧನಕ್ಕೆ ರಾಜ್ಯದ ರಾಜಕೀಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಡಿ.ಕೆ. ಶಿವಕುಮಾ‌ರ್ ಅವರು ಸಾಮಾಜಿಕ ಜಾಲತಾಣದಲ್ಲಿ “ರಾಮಚಂದ್ರೇಗೌಡರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ರಾಜ್ಯದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅವರು ನೀಡಿದ ಕೊಡುಗೆ ಅಪಾರ. ಅವರೊಬ್ಬ ಸರಳ

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ ಇನ್ನಿಲ್ಲ Read More »

ಕೆ.ಎಸ್. ತಿರುಮಲೇಶ್ವರ ಭಟ್ ನಿಧನ

ಸಂಪಾಜೆ ಗ್ರಾಮದ ಕಲ್ಲುಗುಂಡಿ ಪ್ರಗತಿಪರ ಕೃಷಿಕರಾದ ಕೆ. ಎಸ್. ತಿರುಮಲೇಶ್ವರ ಭಟ್(79/ವರ್ಷ) ಜುಲೈ 14 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಸಹೋದರರಾದ ಕೆ.ಎಸ್ ನರಸಿಂಹ ಭಟ್, ಕೆ.ಎಸ್ ನಾರಾಯಣ ಭಟ್,ಸಹೋದರಿ ಸಾವಿತ್ರಿ, ಮೂಕಾಂಬಿಕ ಹಾಗೂ ಅಪಾರ ಬಂಧು ಮಿತ್ರರನ್ನು ಕುಟುಂಬಸ್ಥರನ್ನು ಆಗಲಿದ್ದಾರೆ.

ಕೆ.ಎಸ್. ತಿರುಮಲೇಶ್ವರ ಭಟ್ ನಿಧನ Read More »

ಅರಂತೋಡು ಗ್ರಹಜ್ಯೋತಿ ದಾಖಲೆಗಳ ಪುನರ್ ಪರಿಶೀಲನಾ ಕೇಂದ್ರಕ್ಕೆ ಭೇಟಿ ನೀಡಿದ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್

ರಾಜ್ಯ ಸರಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಗ್ರಹ ಜ್ಯೋತಿಯನ್ನು ಕೆಲವು ಅನರ್ಹರು ಪಡೆಯುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅರ್ಹರ ಆಯ್ಕೆಗಾಗಿ ಪುನರ್ ಪರಿಶೀಲನೆಗೆ ಆದೇಶ ನೀಡಿದ್ದು ಅದರಂತೆ ಅರಂತೋಡು ಮೆಸ್ಕಾಂ ಶಾಖಾ ಕಚೇರಿಯಲ್ಲಿ ದಾಖಲೆಗಳ ಪುನರ್ ಪರಿಶೀಲನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಭೇಟಿ ನೀಡಿದರು.ಇಲ್ಲವನ್ನು ಇಲ್ಲಿಯೇ ಪರಿಶೀಲಿಸುವುದಲ್ಲ.ನೆಟ್ ವರ್ಕ್ ಇರುವ ಪ್ರದೇಶಗಳಿಗೆ ಮೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು.ಪ್ರತಿಯೊಬ್ಬ ಪಲಾನುಭವಿಯ ದಾಖಲೆಯ ಪರಿಶೀಲನೆ ನಡೆಸಬೇಕು.ಯಾರನ್ನೂ ಕೈ ಬಿಡುವ

ಅರಂತೋಡು ಗ್ರಹಜ್ಯೋತಿ ದಾಖಲೆಗಳ ಪುನರ್ ಪರಿಶೀಲನಾ ಕೇಂದ್ರಕ್ಕೆ ಭೇಟಿ ನೀಡಿದ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ Read More »

ಸಂಪಾಜೆಯಲ್ಲಿ ಗ್ರಹಜ್ಯೋತಿ ದಾಖಲೆಗಳ ಪುನರ್ ಪರಿಶೀಲನಾ ಕೇಂದ್ರಕ್ಕೆ ಬೇಟಿ ನೀಡಿದ ವಿವಿಧ ನಾಯಕರುಗಳು

ರಾಜ್ಯ ಸರಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಗ್ರಹ ಜ್ಯೋತಿಯನ್ನು ಕೆಲವು ಅನರ್ಹರು ಪಡೆಯುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅರ್ಹರ ಆಯ್ಕೆಗಾಗಿ ಪುನರ್ ಪರಿಶೀಲನೆಗೆ ಆದೇಶ ನೀಡಿದ್ದು ಅದರಂತೆ ಸಂಪಾಜೆಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕೂಡಾ ದಾಖಲೆಗಳ ಪುನರ್ ಪರಿಶೀಲನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಇಂದು ರಾಜ್ಯ ಕ.ಕ.ಮತ್ತು ಇ.ನಿ.ಕಾ.ಕ ಮಂಡಳಿ ನಿರ್ದೇಶಕ ಜಾನಿ.ಕೆ.ಪಿ ಹಾಗೂ ತಾಲೂಕು ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಸಂಪಾಜೆ ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷರಾಗಿದ್ದ ಮಹಮ್ಮದ್ ಕುಂಞಿ ಗೂನಡ್ಕ, ಬೇಟಿ ನೀಡಿರುತ್ತಾರೆ

ಸಂಪಾಜೆಯಲ್ಲಿ ಗ್ರಹಜ್ಯೋತಿ ದಾಖಲೆಗಳ ಪುನರ್ ಪರಿಶೀಲನಾ ಕೇಂದ್ರಕ್ಕೆ ಬೇಟಿ ನೀಡಿದ ವಿವಿಧ ನಾಯಕರುಗಳು Read More »

error: Content is protected !!
Scroll to Top