ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ರೀ ಸುಳ್ಯ ಇದರ ವತಿಯಿಂದ ನಮ್ಮ ತಾಲೂಕಿನ ಹೆಮ್ಮೆಯ ಪುತ್ರಿ ಅರಂತೋಡು ಗ್ರಾಮದ ಸುಶ್ಮಿತಾ ಬೆದ್ರುಪಣೆ ಇವಳು ಗಡಿಪದ್ರತಾ ಪಡೆಗೆ ಆಯ್ಕೆಯಾದ ಸುಸಂದರ್ಭದಲ್ಲಿ ಅವರನ್ನು ಅವರ ಮನೆಗೆ ತೆರಳಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಪುಷ್ಪಾ ಮೇದಪ್ಪ ಉಪಾಧ್ಯಕ್ಷರಾದ ಗುಣವತಿ ಕೊಲ್ಲಂತಡ್ಕ ಕಾರ್ಯದರ್ಶಿಯಾದ ಲೋಲಾಕ್ಷಿ ದಾಸನ ಕಜೆ ಸಂಘಟನಾ ಕಾರ್ಯದರ್ಶಿಯಾದ ಜಯಂತಿ ಜನಾರ್ದನ ನಿರ್ದೇಶಕರಾದ ಸರಸ್ವತಿ ಕಕ್ಕಾಡು ಚಂದ್ರ ಹೊನ್ನಪ್ಪ ಸುಜಾತ ರೈ, ಸಂಸ್ಥೆಯ ಗೌರವ ಆಹ್ವಾನಿತರಾದ ಶಿಕ್ಷಕರಾದ ಸರಸ್ವತಿ ಚಿದಾನಂದ . ದಮಯಂತಿ ತೀರ್ಥರಾಮ, ಹಾಗೂ ಅರಂತೋಡು ಗ್ರಾಮದ ಸಂಚಲನ ಸಮಿತಿಯ ಸಂಚಾಲಕರಾದ ಸುಮತಿ, ಸದಸ್ಯರಾದ ಮಂಜುಳ ಬನ ಹಾಗೂ ವೇದ ಬೆಟ್ಟನ ಉಪಸ್ಥಿತರಿದ್ದರು.
ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಭಾರತೀಯ ಬಿ.ಎಸ್.ಎಫ್ ಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆಯವರಿಗೆ ಅಭಿನಂದನಾ ಕಾರ್ಯಕ್ರಮ

















