ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕಪರಟ್ಟಿಯಲ್ಲಿ ಶನಿವಾರ ಹೃದಯಾಘಾತದಿಂದಾಗಿ ಇಬ್ಬರು ಸಹೋದರರು ಮೃತಪಟ್ಟ ದುರ್ಘಟನೆ ನಡೆದಿದೆ. 16 ವರ್ಷದ ಸತೀಶ ಬಾಗನ್ನವರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ದುಃಖದ ಸುದ್ದಿ ತಿಳಿದ ತಕ್ಷಣವೇ, ಅವನ ಅಣ್ಣ 24 ವರ್ಷದ ಬಸವರಾಜ ಬಾಗನ್ನವರ ಕೂಡ ಶಾಕ್ನಿಂದ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಪತಿ ಹಾಗೂ ಮೈದುನನ ಕಳೆದುಕೊಂಡ ಬಸವರಾಜನ ಗರ್ಭಿಣಿ ಪತ್ನಿ ಪವಿತ್ರಾ ಕುಸಿದು ಬಿದ್ದಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಣ್ಣ-ತಮ್ಮನಿಗೆ ಒಂದೆ ದಿನ ಹೃದಯಾಘಾತ: ಇಬ್ಬರೂ ಸಾವು

















