ಬೀದರ್ ಹೆದ್ದಾರಿ-65ರ ಬಸವಕಲ್ಯಾಣ ತಾಲೂಕಿನ ಮುಡಬಿ ಕ್ರಾಸ್ ಬಳಿ ಟಾಟಾ ಮ್ಯಾಜಿಕ್ ವಾಹನ ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಚಾಲಕ ಸಚಿನ್ (25) ಮತ್ತು ಮಹಾರಾಷ್ಟ್ರದ ವಿಲಾಸ ಪಾಂಚಾಳ (55) ಮೃತಪಟ್ಟಿದ್ದಾರೆ. ರಾಜೇಶ್ವರದಿಂದ ಬಸವಕಲ್ಯಾಣದ ದರ್ಗಾಕ್ಕೆ ತೆರಳುತ್ತಿದ್ದ ಸಂಬಂಧಿಕರಿದ್ದ ಟಾಟಾ ಮ್ಯಾಜಿಕ್ ವಾಹನ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಭೀಕರ ಅಪಘಾತ: ಇಬ್ಬರ ದುರ್ಮರಣ, 12 ಮಂದಿ ಗಂಭೀರ!



































