ಅರಂತೋಡು : ಯುವಕ ಅಸೌಖ್ಯದಿಂದ ಸಾವು

ಸುಳ್ಯ ತಾಲೂಕಿ ಅರಂತೋಡು ಗ್ರಾಮದ ಕಲ್ಲಗದ್ದೆ ದಿ.ಸಂಕಪ್ಪ ಗೌಡ ರವರ ಪುತ್ರ ಮಿಥುನ್ ಕೆ.ಎಸ್ ರವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಜ.31ರಂದು ನಿಧನರಾದರು. ಅವರಿಗೆ 27 ವರ್ಷ ಪ್ರಾಯವಾಗಿತ್ತು.
ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಇಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ತಾಯಿ ವಾರಿಜಾ, ಸಹೋದರಿ ಭವ್ಯಶ್ರೀ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತ ಯುವಕ ಸುಳ್ಯದ ಆಯಶಿಲ್ಪ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಉದ್ಯೋಗಿಯಾಗಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top