ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಮೇ.26ರಂದು ಪುತ್ತೂರು ಸುಳ್ಯ ಸರ್ವಿಸ್ ಬಸ್ಸ್ ಹಿಂದಕ್ಕೆ ಚಲಿಸಿ ಚಾಲಕರೋರ್ವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ವರದಿಯಾಗಿದೆ.
ಮಧ್ಯಾಹ್ನ ನಂತರ 2.5೦ ಗಂಟೆಗೆ ಪುತ್ತೂರು ಸುಳ್ಯ ಸರ್ವಿಸ್ ಬಸ್ಸಿನಲ್ಲಿ ಸುಮಾರು 35ರಿಂದ 40 ಮಂದಿ ಪ್ರಯಾಣಿಕರು ಕುಳಿತುಕೊಂಡಿದ್ದರು.ಈ ಸಂದರ್ಭದಲ್ಲಿ ಬಸ್ಸು ಏಕಾಏಕಿ ಹಿಂದಕ್ಕೆ ಚಲಿಸಿತು.ಬಸ್ಸು ಹಿಂದಕ್ಕೆ ಚಲಿಸುತ್ತಿರುವುದನ್ನು ಕಂಡ ಪ್ರಯಾಣಿಕರು ಬೊಬ್ಬೆ ಹೊಡೆಯ ತೊಡಗಿದರು.ಕೂಡಲೇ ಬೇರೊಬ್ಬ ಕೆ.ಎಸ್.ಆರ್.ಟಿ.ಬಸ್ಸಿನ ಚಾಲಕರು ಓಡಿ ಬಂದು ಕೈಯಿಂದ ಬ್ರೇಕ್ ಒತ್ತಿ ಬಸ್ಸು ಹಿಂದಕ್ಕೆ ಚಲಿಸುವುದನ್ನು ನಿಲ್ಲಿಸಿದರು.ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಕೆಲ ದಿವಸಗಳ ಹಿಂದೆಯೂ ಎರಡು ಮೂರು ಬಾರಿ ಇಂತಹ ಪ್ರಕರಣ ನಡೆದಿದ್ದು ಬಸ್ಸುಗಳ ನಿರ್ವಹಣೆ ಸಮರ್ಪಕವಾಗಿ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಪ್ರಯಾಣಿಕರು ಮಾದ್ಯಮದರೊಂದಿಗೆ ದೂರಿಕೊಂಡಿದ್ದಾರೆ.
ಸುಳ್ಯ ಕೆ.ಆರ್.ಟಿ.ಸಿ ಬಸ್ಸ್ ನಿಲ್ದಾಣದಲ್ಲಿ ಏಕಾಏಕಿ ಹಿಂದಕ್ಕೆ ಚಲಿಸಿದ ಪ್ರಯಾಣಿಕರಿದ್ದ ಬಸ್ಸ್ ,ತಪ್ಪಿದ ಭಾರೀ ಅನಾಹುತ
