ಸುಳ್ಯದಲ್ಲಿ ಕೆಲವು ಸಮಯದಿಂದ ಎದುರಾಗಿದ್ದ ಆಧಾರ್ ಸಮಸ್ಯೆ ಪರಿಹಾರ ಕಂಡಿದೆ. ಸುಳ್ಯ ಅಂಚೆ ಇಲಾಖೆಯಲ್ಲಿ ಮಧ್ಯಾಹ್ನ ಬಳಿಕ ಆಧಾರ್ ಸೇವೆ ಆರಂಭವಾಗಿದೆ.
ಸುಳ್ಯದಲ್ಲಿ ಆಧಾರ್ ಸೇವೆ ಸ್ಥಗಿತವಾಗಿದ್ದರಿಂದ ಜನರು ಬೆಳ್ಳಾರೆ, ಪುತ್ತೂರು ತಾಲೂಕಿಗೆ ಹೋಗಿ ಆಧಾರ್ ತಿದ್ದುಪಡಿ ಸಹಿತ ಇನ್ನಿತರ ಕೆಲಸಮಾಡಿಕೊಂಡು ಬರಬೇಕಾಗಿದ್ದು. ತಾಲೂಕು ಪಂಚಾಯತ್, ನಗರ ಪಂಚಾಯತ್ ಸಭೆಯಲ್ಲಿ ಚರ್ಚೆಗಳಾಗಿದ್ದವು.
ಸುಳ್ಯಕ್ಕೆ ಉಸ್ತುವಾರಿ ಸಚಿವರು ಬಂದಾಗ ಗಮನ ಸೆಳೆಯಲಾಗಿತ್ತು. ಶಾಸಕರು ಕೂಡಾ ಆಧಾರ್ ಕೇಂದ್ರ ಪುನರಾರಂಭಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಪಟ್ಟಿದ್ದರು.
ಸುಳ್ಯದಲ್ಲಿ ಆಧಾರ್ ಸೇವಾ ಕೇಂದ್ರ ಮತ್ತೆ ಆರಂಭ

















