ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಮಾವಿನಕಟ್ಟೆಯಲ್ಲಿ ಬೈಕ್ ಸವಾರರ ಮೇಲೆ ಕಡವೆ ಜಿಗಿದು ಬೈಕ್ ಸಾವರರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ವರದಿಯಾಗಿದೆ.
ಎಲಿಮಲೆ ಕಡೆಯಿಂದ ಗುತ್ತಿಗಾರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರರು ಮಾವಿನಕಟ್ಟೆ ತಲುಪುತ್ತಿದ್ದಂತೆ ಏಕಾಏಕಿ ಕಡವೆ ಬೈಕ್ ಮೇಲೆ ಹಾರಿದೆ. ಪರಿಣಾಮ ಬೈಕ್ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಬೈಕ್ ಸವಾರರ ಮೇಲೆ ಕಡವೆ ಜಿಗಿದು ಬೈಕ್ ಸವಾರರಿಗೆ ಗಾಯ

















