Author name: Tejas

ಅಡ್ತಲೆ :ಲಾರಿಯಲ್ಲಿ ಅಧಿಕ ತೂಕದ ರಬ್ಬರ್ ಮರ ಸಾಗಾಟ,ಲಾರಿಯನ್ನು ತಡೆದು ನಿಲ್ಲಿಸಿದ ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ

ಅಡ್ತಲೆ ಅರಂತೋಡು ರಸ್ತೆಯಲ್ಲಿ ಲಾರಿಯೊಂದು ರಸ್ತೆ ಸಾಮರ್ಥ್ಯಕ್ಕಿಂತ ಅಧಿಕ ಭಾರದರಬ್ಬರ್ ಮರ ಸಾಗಾಟ ಮಾಡುತ್ತಿದೆ.ಇದರಿಂದ ರಸ್ತೆಗೆ ಅಪಾಯ ಎದುರಾಗಲಿದೆ ಎಂದು ಲಾರಿ ಚಾಲಕನಿಗೆ ತಿಳಿಸಿ ರಬ್ಬರ್ ಮರ ಸಾಗಾಟದ ಲಾರಿಯನ್ನು ಅಡ್ತಲೆ ನಾಗರೀಕ ಹಿತರಕ್ಷಣಾ ಸಮಿತಿಯವರು ಅಡ್ತಲೆ ಶಾಲಾ ಬಳಿ ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಶುಕ್ರವಾರ ವರದಿಯಾಗಿದೆ.ಮರ್ಕಂಜದಿಂದ ಬಂಟ್ವಾಳಕ್ಕೆ ರಬ್ಬರ್ ಮರ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.ನಾಗರೀಕ ಹಿತರಕ್ಷಣಾ ಸಮಿತಿಯವರು ಬುಧವಾರ ಮರ್ಕಂಜ ಕಲ್ಲು ಕೊರೆಯಯಿಂದ ಲಾರಿಯಲ್ಲಿ ಅಧಿಕ ಭಾರದ ಜಲ್ಲಿ […]

ಅಡ್ತಲೆ :ಲಾರಿಯಲ್ಲಿ ಅಧಿಕ ತೂಕದ ರಬ್ಬರ್ ಮರ ಸಾಗಾಟ,ಲಾರಿಯನ್ನು ತಡೆದು ನಿಲ್ಲಿಸಿದ ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ Read More »

ಮಾ.26 ರಂದು ಅರಂತೋಡಿನಲ್ಲಿ 20ನೇ ವರ್ಷದ ತೆಕ್ಕಿಲ್ ಸೌಹಾರ್ದ ಇಪ್ತಾರ್ ಕೂಟ

ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನ(ರಿ) ಅರಂತೋಡು ಇದರ ವತಿಯಿಂದ 20 ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವು ಮಾ.26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ. ದುವಾಶೀರ್ವಾಚನವನ್ನು ಅರಂತೋಡು ಬದ್ರಿಯ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಮಾಡಲಿದ್ದಾರೆ. ವಿಶೇಷ ಅತಿಥಿಗಳಾಗಿ ಸುಳ್ಯ ಬೀರಮಂಗಲ ಸೈಂಟ್ ಬ್ರಿಜೇಶ್ ಚರ್ಚ್ ನ ಧರ್ಮ ಗುರುಗಳಾದ ಫಾದರ್ ವಿಕ್ಟರ್ ಡಿ’ಸೋಜ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ

ಮಾ.26 ರಂದು ಅರಂತೋಡಿನಲ್ಲಿ 20ನೇ ವರ್ಷದ ತೆಕ್ಕಿಲ್ ಸೌಹಾರ್ದ ಇಪ್ತಾರ್ ಕೂಟ Read More »

ಮದುವೆ ನಿಶ್ಚಯವಾಗಿದ್ದ ಯುವಕ ದಿಡೀರ್ ನಾಪತ್ತೆ

ಮದುವೆಯಾಗುವ ನಿಶ್ಚಯವಾಗಿದ್ದ ಬಾಳಿಲದ ಯುವಕ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ.ಬಾಳಿಲದ ದೇರಂಪಾಲು ಆರ್.ಸಿ.ಮನೆ ಶೀನಪ್ಪ ರೈಯವರ ಪುತ್ರ ಹರೀಶ್ ರೈ ಎಂಬವರು ಕಾಣೆಯಾಗಿದ್ದು ಈ ಬಗ್ಗೆ ಅಣ್ಣ ವೆಂಕಪ್ಪ ರೈ ದೇರಂಪಾಲು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.ನನ್ನ ತಮ್ಮ ಹರೀಶ್ ರೈ ಡಿ. (38) ಸುಮಾರು 13 ವರ್ಷಗಳಿಂದ ಮಹೀಂದ್ರಾ ಫೈನಾನ್ಸ್ ಪುತ್ತೂರು ಇಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ದೂರದ ಸಂಬಂಧಿಕರ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು.ಮಾ.20 ರಂದು ಬೆಳಿಗ್ಗೆ 7:30 ಗಂಟೆಗೆ ಯುವತಿಯ

ಮದುವೆ ನಿಶ್ಚಯವಾಗಿದ್ದ ಯುವಕ ದಿಡೀರ್ ನಾಪತ್ತೆ Read More »

ಮರದ ಗೆಲ್ಲು ಮುರಿದು ಬಿದ್ದು ಬೈಕ್ ಸವಾರ ಸಾವು

ಬೆಳ್ತಂಗಡಿ ಯ ಜಾರಿಗೆ ಬೈಲು ಎಂಬಲ್ಲಿ ರಾಜ್ಯ ಹೆದ್ದಾರಿ ಬದಿಯ ಮಾವಿನ ಮರದ ಕೊಂಬೆ ಬಿದ್ದು ಬೈಕ್ಕಲ್ಲಿ ಬರುತ್ತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾ 20 ಗುರುವಾರ ಸಂಜೆ 8 ಗಂಟೆಗೆ ನಡೆದಿದೆ.ಮೃತ ಯುವಕನನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ಸಂಜೀವ ಮುಗೇರ ಮತ್ತು ಲಲಿತಾ ದಂಪತಿಯ ಹಿರಿಯ ಪುತ್ರ ಪ್ರವೀಣ್.ಎಸ್.ಎಲ್ (25) ಗುರುತಿಸಲಾಗಿದೆ.ಮಂಗಳೂರಿನ ಎಚ್.ಡಿ.ಎಫ್..ಸಿ ಬ್ಯಾಂಕ್ ನಲ್ಲಿ ಲೋನ್ ಸೆಕ್ಷನ್ ನಲ್ಲಿ ಕೆಲಸ ಮಾಡುತಿದ್ದ ಬೆಳಾಲಿನ ಪ್ರವೀಣ್ ಅವರು ಕೆಲಸ ಮುಗಿಸಿಕೊಂಡು ಉಪ್ಪಿನಂಗಡಿ ಗುರುವಾಯನಕೆರೆ

ಮರದ ಗೆಲ್ಲು ಮುರಿದು ಬಿದ್ದು ಬೈಕ್ ಸವಾರ ಸಾವು Read More »

ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ಶಾಕ್ ನೀಡಲಿದೆ,ಏಪ್ರಿಲ್ ನಲ್ಲಿ ಹೊಸ ದರ!

ಬೆಂಗಳೂರು: ರಾಜ್ಯ ಸರಕಾರ ಮೂಲಭೂತ ವಸ್ತುಗಳ ಮತ್ತು ಭೂಲಭೂತ ಸೌಕರ್ಯಗಳ ಬೆಲೆ ಏರಿಸಿರುವುದರಿಂದ ರಾಜ್ಯದ ಜನತೆ ಕಂಗೆಟ್ಟಿದ್ದು ಇದೀಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕೂಡ ಇದೀಗ ಶಾಕ್ ನೀಡಿದೆ. ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಲಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆಇಆರ್ಸಿ ಮುಂದಾಗಿದ್ದು, ದರ ಹೆಚ್ಚಳದ ಆದೇಶ ಹೊರಡಿಸಿದೆ.ದರಗಳು ಹಂತ ಹಂತವಾಗಿ ಏರಿಕೆಯಾಗಲಿವೆ. 2025-26ರ

ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ಶಾಕ್ ನೀಡಲಿದೆ,ಏಪ್ರಿಲ್ ನಲ್ಲಿ ಹೊಸ ದರ! Read More »

ಹೆಲಿಕಾಪ್ಟರ್ ತೆಗೆದು ಕೊಡಲು ಶಾಸಕಿ ಭಾಗೀರಥಿ ರಾಜ್ಯ ಸರಕಾರಕ್ಕೆ ಒತ್ತಾಯ

ರಾಜ್ಯದಲ್ಲಿ ದಲಿತ ಸಮುದಾಯದ ಕಾಲನಿ ಅಭಿವೃದ್ಧಿ ಕುರಿತು ಸಮೀಕ್ಷೆ ನಡೆಸಲು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ಸರಕಾರ ಹೆಲಿಕಾಪ್ಟ‌ರ್ ಕೊಡಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.ಅವರು ಬುಧವಾರ ವಿಧಾನಸಭೆಯಲ್ಲಿ ಪ್ರಸ್ತುತ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದರು. ಸುಳ್ಯ ತಾಲೂಕು ಸೇರಿದಂತೆ ರಾಜ್ಯದ ಬಹುತೇಕ ದಲಿತ ಸಮುದಾಯದ ಕಾಲನಿಗಳು ಅಭಿವೃದ್ಧಿ ಕಂಡಿಲ್ಲ. ಈ ಬಗ್ಗೆ ಸರಕಾರ ಸಮರ್ಪಕ ಸರ್ವೇ ನಡೆಸಬೇಕು. ಜೊತೆಗೆ, ಸಮೀಕ್ಷೆಗಾಗಿ ಮಹದೇವಪ್ಪ ಅವರಿಗೆ ಸರಕಾರವೇ ಹೆಲಿಕಾಪ್ಟ‌ರ್

ಹೆಲಿಕಾಪ್ಟರ್ ತೆಗೆದು ಕೊಡಲು ಶಾಸಕಿ ಭಾಗೀರಥಿ ರಾಜ್ಯ ಸರಕಾರಕ್ಕೆ ಒತ್ತಾಯ Read More »

ಅರಂಬೂರು : ದೈವಂಕಟ್ಟು ಮಹೋತ್ಸವ ಸಂಪನ್ನ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.19 ರ ಮುಂಜಾನೆ ಸಂಪನ್ನಗೊಂಡಿತು.ಮಾ.15 ರಿಂದ ಪ್ರಾರಂಭಗೊಂಡ ಉತ್ಸವದಲ್ಲಿ ತುಳು ದೈವಗಳ ಕೋಲವು ನಡೆದು .17ರಿಂದ ಕಾರ್ನವನ್ ದೈವ,ಕೋರಚ್ಚನ್ ದೈವ,ಕಂಡನಾರ್ ಕೇಳನ್ ದೈವ, ವಯನಾಟ್ ಕುಲವನ್ ದೈವದ ವೆಳ್ಳಾಟಂ ರಾತ್ರಿ ವೇಳೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದೈವಗಳ ವೆಳ್ಳಾಟಂ ವೀಕ್ಷಿಸಲು ರಾಜ್ಯ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಮರುದಿನ ಬೆಳಗ್ಗೆ ಶ್ರೀ ದೈವಗಳ

ಅರಂಬೂರು : ದೈವಂಕಟ್ಟು ಮಹೋತ್ಸವ ಸಂಪನ್ನ Read More »

ಬೂಡು :ಶ್ರದ್ಧಾ ಭಕ್ತಿಯಿಂದ ನಡೆದ ದೈವಗಳ ಕೋಲ

ಸುಳ್ಯದ ಬೂಡು ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಮಾ.15 ಮತ್ತು 16ರಂದು ನಡೆದು ಮಾ.18ರಂದು ರಾತ್ರಿ ದೈವಗಳ ನೇಮೋತ್ಸವ ನಡೆಯಿತು.ನೂರಾರು ಭಕ್ತರು ಸೇರಿ ದೈವಗಳ ದರ್ಶನ ಪಡೆದರು‌.ಈ ಸಂದರ್ಭದಲ್ಲಿಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಕೋಶಾಧಿಕಾರಿ ಶಿವರಾಮ ಕೇರ್ಪಳ, ಆಡಳಿತ ಮೊಕ್ತಸರ ಮಾಯಿಲ ಬೂಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬೂಡು, ಕೋಶಾಧಿಕಾರಿ

ಬೂಡು :ಶ್ರದ್ಧಾ ಭಕ್ತಿಯಿಂದ ನಡೆದ ದೈವಗಳ ಕೋಲ Read More »

ದೇಲಂಪಾಡಿಯ ವ್ಯಕ್ತಿ ಕಾಣೆ

ದೇಲಂಪಾಡಿ, ಕುತ್ತಿಮುಂಡ ಮನೆಯ ರಾಧಾಕೃಷ್ಣ ಗೌಡ ಇವರು 3 ದಿನಗಳಿಂದ ಕಾಣೆಯಾಗಿರುತ್ತಾರೆ.ಸೋಮವಾರ ಸುಳ್ಯಪದವು ಪರಿಸರದಲ್ಲಿ ಇದ್ದ ಮಾಹಿತಿ ಸಿಕ್ಕಿರುತ್ತದೆ. ಆದರೆ ಸ್ಪಷ್ಟ ಮಾಹಿತಿ ಇಲ್ಲ.ಈ ವ್ಯಕ್ತಿ ಕಂಡು ಬಂದಲ್ಲಿ 9740797741 ಈ ನಂಬರ್ ಗೆ ಕಾಲ್ ಮಾಡಿ ತಿಳಿಸಿಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

ದೇಲಂಪಾಡಿಯ ವ್ಯಕ್ತಿ ಕಾಣೆ Read More »

ಸುರಕ್ಷಿತವಾಗಿ ಭೂಮಿಗೆ ತಲುಪಿದ ಸುನಿತಾ ವಿಲಿಯಮ್ಸ್ ತಂಡ

ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ನಾಸಾ ವಿಜ್ಞಾನಿ, ಗಗನಯಾತ್ರಿ ಬುಚ್‌ ವಿಲ್ಮೋರ್ ಅವರು ಕಳೆದ 9 ತಿಂಗಳಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಇದ್ದರು. ತಾಂತ್ರಿಕ ಸಮಸ್ಯೆಯಿಂದ ಅವರು ಭೂಮಿಗೆ ಬರಲು ಸಾಧ್ಯವಾಗಿರಲಿಲ್ಲ. ಕಡೆಗೂ ಅವರ ಬಾಹ್ಯಾಕಾಶ ವಾಸ ಮುಗಿದಿದ್ದು ಭೂಮಿಗೆ ಸುರಕ್ಷಿತವಾಗಿ ವಾಪಾಸಾಗಿದ್ದಾರೆ.

ಸುರಕ್ಷಿತವಾಗಿ ಭೂಮಿಗೆ ತಲುಪಿದ ಸುನಿತಾ ವಿಲಿಯಮ್ಸ್ ತಂಡ Read More »

error: Content is protected !!
Scroll to Top