Author name: Tejas

ಕೆ.ಎಲ್ ಯಶ್ ಅವರಿಗೆ ದ್ವಿತೀಯ ಪಿ.ಯು.ಸಿಯಲ್ಲಿ ಶೇ. 96.67 ಅಂಕ

ಪೆರಾಜೆ ಗ್ರಾಮದ ಕೆ. ಎಲ್. ಯಶ್ ಅವರು ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ 96.67 ಶೇಕಡ ಅಂಕಗಳಿಸಿ ಉತ್ತಿರ್ಣರಾಗಿದ್ದಾರೆ. ಇವರು ರೇವಾ ಇಂಡಿ ಪೆಂಡೆಂಟ್ ಪಿಯು ಕಾಲೇಜು ಬೆಂಗಳೂರು ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪೆರಾಜೆ ಗ್ರಾಮದ ಮಾಜಿ ಸೈನಿಕ ಕೊಳಂಗಾಯ ಲೋಲಜಾಕ್ಷ ಅವರ ಪುತ್ರ.

ಕೆ.ಎಲ್ ಯಶ್ ಅವರಿಗೆ ದ್ವಿತೀಯ ಪಿ.ಯು.ಸಿಯಲ್ಲಿ ಶೇ. 96.67 ಅಂಕ Read More »

ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಜಾಲ್ಸೂರಿಗೆ ಆಗಮನ

ಸುಳ್ಯ ಪದವು ಈಶ್ವರ ಮಂಗಳ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ಎ.೯ ರಿಂದ ಎ.೧೨ ವರೆಗೆ ನಡೆಯಲಿದ್ದು ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆಯು ಏ.8ರಂದು ಜಾಲ್ಸೂರಿಗೆ ಆಗಮಿಸಿತು.ಗೋಳಿಕಟ್ಟೆಯಿಂದ ಜಾಲ್ಸೂರು ಪೇಟೆಯವರೆಗೆ ಶ್ರೀ ವರಮಹಾಲಕ್ಷ್ಮಿ ಸ್ತ್ರೀಶಕ್ತಿ ಗೊಂಚಲು ಸಮಿತಿ ವತಿಯಿಂದ ಪೂರ್ಣಕುಂಭ ಸ್ವಾಗತಿಲಾಯಿತು.ಪೇಟೆಯಲ್ಲಿ ಜಾಲ್ಸೂರು ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಶ್ರೀರಾಮ ಹನುಮ ಜ್ಯೋತಿ ಹಸ್ತಾಂತರಿಸಲಾಯಿತು.ಭಜನಾ ಮಂದಿರದ ಗೌರವಾಧ್ಯಕ್ಷ ಮೋಹನ್ ನಂಗಾರು, ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಕನಕಮಜಲು ಸಹಕಾರಿ ಸಂಘದ

ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಜಾಲ್ಸೂರಿಗೆ ಆಗಮನ Read More »

ನರ್ಸ್ ನದಿಗೆ ಹಾರಿ ಆತ್ಮಹತ್ಯೆ

ಶಿವಮೊಗ್ಗ ದ ಖಾಸಗಿ ಆಸ್ಪತ್ರೆಯ ನರ್ಸ್ ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಎನ್.ಆ‌ರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ನಿವಾಸಿ ರನ್ಯಾ ಬೇಸಿಲ್ (30) ಮೃತರು.ಸೋಮವಾರ ಸಂಜೆ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ರನ್ಯಾ, ಕೆಲವೇ ಕ್ಷಣಗಳಲ್ಲಿ ಮತ್ತೆ ಹೊರಗೆ ತೆರಳಿದ್ದು, ಮುಡುಬ ಸಮೀಪದ ಸೇತುವೆ ಬಳಿ ತಮ್ಮ ಸ್ಕೂಟರ್ ನಿಲ್ಲಿಸಿ ಅಚಾನಕ್ ನದಿಗೆ ಜಿಗಿದಿದ್ದಾರೆ. ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನರ್ಸ್ ನದಿಗೆ ಹಾರಿ ಆತ್ಮಹತ್ಯೆ Read More »

ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ತೊಡಿಕಾನ ದೇವಳಕ್ಕೆ 2100 ಕೆ.ಜಿ.ಅಕ್ಕಿ, 200ಕೆ.ಜಿ ಬೆಲ್ಲ ಕೊಡುಗೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜಾತ್ರೋತ್ಸವದ ಸಮಾರಾಧನೆಗೆ ಏ.8ರಂದು ಶ್ರೀ ಹಿಮಕರ ಕಲ್ಲಗದ್ದೆ ಬೆಂಗಳೂರು ಇವರ ನೇತೃತ್ವದಲ್ಲಿ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ವಿದ್ಯಾರಣ್ಯಪುರ ಬೆಂಗಳೂರು ಇಲ್ಲಿಂದ ಸುಮಾರು 2100 ಕೆ.ಜಿ.ಅಕ್ಕಿ, 200ಕೆ.ಜಿ.ಬೆಲ್ಲವನ್ನು ಸಮರ್ಪಿಸಿದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುತ್ತಮೊಟ್ಟೆಯವರು ಶಾಲು ಹೊದಿಸಿ, ಶ್ರೀ ದೇವರ ಪ್ರಸಾದ ಕೊಡಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಯು.ಯಂ.ಕಿಶೋರ್ ಕುಮಾರ್, ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ನೌಕರರಾದ ಶ್ರೀ

ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ತೊಡಿಕಾನ ದೇವಳಕ್ಕೆ 2100 ಕೆ.ಜಿ.ಅಕ್ಕಿ, 200ಕೆ.ಜಿ ಬೆಲ್ಲ ಕೊಡುಗೆ Read More »

ಮಡಪ್ಪಾಡಿ : ಜೋಡು ಪಾಷಾಣಮೂರ್ತಿ ದೈವದ ಹರಕೆ ಕೋಲ

ಮಡಪ್ಪಾಡಿ ಪುಂಡರಿಕ ಗೌಡ ಅವರ ಮನೆಯಲ್ಲಿ ಏಪ್ರಿಲ್.5ರಂದು ಜೋಡು ಪಾಷಾಣ ಮೂರ್ತಿ ದೈವದ ಹರಕೆ ಕೊಲ ನಡೆಯಿತು.ಈ ಸಂದರ್ಭದಲ್ಲಿ ಕುಟುಂಬಸ್ಥರು ನೆಂಟರಿಷ್ಟರು,ಊರಿನವರು ಉಪಸ್ಥಿತರಿದ್ದರು.

ಮಡಪ್ಪಾಡಿ : ಜೋಡು ಪಾಷಾಣಮೂರ್ತಿ ದೈವದ ಹರಕೆ ಕೋಲ Read More »

ಅಜ್ಜಾವರ : ಇಂದು ಜಾತ್ರೋತ್ಸವ ಪ್ರಯುಕ್ತ ಯಕ್ಷಗಾನ ಬಯಲಾಟ

ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಎ.8 ರಂದು ರಾತ್ರಿ ಗಂಟೆ 8 ರಿಂದ “ತೊಡಓಲ್” ನಂತರ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ 8.30 ರಿಂದ ಶ್ರೀ ಭುವನೇಶ್ವರಿ ಯಕ್ಷಗಾನ ಕಲಾಮಂಡಳಿ ಸುಳ್ಯ ಇದರ ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಕದಂಬ ಕೌಶಿಕೆ ನಡೆಯಲಿದೆ.ನಾಳೆ ದಿನ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿದೆ.

ಅಜ್ಜಾವರ : ಇಂದು ಜಾತ್ರೋತ್ಸವ ಪ್ರಯುಕ್ತ ಯಕ್ಷಗಾನ ಬಯಲಾಟ Read More »

ಏ.9ಕ್ಕೆ ಪಿ.ಯು.ಸಿ ಫಲಿತಾಂಶ

ರಾಜ್ಯ ವಿಧಾನಸಭಾ ಉಪಚುನಾವಣೆಗಳ ನೀತಿಸಂಹಿತೆ ಹಾಗೂ ಕೊನೆ ಕ್ಷಣದಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಇಂದು(ಏ.07) ಪ್ರಕಟವಾಗಬೇಕಿದ್ದ ದ್ವಿತೀಯ ಪಿ.ಯು.ಸಿ ಪರೀಕ್ಷಾ ಫಲಿತಾಂಶವನ್ನು ಏಪ್ರಿಲ್ 09ರಂದು ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ ದ್ವಿತೀಯ ಪಿ.ಯು.ಸಿ ಫಲಿತಾಂಶವನ್ನು ಆನ್‌ಲೈನ್ ನಲ್ಲಿ ವೀಕ್ಷಿಸಲು ಅಧಿಕ್ರತ ವೆಬ್ ಸೈಟ್ karresults.nic.in ಭೇಟಿ ನೀಡಿ ಮುಖಪುಟದಲ್ಲಿರುವ ‘Karnataka 2nd PUC Result 2026’ ಲಿಂಕ್ ಕ್ಲಿಕ್ ಮಾಡಿ ರಿಜಿಸ್ಟ್ರೇಷನ್‌ ನಂಬ‌ರ್ ಹಾಗೂ ಜನ್ಮದಿನಾಂಕ ನಮೂದಿಸಿ ‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ

ಏ.9ಕ್ಕೆ ಪಿ.ಯು.ಸಿ ಫಲಿತಾಂಶ Read More »

48 ಗಂಟೆ ಎಚ್ಚರದಿಂದ ಇರಲು ಸೂಚನೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಭಾರತದ ರಾಯಭಾರ ಕಚೇರಿಯು 48 ಗಂಟೆಗಳ ಕಾಲ ಜಾಗರೂಕತೆಯಿಂದಿರಲು ಮತ್ತು ಮನೆಯಿಂದ ಹೊರಬರದಂತೆ ತುರ್ತು ಸೂಚನೆ ನೀಡಿದೆ.ಜೊತೆಗೆ ಭಾರತದ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿ ಇರುವಂತೆ ತಿಳಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇರಾನ್ ಮೇಲೆ ಶೀಘ್ರದಲ್ಲಿ ದಾಳಿ ನಡೆಸುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಈ ಮುನ್ನೆಚ್ಚರಿಕೆ ಸೂಚನೆಯನ್ನು ಅಲ್ಲಿನ ಭಾರತೀಯರಿಗೆ ನೀಡಲಾಗಿದೆ.

48 ಗಂಟೆ ಎಚ್ಚರದಿಂದ ಇರಲು ಸೂಚನೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ಮಂಜೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಧರ್ಮಸ್ಥಳ ಇದರ “ಸಮುದಾಯ ಅಭಿವೃದ್ಧಿ ವಿಭಾಗ” ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ನೀಡಲಾಗಿದೆ. ಅನುದಾನ ಮಂಜುರಾತಿ ಪತ್ರವನ್ನು ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡರು ಹಸ್ತಾಂತರಿಸಿದರು. ಅನುದಾನ ಪಡೆಯಲು ಯೋಜನಾಧಿಕಾರಿ ಮಾದವ ಗೌಡ, ಸುರೇಶ್ ಕಣೆಮರಡ್ಕ, ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಶ್ರೀ ರಾಮಚಂದ್ರ ಕಲ್ಲುಗದ್ದೆ, ಒಕ್ಕೂಟ ಸೇವಾಪ್ರತಿನಿಧಿ ಜಯಲಕ್ಷ್ಮೀ ಸಹಕರಿಸಿದರು.ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ಮಂಜೂರು Read More »

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಅಡ್ತಲೆ ಸ್ಪಂದನ ಗೆಳಯರ ಬಳಗದಿಂದ ಶ್ರಮ ಸೇವೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಏ.5ರಂದು ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ದೇವಸ್ಥಾನದ ಪವಿತ್ರ ತೀರ್ಥ ಮೂಲಗಳಾದ ವಾರಾಣಸಿ ತೀರ್ಥ ಮತ್ತು ಮತ್ಸತೀರ್ಥ ಹಾಗೂ ದೇವಸ್ಥಾನದ ಪರಿಸರದ ಸ್ವಚ್ಛತೆ ಸಲುವಾಗಿ ಬ್ರಹತ್ ಕರಸೇವೆ ನಡೆಯಿತು.ಈ ಕರಸೇವೆಯಲ್ಲಿ ಸ್ಪಂದನ‌ ಗೆಳೆಯರ ಬಳಗ ಅಡ್ತಲೆ ತಂಡದವರು ಭಾಗವಹಿಸಿದರು. 18 ಗ್ರಾಮಗಳ ಸುಮಾರು 500ಕ್ಕೂ ಮಿಕ್ಕಿ ಕರಸೇವಕರು ಭಾಗವಹಿಸಿದರು‌.

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಅಡ್ತಲೆ ಸ್ಪಂದನ ಗೆಳಯರ ಬಳಗದಿಂದ ಶ್ರಮ ಸೇವೆ Read More »

error: Content is protected !!
Scroll to Top