Author name: Tejas

ಹವ್ಯಾಸಿ ಚೆಂಡೆ ಮದ್ದಳೆ ವಾದಕ ಸುಕುಮಾರ ಅಡ್ಯಡ್ಕ ನಿಧನ

ಹವ್ಯಾಸಿ ಯಕ್ಷಗಾನದ ಚೆಂಡೆ ಮತ್ತು ಮದ್ದಳೆ ವಾದಕಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಅಡ್ಯಡ್ಕ ದಿ. ಗುರುವ ಮೊಗೇರರವರ ಪುತ್ರ ಸುಕುಮಾರ ಅಡ್ಯಡ್ಕ(48ವರ್ಷ) ಮೇ. 22 ರಂದು ತನ್ನ ಮನೆಯಲ್ಲಿ ಅನಾರೋಗ್ಯದಿಂದ ನಿಧನರಾದರು.ಪತ್ನಿ ಲಲಿತ, ಪುತ್ರ ಗ್ರೀಷ್ಮರಾಜ್, ಸಹೋದರರು, ಸಹೋದರಿ ಹಾಗೂ ಬಂಧುಮಿತ್ರರನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.

ಹವ್ಯಾಸಿ ಚೆಂಡೆ ಮದ್ದಳೆ ವಾದಕ ಸುಕುಮಾರ ಅಡ್ಯಡ್ಕ ನಿಧನ Read More »

ರಾಜ್ಯ ಮಟ್ಟದ “ಪ್ರಕೃತಿ” ಅಧ್ಯಯನ ಚಾರಣ ಶಿಬಿರ ಸಮಾಪನ

ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ,ಪಂಜ ಸ್ಥಳೀಯ ಸಂಸ್ಥೆ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರ ಸಹಭಾಗಿತ್ವದಲ್ಲಿ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ “ಪ್ರಕೃತಿ ಅಧ್ಯಯನ ಚಾರಣ ಶಿಬಿರ” ಮೇ. 20 ರಂದು ಸಮಾಪನಗೊಂಡಿತುಈ ಸಂದರ್ಭ ರಾಜ್ಯ ಮುಖ್ಯ ಆಯುಕ್ತರಾದ ಡಾ.ಪಿ.ಜಿ.ಆ‌ರ್ ಸಿಂಧ್ಯರವರು ಮಾತನಾಡಿ ಪ್ರಕೃತಿ ಅಧ್ಯಯನ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಮತ್ತು ತಿಳುವಳಿಕೆಯ ಜ್ಞಾನವನ್ನು ಮೂಡಿಸುವಲ್ಲಿ ಹೆಚ್ಚಿನ ಮಹತ್ತರ ಪಾತ್ರವಹಿಸುತ್ತದೆ. ಇಂತಹ ವಿಶೇಷ ಶಿಬಿರವನ್ನು ಕರ್ನಾಟಕ

ರಾಜ್ಯ ಮಟ್ಟದ “ಪ್ರಕೃತಿ” ಅಧ್ಯಯನ ಚಾರಣ ಶಿಬಿರ ಸಮಾಪನ Read More »

ಮೇ 24 ರಂದು ಅರಂತೋಡಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಧಾರ್ ನೋಂದಣಿ& ತಿದ್ದುಪಡಿ ಶಿಬಿರ ಮತ್ತು ಸ್ವಚ್ಚ ಅಂಗಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಮತ್ತು ಚಂದನ ಯುವತಿ ಮಂಡಲ ಅಡ್ತಲೆ ಇವರ ವತಿಯಿಂದ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇವರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಚತಾ ಅಭಿಯಾನದ ಸ್ವಚ್ಚ ಅಂಗಡಿ ಪ್ರಶಸ್ತಿ ಪ್ರದಾನ,ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ NIMA (R) ಸುಳ್ಯ ಇವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಕಾರದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಕಾರ್ಯಕ್ರಮವು

ಮೇ 24 ರಂದು ಅರಂತೋಡಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಧಾರ್ ನೋಂದಣಿ& ತಿದ್ದುಪಡಿ ಶಿಬಿರ ಮತ್ತು ಸ್ವಚ್ಚ ಅಂಗಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ Read More »

ಆಗಾಗ ಡಿಸೇಲ್ ಪೆಟ್ರೋಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡದಿದ್ದರೆ ಬಡವರಿಗೆ ಉಳಿಗಾಲವಿಲ್ಲ : ಪರಶುರಾಮ ಚಿಲ್ತಡ್ಕ

ಇವತ್ತು ಅಡುಗೆ ಅನಿಲದ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ಹೋಟೆಲುಗಳಲ್ಲಿ ಚಾ ತಿಂಡಿಗಳ ಬೆಲೆ ಏರಿಕೆಯಾಗಿದೆ‌.ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ಇತರ ವಸ್ತುಗಳ ಬೆಲೆ ಏರುತ್ತಿದೆ.ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದಿನದಿಂದದಿನಕ್ಕೆ ಬೆಲೆ ಏರಿಕೆ ಮಾಡಿ ಜನರಿಗೆ ಅರ್ಥಿಕ ಹೊರೆ ಹೊರಿಸುತ್ತಿದೆ‌.ಜನರು ಉಗ್ರವಾಗಿ ಇದನ್ನು ಪ್ರತಿಭಟಿಸಬೇಕು.ತಪ್ಪಿದ್ದಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗಲಿದೆ” ಇದರಿಂದ ಬಡವರಿಗೆ ಉಳಿಗಾಲವಿಲ್ಲ ಎಂದು ಸುಳ್ಯ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಪರಶುರಾಮ ಚಿಲ್ತಡ್ಕ ಹೇಳಿದ್ದಾರೆ.ಸುಳ್ಯ ಪ್ರೆಸ್‌ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು

ಆಗಾಗ ಡಿಸೇಲ್ ಪೆಟ್ರೋಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡದಿದ್ದರೆ ಬಡವರಿಗೆ ಉಳಿಗಾಲವಿಲ್ಲ : ಪರಶುರಾಮ ಚಿಲ್ತಡ್ಕ Read More »

ಅಡ್ಕಾರು : ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಸಮಾರೋಪ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ Bc ಟ್ರಸ್ಟ್ (ರಿ )ಸುಳ್ಯಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯ.ಪ್ರಗತಿಬಂಧು ಸ್ವ ಸಹಾಯ ಸಂಘ ಸಂಘಗಳ ಒಕ್ಕೂಟ ಜಾಲ್ಸೂರು ವಲಯ.ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ದೇವಾಲಯ ಸಂವರ್ಧನಾ ಸಮಿತಿ ಸುಳ್ಯ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಸಮಾರೋಪ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯರಾಮ ವಿನೋಬನಗರ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ಇವರು ವಹಿಸಿದ್ದರು.ಮುಖ್ಯ ಅತಿಥಿಗಳಾದ ಸುಧಾಕರ ಕಾಮತ್ ಅವರು ಮಾತನಾಡಿ ಭಜನಾ ತರಬೇತಿದಾರರು

ಅಡ್ಕಾರು : ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಸಮಾರೋಪ Read More »

ಚೊಕ್ಕಾಡಿ ಎಜ್ಯುಕೇಷನ್ ಸೊಸೖಟಿ(ರಿ ) ಕುಕ್ಕುಜಡ್ಕ ಇದರ ಮಹಾಸಭೆ

ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.ಆಡಳಿತ ಮಂಡಳಿಯ ಕಾರ್ಯದರ್ಶಿ ತೇಜಸ್ವಿ ಕಡಪಳ 2025-26 ನೇ ಸಾಲಿನ ವಾರ್ಷಿಕ ವರದಿ ಹಾಗೂ 2025-26 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ನಡೆಸುವ ಚೊಕ್ಕಾಡಿ ಪ್ರೌಢಶಾಲೆ ಹಾಗೂ ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆಗಳ ಶೖಕ್ಷಣಿಕ ಪ್ರಗತಿ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಸಭೆಯಲ್ಲಿ ವಿಚಾರ ವಿಮರ್ಶೆ ನಡೆಸಲಾಯಿತು.ಎಜ್ಯುಕೇಶನ್ ಸೊಸೈಟಿಯ ನೂತನ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಶಾಲಾ ಮುಖ್ಯ

ಚೊಕ್ಕಾಡಿ ಎಜ್ಯುಕೇಷನ್ ಸೊಸೖಟಿ(ರಿ ) ಕುಕ್ಕುಜಡ್ಕ ಇದರ ಮಹಾಸಭೆ Read More »

ದಿ. ಪ್ರವೀಣ್ ಪಾನತ್ತಿಲ ಬೆದ್ರುಪಣೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಚೆಸ್ಕಾಂ ಪ್ರಭಾರ ಸಹಾಯಕ ಇಂಜಿನಿಯರ್ ಆಗಿದ್ದ ಪ್ರವೀಣ್ ಪಾನತ್ತಿಲ ಬೆದ್ರುಪಣೆ ಇವರ ವೈಕುಂಠ ಸಮಾರಾಧನಾ ಕಾರ್ಯಕ್ರಮ ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು. ಶ್ರೀ ಭವಾನಿ ಶಂಕರ ಅಡ್ತಲೆ ಇವರು ನುಡಿನಮನ ಸಲ್ಲಿಸಿದರು. ಮೃತರ ತಾಯಿ ಪೂವಮ್ಮ , ಪತ್ನಿ ರೇಖಾ, ಮಗ ಮೌರ್ಯ, ತಂಗಿ ಪ್ರಮೀಳ ಭಾವ ಮೋಹನ್ ಹಾಗೂ ಮನೆಯವರು , ಸಂಬಂಧಿಕರು, ಕುಟುಂಬಸ್ಥರು ಭಾಗವಹಿಸಿ ನುಡಿನಮನ ನಮನ ಸಲ್ಲಿಸಿದರು.

ದಿ. ಪ್ರವೀಣ್ ಪಾನತ್ತಿಲ ಬೆದ್ರುಪಣೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ Read More »

ಪಂಜ :ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪ್ರಕೃತಿ ಅಧ್ಯಯನ ಚಾರಣ ಶಿಬಿರ,ಚಾರಣಿಗರನ್ನು ಸ್ವಾಗತಿಸಿ ದೇವಳದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ.ಡಾ.ದೇವಿಪ್ರಸಾದ್ ಕಾನತೂರು

ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ವತಿಯಿಂದ ರಾಜ್ಯಮಟ್ಟದ ರೋವರ್ಸ್ ರೇಂಜರ್ಸ್ ಮತ್ತು ಸೌಟ್ಸ್-ಗೈಡ್ಸ್ ಪ್ರಕೃತಿ ಅಧ್ಯಯನ ಚಾರಣ ಶಿಬಿರ ನಡೆಯಿತು. ತಂಡ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಒಂದು ದಿನ ವಾಸ್ತವ್ಯ ನಡೆಯಿತು . ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರು ತಂಡವನ್ನು ಸ್ವಾಗತಿಸಿದರು.

ಪಂಜ :ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪ್ರಕೃತಿ ಅಧ್ಯಯನ ಚಾರಣ ಶಿಬಿರ,ಚಾರಣಿಗರನ್ನು ಸ್ವಾಗತಿಸಿ ದೇವಳದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ.ಡಾ.ದೇವಿಪ್ರಸಾದ್ ಕಾನತೂರು Read More »

ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿರುವುದು ಅರೆಭಾಷಿಕರಿಗೆ ಸಂದ ಗೌರವ : ಹೊದ್ದೆಟ್ಟಿ ಭವಾನಿಶಂಕರ

ನಮ್ಮೇಲ್ಲರ ಪ್ರಯತ್ನದಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿದೆ‌.ಇದು ಅರೆಭಾಷಿಕರಿಗೆ ಸಂದ ಗೌರವ ಎಂದು ಅರೆಭಾಷೆಯ ಮೊದಲಿನ ಕವಿ ಹೊದ್ದೆಟ್ಟಿ ಭವಾನಿಶಂಕರ ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ,ಅರೆಭಾಷೆ ಸಂಸ್ಕೃತಿ ಮತ್ರು ಸಾಹಿತ್ಯ ಸಂಘ ಸರಕಾರಿ ಪ್ರಥಮ ಕಾಲೇಜು ಕೊಡಿಯಾಲಬೈಲು ಇವರ ಆಶ್ರಯದಲ್ಲಿ ಕೊಡಿಯಾಲಬೈಲು ಪ್ರಥಮ‌ ದರ್ಜೆ ಕಾಲೇಜಿನ ಸಭಾ ಭವನದಲ್ಲಿ ನಡೆದ ಅರೆಭಾಷೆಯ ಮೊದಲಿನ ಕವಿ ಹೊದ್ದೆಟ್ಟಿ ಭವಾನಿಶಂಕರ ಅವರ ಸಾಹಿತ್ಯಾವಲೋಕನ ಮತ್ತು ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿರುವುದು ಅರೆಭಾಷಿಕರಿಗೆ ಸಂದ ಗೌರವ : ಹೊದ್ದೆಟ್ಟಿ ಭವಾನಿಶಂಕರ Read More »

ಕಣಜದ ಹುಳ ಕಡಿದು ಪೆರಾಜೆಯ ವ್ಯಕ್ತಿ ಸಾವು

ಪೆರಾಜೆ ಗ್ರಾಮದ ಹೊದ್ದೆಟ್ಟಿ ಎಂಬಲ್ಲಿ ಜಗದೀಶ್ ಎಂಬುವವರು ಕಣಜದ ಹುಳು ಕಡಿದು ಸಾವನ್ನಪ್ಪಿದ ಘಟನೆ ಮೇ 19ರಂದು ವರದಿಯಾಗಿದೆ.ತಮ್ಮ ತೋಟದಲ್ಲಿ ಕಳೆ ಕಟಾವು ಯಂತ್ರದಲ್ಲಿ ಕಾಡು ಕಡಿಯುತ್ತಿದ್ದ ಸಂದರ್ಭ ಕಣಜದ ಹುಳದ ಗುಂಪು ಕಚ್ಚಿ ಗಂಭೀರ ಗಾಯಗೊಂಡ ಬಳಿಕ ಸ್ಥಳೀಯರು ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಣಜದ ಹುಳ ಕಡಿದು ಪೆರಾಜೆಯ ವ್ಯಕ್ತಿ ಸಾವು Read More »

error: Content is protected !!
Scroll to Top