ಕ್ರೈಂ

ಸುರತ್ಕಲ್ : 8 ಮಂದಿ ಅಕ್ರಮ ಬಾಂಗ್ಲಾ ದೇಶದ ಪ್ರಜೆಗಳು ಪತ್ತೆ!

ದ.ಕ ಜಿಲ್ಲೆಯ ಸುರತ್ಕಲ್ ನ ಆಸ್ಪತ್ರೆಯೊಂದರ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 8 ಮಂದಿ ಅಕ್ರಮ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದುಕೊಂಡು ವಿಚಾರಣೆಯ ಬಳಿಕ ಬಂಧಿಸಿದ್ದಾರೆ.ಇವರೆಲ್ಲರೂ ಮೂರು ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಮೂಲಕ ಭಾರತಕ್ಕೆ ಬಂದು ನಂತರ ಅಲ್ಲಿನ ವಿಳಾಸದಲ್ಲಿದ್ದವರ ಆಧಾರ್‌ ಕಾರ್ಡ್‌ಗಳಿಗೆ ಅವರ ಭಾವಚಿತ್ರ ಅಂಟಿಸಿ ಕಲರ್‌ ಜೆರಾಕ್ಸ್‌ ಪಡೆದುಕೊಂಡು ಎರಡು ತಿಂಗಳಿನಿಂದ ಮುಕ್ಕದಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್‌ […]

ಸುರತ್ಕಲ್ : 8 ಮಂದಿ ಅಕ್ರಮ ಬಾಂಗ್ಲಾ ದೇಶದ ಪ್ರಜೆಗಳು ಪತ್ತೆ! Read More »

ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿದ ವಿಕೃತ ಕಾಮಿ ಕಂಡೆಕ್ಟರ್ !

ಬಸ್ಸಿನ ಕಂಡೆಕ್ಟರ್ ಓರ್ವನು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್‌ನ ಕಂಡಕ್ಟರ್ ಇರ್ಫಾನ್ (32) ಕಾಲೇಜು ವಿದ್ಯಾರ್ಥಿನಿಯರಿಗೆ ಚಲಿಸುವ ಬಸ್‌ನಲ್ಲೇ ಲೈಂಗಿಕ ಕಿರುಕುಳ, ಅಸಭ್ಯ ಸನ್ನೆ ಹಾಗೂ ಗುಪ್ತಾಂಗ ಪ್ರದರ್ಶನ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯರ ದೂರಿನ ಮೇರೆಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸರು ಪ್ರಕರಣ ದಾಖಲಿಸಿ, ಜುಲೈ 10ರಂದು ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನ‌ರ್

ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿದ ವಿಕೃತ ಕಾಮಿ ಕಂಡೆಕ್ಟರ್ ! Read More »

ಮರ್ಕಂಜ : ಪಾಲದಿಂದ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವು

ಸುಳ್ಯ ತಾಲೂಕಿನ ಮರ್ಕಂಜದಲ್ಲಿ ತೋಟದ ಪಾಲದಿಂದ ಬಿದ್ದು ಮೃತಪಟ್ಟ ಘಟನೆ ಮರ್ಕಂಜದ ಜೋಗಿಮೂಲೆಯಿಂದ ವರದಿಯಾಗಿದೆ.ಮರ್ಕಂಜ ಜೋಗಿಮೂಲೆ ನಿವಾಸಿ ಚಂದ್ರಶೇಖರ (64 ವರ್ಷ) ಎಂಬವರೇ ಮೃತಪಟ್ಟ ವ್ಯಕ್ತಿ.ಜು. 8ರಂದು ಮನೆಯಿಂದ ತೆರಳಿದ್ದ ಚಂದ್ರಶೇಖರರವರು ಮನೆಗೆ ಹಿಂತಿರುಗುವಾಗ ತೋಟದ ಪಾಲದಿಂದ ಬಿದ್ದು ಮೃತಪಟ್ಟಿದ್ದರು.ಚಂದ್ರಶೇಖರರವರು ಹಿಂದುರುಗಿ ಬಾರದ ಕಾರಣ ಮನೆಯವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಇಂದು ಸಂಜೆಯ ವೇಳೆಗೆ ಅವರ ಮಗ ಅದೇ ದಾರಿಯಾಗಿ ಹೋಗುತ್ತಿದ್ದಾಗ ಚಂದ್ರಶೇಖರ ಶವ ತೋಡಿನಲ್ಲಿ ಬಿದ್ದಿರುವುದು ಕಂಡು‌ ಬಂತು‌. ಇದೀಗ ಮೃತದೇಹವನ್ನು

ಮರ್ಕಂಜ : ಪಾಲದಿಂದ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವು Read More »

ಕಡಬ : ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಸೀತಾರಾಮ ಗೌಡ ರಸ್ತೆ ಅಪಘಾತಕ್ಕೆ ಬಲಿ

ಜಮ್ಮುವಿನಲ್ಲಿ ದೇಶದ ಭದ್ರತಾ ಸೇವೆಯಲ್ಲಿದ್ದ ಕಡಬ ತಾಲೂಕಿನ ಯೋಧನೊಬ್ಬ ರಜೆಯಲ್ಲಿ ಊರಿಗೆ ಬಂದಿದ್ದ ಸಂದರ್ಭದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆ ನಿವಾಸಿಯಾದ, ಸಿಐಎಸ್ಎಫ್ ಯೋಧ ಸೀತಾರಾಮ ಗೌಡರು ಮಂಗಳೂರಿನ ಕೆಪಿಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದ ಯೋಧರಾಗಿದ್ದಾರೆ.ಮಂಗಳೂರು ನಗರದ ಟ್ರಾಫಿಕ್ ಈಸ್ಟ್ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.CISF ನಲ್ಲಿ ಸೇವೆ ಸಲ್ಲಿಸುತ್ತಿರುವ ಸೀತಾರಾಮ ಗೌಡರವರು ಪ್ರಸ್ತುತ ಜಮ್ಮುವಿನ ಸೆಂಟ್ರಲ್ ಜೈಲ್‌ನಲ್ಲಿ ಕರ್ತವ್ಯ

ಕಡಬ : ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಸೀತಾರಾಮ ಗೌಡ ರಸ್ತೆ ಅಪಘಾತಕ್ಕೆ ಬಲಿ Read More »

ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ನಿಧನ

ಸುಳ್ಯ ನಿವಾಸಿ ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ(76 ವರ್ಷ) ಜೂ.7ರಂದು ಮುಂಜಾನೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಗಿರೀಶ್‌ ಭಾರದ್ವಾಜರು ಕೆಲ ದಿನಗಳ ಹಿಂದೆ ಉತ್ತರ ಕಾಂಡದ ದೇವಸ್ಥಾನದಲ್ಲಿ ಗಳಿಗೆ ಹೋಗಿ ಬಂದಿದ್ದರು.ಬಳಿಕಅಸೌಖ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ನಿಧನರಾದರು.

ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ನಿಧನ Read More »

ಅರಂತೋಡು : ವಿದ್ಯಾರ್ಥಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಗಾಯ

ರಸ್ತೆ ದಾಟುತ್ತಿದ್ದಾಗ ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಯೋರ್ವನಿಗೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿ ಗಾಯಗೊಂಡ ಘಟನೆ ಜು. 4 ರಂದು ಅರಂತೋಡಿನಿಂದ ವರದಿಯಾಗಿದೆ.ಆಟೋ ರಿಕ್ಷಾ ಡಿಕ್ಕಿ ಹೊಡೆದು ಗಾಯಗೊಂಡ ವಿದ್ಯಾರ್ಥಿಯನ್ನು ಸಚಿನ್ ಎಂದು ಗುರುತಿಸಲಾಗಿದ್ದುಅರಂಬೂರು ನಿವಾಸಿಯಾಗಿದ್ದಾನೆ.ಡಿಕ್ಕಿಯಾದ ರಭಸಕ್ಕೆ ವಿದ್ಯಾರ್ಥಿಯ ತಲೆಗೆ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಆತನನ್ನು ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಅರಂತೋಡು : ವಿದ್ಯಾರ್ಥಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಗಾಯ Read More »

ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಸಾವು

ಸಂಪಾಜೆಯ ಆಲಡ್ಕ ಸಮೀಪ ಮನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜೂ.2ರಂದು ವರದಿಯಾಗಿದೆ.ಮೃತ ವ್ಯಕ್ತಿಯನ್ನು ಕಾಸರಗೋಡು ಮೂಲದ ಜೋಸ್ ಮ್ಯಾಥ್ಯ ಎಂದು ತಿಳಿದು ಬಂದಿದೆ. ಸಂಪಾಜೆ ಭಾಗದಲ್ಲಿ ತೋಟ ಲೀಸ್ ಗೆ ಪಡೆದು ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆನ್ನಲಾಗಿದೆ . ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಹೊರಠಾಣಾ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಸಾವು Read More »

ಅರಂತೋಡು : ಕುರುಂಜಿ‌ ತಂಗಮ ನಿಧನ

ಅರಂತೋಡು ಗ್ರಾಮದ ಅಂಗಡಿಮಜಲು ಬಳಿಯ ಕುರುಂಜಿ ಬೆಳ್ಯಪ್ಪ ಗೌಡರ ಪತ್ನಿ ತಂಗಮ್ಮ (92 ವರ್ಷ)ರವರು ಜೂ. 28ರಂದು ಸ್ವಗ್ರಹದಲ್ಲಿ ನಿಧನರಾದರು.ಮೃತರು ಪುತ್ರರಾದ ರಾಮಮೋಹನ್ ಕುರುಂಜಿ, ದಯಾನಂದ ಕುರುಂಜಿ, ಪುತ್ರಿ ಕುಸುಮಾ ಸಂಜೀವ ಮಾಳ ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಬಂಧುಗಖು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಅರಂತೋಡು : ಕುರುಂಜಿ‌ ತಂಗಮ ನಿಧನ Read More »

ಮುರುಳ್ಯ : ಆಟವಾಡುತ್ತಿದ್ದಾಗ ಇಬ್ಬರು ಮಕ್ಕಳು ಕೆರೆಗೆ ಬಿದ್ದು ಸಾವು

ಸುಳ್ಯ ಸಮೀಪದ ಮುರುಳ್ಯ ಗ್ರಾಮದ ಕಡೀರದಲ್ಲಿ ಮನೆಯ ಸಮೀಪದ ಕೆರೆಗೆ ಬಿದ್ದು ಇಬ್ಬರು ಅವಳಿ ಮಕ್ಕಳು ಮೃತಪಟ್ಟ ಘಟನೆ ಜೂ.20ರಂದು ವರದಿಯಾಗಿದೆ.ಕಡೀರ ನಿವಾಸಿ ವೆಲ್ಡಿಂಗ್ ಕೆಲಸಮಾಡುವ ವಸಂತ ಎಂಬವರ ಮಕ್ಕಳಾದ ಯಶ್ವಿನ್ ಹಾಗೂ ಜಶ್ವಿನ್ ಮೃತರು ಎಂದು ತಿಳಿದು ಬಂದಿದೆ. ಮಕ್ಕಳು ಆಟ ವಾಡುತ್ತಿದ್ದಾಗ ಮನೆ ಸಮೀಪ ಬಿದ್ದರೆಂದೂ ತಿಳಿದು ಬಂದಿದೆ. ಇದೀಗ ಮೃತದೇಹ ಮೇಲೆತ್ತಿರುವುದಾಗಿ ತಿಳಿದುಬಂದಿದೆ.

ಮುರುಳ್ಯ : ಆಟವಾಡುತ್ತಿದ್ದಾಗ ಇಬ್ಬರು ಮಕ್ಕಳು ಕೆರೆಗೆ ಬಿದ್ದು ಸಾವು Read More »

ದೇವರಕೊಲ್ಲಿ : ಅಪಘಾತದಲ್ಲಿ ಗಾಯಗೊಂಡ ಪೋಲಿಸ್ ಸಿಬ್ಬಂದಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು

ಸುಳ್ಯ : ಸಂಪಾಜೆ ಸಮೀಪದ ದೇವರಕೊಲ್ಲಿಯಲ್ಲಿ ಜೂ.17ರಂದು ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿ ಗಾಯಗೊಂಡ ಸಂಪಾಜೆ ಹೊರ’ಠಾಣೆಯ ಪೋಲಿಸ್ ಸಿಬ್ಬಂದಿಯನ್ನು‌ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೈಕ್ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಪೋಲಿಸ್ ಸಿಬ್ಬಂದಿಯನ್ನು ವಿಖ್ಯಾತ್ ಎಂದು ಗುರುತಿಸಲಾಗಿದೆ.ಮಡಿಕೇರಿಯಿಂದ ಕಲ್ಲುಗುಂಡಿ ಕಡೆ ಹೋಮ್ ಗಾರ್ಡ್ ಗಿರೀಧರ ಅವರೊಂದಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿ ವಿಖ್ಯಾತರ ಕೈಗೆ ಗಂಭೀರ ಗಾಯವಾಗಿತ್ತು.ಹೋಮ್ ಗಾರ್ಡ್ ಗಿರೀಧರ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ‌.

ದೇವರಕೊಲ್ಲಿ : ಅಪಘಾತದಲ್ಲಿ ಗಾಯಗೊಂಡ ಪೋಲಿಸ್ ಸಿಬ್ಬಂದಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು Read More »

error: Content is protected !!
Scroll to Top